ಬೀಗ ಜಡಿದ ಮನೆಯಿಂದ ೨ ಲಕ್ಷ ರೂ. ಕಳವು: ಬೆರಳಚ್ಚು ತಜ್ಞರಿಂದ ತನಿಖೆ

ಮಂಜೇಶ್ವರ: ಬೀಗ ಜಡಿದ ಮನೆಯ ಕಪಾಟಿನಲ್ಲಿರಿಸಿದ್ದ ೨ ಲಕ್ಷ ರೂಪಾಯಿ ಕಳವಿಗೀಡಾದ ಘಟನೆ ನಡೆದಿದೆ. ಮೊರತ್ತಣೆ ಬಳಿಯ ಅರಿಂಗಳ ನಿವಾಸಿ ನಾರಾಯಣ ಎಂಬವರ ಮನೆ ಯಿಂದ ಹಣ ಕಳವಿಗೀಡಾಗಿರುವುದಾಗಿ ದೂರಲಾಗಿದೆ.

ನಾರಾಯಣ ಹೊಸಂಗಡಿಯಲ್ಲಿ ಟೈಲರ್ ಆಗಿದ್ದು, ಪತ್ನಿ ಖಾಸಗಿ ಸಂಸ್ಥೆ ಯೊಂದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಒಂದು ವಾರ ಹಿಂದೆ ಇವರು ಮನೆಯ ಕಪಾಟಿನಲ್ಲಿ ೨ ಲಕ್ಷ ರೂಪಾಯಿ ಇರಿಸಿದ್ದರೆನ್ನಲಾಗಿದೆ. ಇತ್ತೀಚೆಗೆ ನಾರಾಯಣ ಹಾಗೂ ಪತ್ನಿ ಕೆಲಸಕ್ಕೂ, ಮಕ್ಕಳು ಶಾಲೆಗೆ ತೆರಳುವಾಗ ಮನೆಯ ಬಾಗಿಲಿಗೆ ಬೀಗ ಜಡಿದಿದ್ದರು. ಅಂದು ಸಂಜೆ ಮನೆಗೆ ಮರಳಿ ಕಪಾಟು ತೆರೆದು ನೋಡಿದಾಗ ಹಣ ನಾಪತ್ತೆಯಾಗಿರು ವುದಾಗಿ ತಿಳಿದುಬಂದಿದೆ. ಕೀಲಿ ಕೈಯನ್ನು ಕಪಾಟಿನ ಸಮೀಪದಲ್ಲೇ ಇರಿಸಿದ್ದಾರೆನ್ನಲಾಗಿದೆ.  ಹಣ ಕಳವಿಗೀ ಡಾದ ಬಗ್ಗೆ ಲಭಿಸಿದ ದೂರಿನಂತೆ ಮಂಜೇಶ್ವರ ಪೊಲೀಸರು ನಿನ್ನೆ ಕೇಸು ದಾಖಲಿಸಿಕೊಂಡಿದ್ದಾರೆ. ಬೆರಳಚ್ಚು ತಜ್ಞರು ಕೂಡಾ ಮನೆಗೆ ತಲುಪಿ ಪರಿಶೀಲನೆ ನಡೆಸಿದ್ದಾರೆ. ನಾರಾಯಣರದ್ದು ಹೆಂಚಿನ ಮನೆಯಾಗಿದೆ. ಮನೆಯ ಬಾಗಿಲಿನ ಬೀಗ ತೆರೆದ ಬಗ್ಗೆ ಯಾವುದೇ ಕುರುಹು ಪತ್ತೆಯಾಗಿಲ್ಲ. ಆದರೆ ಕಳ್ಳರು ಹೇಗೆ ಮನೆಯೊಳಗೆ ಪ್ರವೇಶಿಸಿ ಕಳವು ನಡೆಸಿದ್ದಾರೆಂದು ತಿಳಿದು ಬಂದಿಲ್ಲ. ತನಿಖೆ ಮುಂದುವರಿ ಯುತ್ತಿದೆಯೆಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page