ಪೆರ್ಲದಲ್ಲಿ ಅಬಕಾರಿ ತಂಡದ ಕಾರ್ಯಾಚರಣೆ ದಾಖಲು ಪತ್ರಗಳಿಲ್ಲದೆ ಸಾಗಿಸಲಾಗುತ್ತಿದ್ದ 10 ಕಿಲೋ ಬೆಳ್ಳಿ ಆಭರಣ ಪತ್ತೆ, ಓರ್ವ ಕಸ್ಚಡಿಗೆ

ಪೆರ್ಲ: ಅಕ್ರಮ ಮದ್ಯ ಸಾಗಾಟದ ವಿರುದ್ಧ ಅಬಕಾರಿ ತಂಡ ಆರಂಭಿಸಿರುವ ಆಪರೇಷನ್ ಕ್ಲೀನ್ ಸ್ಲೇಟ್ ಕಾರ್ಯಾ ಚರಣೆಯಂತೆ ಪೆರ್ಲ ಅಬಕಾರಿ ತಪಾ ಸಣಾ ಕೇಂದ್ರದಲ್ಲಿ  ನಡೆಸಿದ ವಾಹನ ತಪಾಸಣೆಯಲ್ಲಿ ಸರಿಯಾದ ದಾಖಲುಪತ್ರಗಳಿಲ್ಲದೆ ಬಸ್ಸೊಂದರಲ್ಲಿ  ಕಾಸರಗೋಡಿನತ್ತ ಸಾಗಿಸುತ್ತಿದ್ದ 10 ಕಿಲೋ ಬೆಳ್ಳಿ ಆಭರಣಗಳನ್ನು ಪತ್ತೆಹಚ್ಚಿ ವಶಪಡಿಸಿಕೊಂಡಿದೆ.

ಇದಕ್ಕೆ ಸಂಬಂಧಿಸಿ ಕರ್ನಾಟಕ ನಿವಾಸಿ ಸತೀಶ್ ಆರ್. (45) ಎಂಬಾ ತನನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಅಬಕಾರಿ ಇಲಾಖೆಯ ಕೆಮು ವಿಭಾಗದ ಪ್ರಿವೆಂಟಿವ್ ಆಫೀಸರ್ ಎ.ಬಿ. ಅಬ್ದುಲ್ಲರ ನೇತೃತ್ವದ ಅಬಕಾರಿ ತಂಡ ನಿನ್ನೆ ಸಂಜೆ 3.45 ಕ್ಕೆ ಈ ಕಾರ್ಯಾಚರಣೆ ನಡೆಸಿದೆ.

ವಶಪಡಿಸಲಾದ ಬೆಳ್ಳಿ ಮತ್ತು ಕಸ್ಟಡಿಗೊಳಗಾದ ಸತೀಶ್‌ನನ್ನು ಅಬಕಾರಿ ಅಧಿಕಾರಿಗಳು ಬಳಿಕ ಮುಂದಿನ ಕಾನೂನು ಕ್ರಮಗಳಿಗಾಗಿ ಸರಕು ಸೇವಾ ತೆರಿಗೆ (ಜಿಎಸ್‌ಟಿ) ವಿಭಾಗಕ್ಕೆ ಹಸ್ತಾಂತರಿಸಿದ್ದಾರೆ. ಈ ಕಾರ್ಯಾಚರಣೆ ನಡೆಸಿದ ಅಬಕಾರಿ ತಂಡದಲ್ಲಿ ಪ್ರಿವೆಂಟಿವ್ ಆಫೀಸರ್ ಗಳಾದ ಎಂ.ವಿ. ಜಿಜಿನ್, ಸಾಬು ಕೆ, ಸಿವಿಲ್ ಎಕ್ಸೈಸ್ ಆಫೀಸರ್ ಸುಬಿನ್, ಪಿಲಿಫ್ ಎಂಬವರು ಒಳಗೊಂಡಿದ್ದರು.

Leave a Reply

Your email address will not be published. Required fields are marked *

You cannot copy content of this page