ಪೆರ್ಲದ ಐಶ್ವರ್ಯ ಟ್ರೇಡಿಂಗ್ ಮಾಲಕ ನಾಪತ್ತೆ
ಪೆರ್ಲ: ಪೆರ್ಲ ನಿವಾಸಿ ಮಾಲಿಂಗ ಪಾಟಾಳಿಯವರ ಪುತ್ರ, ಪೇಟೆಯಲ್ಲಿ ವ್ಯಾಪಾರ ಸಂಸ್ಥೆ ಹೊಂದಿರುವ ವಿವೇಕಾನಂದ (41) ನಾಪತ್ತೆಯಾದ ಬಗ್ಗೆ ದೂರಲಾಗಿದೆ. ಈ ತಿಂಗಳ 13ರಂದು ಬೆಳಿಗ್ಗೆ ಮನೆಯಿಂದ ಅಂಗಡಿ ಗೆಂದು ತೆರಳಿದ್ದ ಇವರು ಆ ಬಳಿಕ ಹಿಂತಿರುಗಿಲ್ಲವೆಂದು ಪತ್ನಿ ಸುನಿತಾ ಬದಿಯಡ್ಕ ಪೊಲೀಸರಿಗೆ ದೂರು ನೀಡಿದ್ದಾರೆ. 14ರಂದು ಬೆಳಿಗ್ಗೆ ಪತ್ನಿಗೆ ಕರೆ ಮಾಡಿ ನಾನು ಗೋವಾಗೆ ತೆರಳುತ್ತಿದ್ದೇನೆ ಎಂದು ತಿಳಿಸಿರುವುದಾಗಿಯೂ, ಆದರೆ ಗೋವಾದಲ್ಲಿರುವ ಸಂಬಂಧಿಕರ ಮನೆಗೆ ತಲುಪಿಲ್ಲವೆಂದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ದೂರು ನೀಡಲಾಗಿದೆ. ಇವರು ಎರಡು ಮೊಬೈಲ್ ಫೋನ್ ಉಪಯೋಗಿಸುತ್ತಿದ್ದು, ಒಂದು ಅಂಗಡಿಯಲ್ಲೂ, ಇನ್ನೊಂದು ಮನೆಯಲ್ಲೂ ಕಂಡು ಬಂದಿದೆ. ಅಪರಿಚಿತ ನಂಬ್ರದಿಂದ ಇವರು ಪತ್ನಿಗೆ ಕರೆ ಮಾಡಿದ್ದು, ಈ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. ಪೆರ್ಲ ಕೆಕೆ ರೋಡ್ನಲ್ಲಿರುವ ಐಶ್ವರ್ಯ ಎಂಬ ವ್ಯಾಪಾರಿ ಸಂಸ್ಥೆಯನ್ನು ಇವರು ಹೊಂದಿದ್ದಾರೆ.