ಬಿಸಿ ತಾಳಲಾಗದೆ ಎಸಿ ಆನ್‌ಮಾಡಿ ಕಾರಿನೊಳಗೆ ವಿಶ್ರಾಂತಿ ಪಡೆಯುತ್ತಿದ್ದ ಯುವಕ ಮೃತ್ಯು

ಆಲಪ್ಪುಳ: ಕಾರಿನ ಎಸಿಯನ್ನು ಆನ್‌ಮಾಡಿ ಅದರೊಳಗೆ ವಿಶ್ರಾಂತಿ ಪಡೆಯುತ್ತಿದ್ದ ಯುವಕ ಮೃತಪಟ್ಟ ಘಟನೆ ನಡೆದಿದೆ. ಕರುವಾಟ ಊಟುಪರಂಬ್ ಪುತ್ತನ್‌ನಿಗತ್ ನಿವಾಸಿ ಮಣಿಯಾನ್‌ರ ಪುತ್ರ ಅನೀಶ್ (37) ಮೃತಪಟ್ಟವರು. ನಿನ್ನೆ ಅಪರಾಹ್ನ 3 ಗಂಟೆಗೆ ಘಟನೆ ನಡೆದಿದೆ. ಬಿಸಿಯನ್ನು ತಾಳಲಾಗದ ಹಿನ್ನೆಲೆಯಲ್ಲಿ ಮನೆ ಮುಂಭಾಗದಲ್ಲಿ ನಿಲ್ಲಿಸಿದ್ದ ಕಾರಿನ ಎಸಿ ಆನ್ ಮಾಡಿ ಅದರೊಳಗೆ ಅನೀಶ್ ವಿಶ್ರಾಂತಿ ಪಡೆಯುತ್ತಿದ್ದರು. ಈ ವೇಳೆ ಆಹಾರ ಸೇವಿಸಲು ತಲುಪದ ಹಿನ್ನೆಲೆಯಲ್ಲಿ ಪತ್ನಿ ಹುಡುಕಿ ಬಂದಾಗ ಕಾರಿನೊಳಗೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಅನೀಶ್ ಕಂಡು ಬಂದಿದ್ದಾರೆ. ಕೂಡಲೇ ಸ್ಥಳೀಯ ಆಸ್ಪತ್ರೆಗೆ ತಲುಪಿಸಿದರೂ ಆ ವೇಳೆ ಮೃತಪಟ್ಟಿದ್ದಾರೆ. ಕಾರಿನೊಳಗೆ ನಿದ್ದೆ ಮಾಡುತ್ತಿದ್ದ ಸಂದರ್ಭದಲ್ಲಿ ಇಂಜಿನ್ ಆಫ್ ಮಾಡಿರಬೇಕೆಂದು ಶಂಕಿಸಲಾಗುತ್ತಿದೆ. ಇದರಿಂದ ಕಾರಿನೊಳಗೆ ವಿಷಗಾಳಿ ತುಂಬಿಕೊಂಡಿರುವುದೇ ಸಾವಿಗೆ ಕಾರಣವೆಂದು ಶಂಕಿಸಲಾಗಿದೆ.

ಪೋಸ್ಟ್‌ಮಾರ್ಟಂ ಬಳಿಕ ವಷ್ಟೇ ಸಾವಿಗೆ ಕಾರಣ ಸ್ಪಷ್ಟವಾ ಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತದೇಹವನ್ನು ಹರಿಪ್ಪಾಡ್ ತಾಲೂಕು ಆಸ್ಪತ್ರೆ ಮೋರ್ಚರಿಯಲ್ಲಿರಿಸಲಾಗಿದೆ. ಮೃತ ಅನೀಶ್ ತಾಯಿ ಆಯಿಷಾ ಬಿ.ವಿ, ಪತ್ನಿ ದೇವಿಕ, ಪುತ್ರ ಶಿವದತ್, ಸಹೋದರ ಅಜೀಶ್, ಸಹೋದರಿ ಸೋಫಿಯಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

You cannot copy content of this page