ಪುತ್ತಿಗೆ: ಎಲ್ಲಾ ಕೃಷಿಕರ ವಿದ್ಯುತ್ ಬಿಲ್ ಕೃಷಿ ಭವನ ಪಾವತಿಸಬೇಕು-ಕಿಸಾನ್ ಸೇನೆ

ಸೀತಾಂಗೋಳಿ: ಪುತ್ತಿಗೆ ಕೃಷಿ ಭವನ ವ್ಯಾಪ್ತಿಯಲ್ಲಿರುವ 300ಕ್ಕೂ ಹೆಚ್ಚು ಕೃಷಿಕರ ನೀರಾವರಿ ಮೋಟಾರ್ ಬಿಲ್ ಕೃಷಿ ಭವನ ಪಾವತಿಸದಿರುವುದರಿಂದ ನಾಲ್ಕು ವರ್ಷದ ಮೊತ್ತವಾಗಿ 30 ಸಾವಿರ ದಿಂದ 70 ಸಾವಿರ ರೂಪಾಯವರೆಗೆ ಉಳಿದುಕೊಂಡಿದೆ. ಈ ಕಾರಣದಿಂದ ವಿದ್ಯುತ್ ಬಿಲ್ ಪಾವತಿಸಲಿರುವ ಕೃಷಿಕರ ವಿದ್ಯುತ್ ಸಂಪರ್ಕವನ್ನು ವಿಚ್ಛೇಧಿಸುವುದಾಗಿ ಕೆಎಸ್‌ಇಬಿ ಬೆದರಿಕೆಯೊಡ್ಡುತ್ತಿದೆ ಯೆಂದು ಪುತ್ತಿಗೆ ಪಂಚಾಯತ್ ಕಿಸಾನ್ ಸೇನೆ  ಆರೋಪಿಸಿದೆ.

ಭಾರೀ ಹೆಚ್ಚಿನ ಮೊತ್ತವಾದು ದರಿಂದ ಅದನ್ನು ಪಾವತಿಸಲಾಗದೆ ಕೃಷಿಕರು ಸಂದಿಗ್ಧತೆಯನ್ನು ಎದುರಿಸುತ್ತಿದ್ದಾರೆ.  ಕಂಗು ಕೃಷಿಗೆ ಬಾಧಿಸಿದ ಅಜ್ಞಾತ ರೋಗದಿಂದಾಗಿ ೮೦ ಶೇಕಡಾದಷ್ಟು ಬೆಳೆ ನಷ್ಟಗೊಂಡಿರುತ್ತದೆ. ಆದ್ದರಿಂದ ಕೃಷಿಕರು ವಿದ್ಯುತ್ ಇಲಾಖೆಗೆ ಪಾವತಿಸಲಿರುವ ಎಲ್ಲಾ ಮೊತ್ತವನ್ನು ಕೃಷಿ ಭವನ ಪಾವತಿಸಬೇಕೆಂದು ಕಿಸಾನ್ ಸೇನೆ ಒತ್ತಾಯಿಸಿದೆ.

ರೋಗ ಬಾಧಿಸಿ ನಾಶಗೊಂಡ ಕಂಗು ಕೃಷಿಗೆ ಪಂಚಾಯತ್‌ನಿಂದ ಫಂಡ್  ಬಳಸಿ ಔಷಧಿ ಸಿಂಪಡಿಸಬೇಕು. ಕೃಷಿಕರ ವಿರುದ್ಧ ಕೃಷಿ ಇಲಾಖೆ ತೋರಿಸುವ ಅವಗಣನೆ ಯನ್ನು ಸಭೆ ತೀವ್ರವಾಗಿ ಪ್ರತಿಭಟಿ ಸಿದೆ. ಕೃಷಿಕರ ಸಮಸ್ಯೆಗೆ ತುರ್ತಾಗಿ ಪರಿಹಾರ ಕಾಣಬೇಕೆಂದೂ ಇಲ್ಲದಿ ದ್ದಲ್ಲಿ ಚಳವಳಿಗೆ ರೂಪು ನೀಡಬೇಕಾಗಿ ಬರಲಿದೆಯೆಂದು ಸಭೆ ತಿಳಿಸಿದೆ.

ಕಿಸಾನ್ ಸೇನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶುಕೂರ್ ಕಾಣಾಜೆ ಉದ್ಘಾಟಿಸಿದರು. ಸುರೇಶ್ ಅಡ್ಕತ್ತೊಟ್ಟಿ ಅಧ್ಯಕ್ಷತೆ ವಹಿಸಿದರು.  ಮುಹಮ್ಮದ್ ಹಾಜಿ ಕಂಡತ್ತಿಲ್, ಪ್ರಸಾದ್ ಕಕ್ಕೆಪ್ಪಾಡಿ, ಎಂ. ಇಸ್ಮಾ ಯಿಲ್ ಹಾಜಿ ಮಾತನಾಡಿದರು. ಬಾಲಸುಬ್ರಹ್ಮಣ್ಯ ಭಟ್ ಚಕ್ಕಣಿಕೆ ಸ್ವಾಗತಿಸಿ, ಸೀತಾರಾಮ ಮಾಣಬೈಲು ವಂದಿಸಿದರು.

ನೂತನ ಪದಾಧಕಾರಿಗಳನ್ನು ಆರಿಸಲಾಯಿತು. ಅಧ್ಯಕ್ಷರಾಗಿ ಬಾಲಸುಬ್ರಹ್ಮಣ್ಯ ಭಟ್ ಚಕ್ಕಣಿಕೆ, ಉಪಾಧ್ಯಕ್ಷರಾಗಿ ಅಬ್ದುಲ್ಲ ಕಂಡತ್ತಿಲ್, ಸೀತಾರಾಮ ಮಾಣಬೈಲು, ಪ್ರಧಾನ ಕಾರ್ಯದರ್ಶಿಯಾಗಿ ಸುರೇಶ್ ಅಡ್ಕತ್ತೊಟ್ಟಿ, ಜತೆ ಕಾರ್ಯದರ್ಶಿ ಯಾಗಿ ಪ್ರಸಾದ್ ಕಕ್ಕೆಪ್ಪಾಡಿ, ಕೃಷ್ಣ ಅಡ್ಕತ್ತೊಟ್ಟಿ, ಕೋಶಾಧಿಕಾರಿಯಾಗಿ ಅಹಮ್ಮದ್ ಅಲಿ ಕಾಣಾಜೆ ಆಯ್ಕೆಗೊಂಡರು.

Leave a Reply

Your email address will not be published. Required fields are marked *

You cannot copy content of this page