ಭಾರತೀಯ ಕಿಸಾನ್ ಸಂಘ್ ರಾಜ್ಯ ಸಮಿತಿಯಿಂದ  ಕೃಷಿ ನವೋತ್ಥಾನ ಯಾತ್ರೆಗೆ ಮಂಜೇಶ್ವರದಿಂದ ಚಾಲನೆ

ಮಂಜೇಶ್ವರ: ಕೇರಳ ಕಿಸಾನ್ ಸಂಘ್ ರಾಜ್ಯ ಸಮಿತಿಯ ಕೃಷಿ ನವೋತ್ಥಾನ ಯಾತ್ರೆ ಮಂಜೇಶ್ವರ ದಿಂದ ಆರಂಭಗೊಂಡಿತು. ರಾಜ್ಯದ ಕೃಷಿಕರು ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕೆ ಹಾಗೂ ಕೇರಳ ಕೃಷಿ ನೀತಿಗೆ ಬದಲಿ ನಿರ್ದೇಶ ಮುಂದಿಟ್ಟು ಭಾರತೀಯ ಕಿಸಾನ್ ಸಂಘ್ ರಾಜ್ಯ ಸಮಿತಿಯ ನೇತೃತ್ವದಲ್ಲಿ ನಡೆಸುವ ಕೃಷಿ ನವೋತ್ಥಾನ ಯಾತ್ರೆಗೆ ಮಂಜೇಶ್ವರ ದಿಂದ ಚಾಲನೆ ನೀಡಲಾಯಿತು. ಮಂಜೇಶ್ವರ ರಾಷ್ಟ್ರಕವಿ ಗೋವಿಂದ ಪೈ ಸ್ಮಾರಕದಿಂದ ಪೈಗಳ ಪುತ್ಥಳಿಗೆ ಪುಷ್ಪಾರ್ಚನೆ ನಡೆಸಿ ಮೆರವಣಿಗೆ ಆರಂಭಿಸಲಾಯಿತು. ಬಳಿಕ ಅನಂತೇಶ್ವರ ದೇವಸ್ಥಾನದ ಶ್ರೀ ವಿಭುದೇಂದ್ರ ಸಭಾಂಗಣದಲ್ಲಿ ಉದ್ಘಾಟನಾ ಕಾರ್ಯಕ್ರಮ ನಡೆಯಿತು.  ಇಂದು ಆರಂಭಗೊಂಡ ಕೃಷಿ ನವೋತ್ಥಾನ ಯಾತ್ರೆ 28ರಂದು ತಿರುವನಂತಪುರ ಗಾಂಧಿ ಪಾರ್ಕ್‌ನಲ್ಲಿ ಸಮಾಪ್ತಿಹೊಂದಲಿದೆ. ಇಂದು ಹಾಗೂ ನಾಳೆ ಜಿಲ್ಲೆಯ 11 ಕೇಂದ್ರಗಳಲ್ಲಿ ಯಾತ್ರೆ ಪರ್ಯಟನೆ ನಡೆಸಲಿದೆ. ಕಿಸಾನ್ ಸಂಘ್ ರಾಜ್ಯ ಅಧ್ಯಕ್ಷ ಡಾ. ಅನಿಲ್ ವೈದ್ಯಮಂಗಲಂ ಯಾತ್ರೆಯ ನಾಯಕರಾಗಿದ್ದಾರೆ. ಎಪ್ರಿಲ್ 14ರಂದು ಗುರುವಾಯೂ ರಿನಲ್ಲಿ ವಿಷು ಕೃಷಿ ಗ್ರಾಮೋತ್ಸವ ನಡೆಯಲಿದೆ. ಕಾರ್ಯಕ್ರಮವನ್ನು ಭಾರತೀಯ ಕಿಸಾನ್ ಸಂಘ್ ಅಖಿಲ ಭಾರತ ಕಾರ್ಯದರ್ಶಿ ದಿನೇಶ್ ದತ್ತಾತ್ರೇಯ ತುಲ್‌ಕರ್ಣಿ ಉದ್ಘಾಟಿಸುವರು.

ಕೃಷಿಕರನ್ನು ರಾಜ್ಯ ಸೇವಕರಾಗಿ ಘೋಷಿಸುವುದು, ಕೃಷಿ ಸಾಲಗಳಿಗೆ ಬಡ್ಡಿ ರಹಿತಗೊಳಿಸುವುದು, ಕೃಷಿ ಅಗತ್ಯಕ್ಕೆ ವಿದ್ಯುತ್  ಹಾಗೂ ಪ್ರಾಥಮಿಕ ವೆಚ್ಚ ಉಚಿತ ಮಾಡು ವುದು, 60 ವರ್ಷ ದಾಟಿದ ಅರ್ಹರಾದ ಕೃಷಿಕರಿಗೆ ಪ್ರತೀ ತಿಂಗಳು 25 ಸಾವಿರ ರೂ. ಪಿಂಚಣಿ ಮಂಜೂ ರುಮಾಡುವುದು, ಕೃಷಿ ಭೂಮಿಯ ಸ್ವಾಧೀನ ಹೊರತುಪಡಿಸುವುದು, ಕಾಡುಪ್ರಾಣಿಗಳ ಆಕ್ರಮಣ ತಡೆಯುವುದಕ್ಕೆ ಕ್ರಮ ಕೈಗೊಳ್ಳುವುದು ಎಂಬೀ ಬೇಡಿಕೆಗಳನ್ನು ಮುಂದಿಟ್ಟು ಯಾತ್ರೆ ನಡೆಸಲಾಗುತ್ತಿದೆ.

ಈ ಬಗ್ಗೆ ನಿನ್ನೆ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಸ್ವಾಗತ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಹೊಳ್ಳ, ಭಾರತೀಯ ಕಿಸಾನ್ ಸಂಘ್ ರಾಜ್ಯ ಉಪಾಧ್ಯಕ್ಷ ರಾಮ ಎನ್ ಕಳತ್ತೂರು, ರಾಜ್ಯ ಎಕ್ಸಿಕ್ಯೂಟಿವ್ ಸದಸ್ಯ ವಿನೋದ್ ಕುಮಾರ್ ಬಾಯಾರು, ಭಾರತೀಯ ಕಿಸಾನ್ ಸಂಘ್ ಜಿಲ್ಲಾಧ್ಯಕ್ಷ ಕುಂಞಿರಾಮನ್ ನಂಬ್ಯಾರ್ ಭಾಗವಹಿಸಿದರು.

Leave a Reply

Your email address will not be published. Required fields are marked *

You cannot copy content of this page