ಪೆರಡಾಲ ಕ್ಷೇತ್ರ ರಸ್ತೆ ಸ್ಥಿತಿ ಶೋಚನೀಯ: ದುರಸ್ತಿಗೆ ಸ್ಥಳೀಯರ ಆಗ್ರಹ
ಬದಿಯಡ್ಕ: ಮಳೆಯಾವಾಗ ಬರುತ್ತದೆ ಎಂಬ ನಿರೀಕ್ಷೆಯಲ್ಲಿ ಜನರಿರುವಾಗ ಮಳೆ ಬಂದರೆ ಸಂಚಾರ ಹೇಗೆ ಎಂಬ ಆತಂಕದಲ್ಲಿ ಪೆರಡಾಲ ಪರಿಸರ ನಿವಾಸಿಗಳಿದ್ದಾರೆ. ಚೆರ್ಕಳ- ಬದಿಯಡ್ಕ ರಸ್ತೆಯಿಂದ ಪೆರಡಾಲ ಕ್ಷೇತ್ರಕ್ಕೆ ಸಾಗುವ ರಸ್ತೆಯ ಶೋಚನೀಯ ಸ್ಥಿತಿಯೇ ಇಲ್ಲಿನವರಿಗೆ ಈ ರೀತಿಯ ಚಿಂತೆಗೆ ಕಾರಣ ಪಂ.ನ 14ನೇ ವಾರ್ಡ್ ಪಟ್ಟಾಜೆ ವ್ಯಾಪ್ತಿಯ ಈ ರಸ್ತೆಯಲ್ಲಿ ಡಾಮರು ಜಲ್ಲಿ ಕಲ್ಲುಗಳು ಎದ್ದು ಹೋಗಿ ಹೊಂಡ ಗುಂಡಿಗಳು ತುಂಬಿಕೊಂ ಡಿದ್ದು, ಈಗ ವಾಹನ ಸಂಚಾರ ವೇಳೆ ಧೂಳಿನ ಅಭಿಷೇಕ ಉಂಟಾಗುತ್ತಿದೆ. ಮುಂದೆ ಮಳೆ ಸಂದರ್ಭದಲ್ಲಿ ಕೆಸರು ನೀರಿನ ಎರಚಾಟವಾಗಿ ಪರಿಣಮಿಸಲಿದೆ. ಅಂತಾರಾಜ್ಯ ಹೆದ್ದಾರಿಯಿಂದ ಕೇವಲ ಅರ್ಧ ಕಿಲೋ ಮೀಟರ್ನಷ್ಟು ದೂರದ ರಸ್ತೆಯಲ್ಲಿ ಸಣ್ಣದೊಂದು ಸೇತುವೆ ಕೂಡಾ ಇದೆ. ಇದು ಶೋಚ ನೀಯ ಸ್ಥಿತಿಯಲ್ಲಿದ್ದು, ಡಾಮರು, ಕಾಂ ಕ್ರೀಟ್ ಎದ್ದು ಹೊಂಡ ಸೃಷ್ಟಿಯಾಗಿದೆ.
ಪೆರಡಾಲ ಕ್ಷೇತ್ರಕ್ಕೆ ಸುಲಭದಲ್ಲಿ ತಲುಪುವ ರಸ್ತೆ ಇದಾಗಿದ್ದು, ದಿನವೂ ಈ ಹಲವಾರು ವಾಹನಗಳು ಈ ರಸ್ತೆ ಮೂಲಕ ಸಂಚರಿಸುತ್ತಿವೆ. ಮುಂದಿನ ವರ್ಷ ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶ ನಡೆಯುವ ಸಾಧ್ಯತೆ ನಡೆಸಲಾಗುತ್ತಿದ್ದು, ಈ ವೇಳೆ ಈ ರಸ್ತೆಯ ಶೋಚನೀಯ ಸ್ಥಿತಿ ಸಮಸ್ಯೆ ಉಂಟುಮಾಡಲಿದೆ. ಮಳೆ ಸುರಿದು ರಸ್ತೆಯಲ್ಲಿಯೇ ನೀರು ಹರಿಯಲು ಸಾಧ್ಯತೆ ಇದ್ದು, ಸೂಕ್ತ ಚರಂಡಿ ನಿರ್ಮಿಸಿ, ರಸ್ತೆಯನ್ನು ಶೀಘ್ರ ದುರಸ್ತಿ ಗೊಳಿಸಲು ಸ್ಥಳೀಯರು ಆಗ್ರಹಿಸಿದ್ದಾರೆ. ಹೆದ್ದಾರಿಗಳು ಹಾಗೂ ಪ್ರಧಾನ ರಸ್ತೆ ಗಳೆಲ್ಲಾ ಸಂಚಾರಯೋಗ್ಯಗೊಳ್ಳುತ್ತಿ ರುವಾಗ ಒಳ ರಸ್ತೆಗಳನ್ನು ಗಮನಿಸದೆ ಇರುವುದು ಸರಿಯಲ್ಲವೆಂದೂ ಸ್ಥಳಿಯರು ತಿಳಿಸುತ್ತಾರೆ.