ಪುಳಿಕುತ್ತಿ ದೈವಸ್ಥಾನದಲ್ಲಿ ವಾರ್ಷಿಕ ನೇಮೋತ್ಸವ: ಆಮಂತ್ರಣ ಪತ್ರಿಕೆ ಬಿಡುಗಡೆ
ಮಂಗಲ್ಪಾಡಿ: ಪುಳಿಕುತ್ತಿ ಐಲ ಬ್ರಹ್ಮಶ್ರೀ ಮುಗೇರ ಮಹಾಕಾಳಿ ಪರಿವಾರ ದೈವಗಳಾದ ಗುಳಿಗ, ಕೊರಗತನಿಯ, ಅಣ್ಣಪ್ಪ ಪಂಜುರ್ಲಿ, ಕಲ್ಲುರ್ಟಿ ಮತ್ತು ಕೊರತಿ ದೈವಗಳ ವಾರ್ಷಿಕ ನೇಮೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ನಿನ್ನೆ ಸಂಜೆ ದೈವಸ್ಥಾನದ ವಠಾರದಲ್ಲಿ ನಡೆ
ಯಿತು,
ಧಾರ್ಮಿಕ ಮುಂದಾಳು ಎಂ ಕೆ ಅಶೋಕ್ ಕುಮಾರ್ ಹೊಳ್ಳ, ಮೋಹನ ಪೂಜಾರಿ, ವಸಂತ ಕುಮಾರ್ ಮಯ್ಯ, ದೇವದಾಸ, ಅಶೋಕ್ ಆಚಾರಿ, ಬಾಲಕೃಷ್ಣ ರೈ,ಕೇಶವ, ಶೇಷಪ್ಪ, ವಿಜಯಲಕ್ಷ್ಮಿ ರೈ, ಭಾಸ್ಕರ ಸಿ, ಹಾಗೂ ದೈವಸ್ಥಾನದ ಗುರಿಕಾರರಾದ ರಾಮಕೃಷ್ಣ, ಸಮಿತಿಯ ಪಧಾಧಿಕಾರಿಗಳು, ತನ್ನಿಮಾನಿಗ ಮಹಿಳಾ ಸಂಘದ ಸದಸ್ಯೆಯರು ಸಹಿತ ಹಲವರು ಉಪಸ್ಥಿತರಿದ್ದರು.