ಪೆರಿಯಾಟಡ್ಕದ ಯುವ ಜ್ಯೋತಿಷಿ ನೇಣು

ಪೆರಿಯ:  ಪೆರಿಯಾಟಡ್ಕದ ಯುವ ಜ್ಯೋತಿಷಿ ನೇಣುಬಿಗಿದು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಹಚ್ಚಲಾ ಗಿದ್ದಾರೆ. ಪೆರಿಯಾಟಡ್ಕದ  ಸುಕುಮಾರನ್-ಪುಷ್ಪಾ ದಂಪತಿ ಪುತ್ರ ಬಿಕೇಶ್ (27) ಆತ್ಮಹತ್ಯೆಗೈದವರು. ಇಂದು ಮುಂಜಾನೆ ಮಲಗುವ ಕೊಠಡಿಯಲ್ಲಿ  ನೇಣುಬಿಗಿದಸ್ಥಿತಿ ಯಲ್ಲಿ ಮೃತದೇಹ ಪತ್ತೆಹಚ್ಚಲಾಗಿದೆ. ಆತ್ಮಹತ್ಯೆಗೆ ಕಾರಣವೇನೆಂದು ಸ್ಪಷ್ಟವಾಗಿಲ್ಲ. ಬೇಕಲ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಮೃತದೇಹವನ್ನು ಜಿಲ್ಲಾ ಆಸ್ಪತ್ರೆಯ ಶವಾಗಾವರದಲ್ಲಿರಿಸಲಾಗಿದೆ.

You cannot copy contents of this page