ಮಂಗಲ್ಪಾಡಿ ತಾಲೂಕು ಆಸ್ಪತ್ರೆಯಲ್ಲಿ ರಾತ್ರಿ ಹೊತ್ತಲ್ಲಿ ಚಿಕಿತ್ಸೆ ಆರಂಭಿಸಲು ಒತ್ತಾಯ
ಉಪ್ಪಳ: ಮಂಗಲ್ಪಾಡಿ ತಾಲೂಕು ಆಸ್ಪತ್ರೆಯಲ್ಲಿ ಮೊಟಕುಗೊಳಿಸಿದ ರಾತ್ರಿ ಐಪಿ, ತುರ್ತುನಿಗಾ ವಿಭಾಗವನ್ನು ಹಾಗೂ ವಿವಿಧ ಚಿಕಿತ್ಸಾ ಸೌಲಭ್ಯಗಳನ್ನು ಆರಂಭಿಸಬೇಕೆAದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ವೈದ್ಯರ ಕೊರತೆಯಿಂದ ಕಳೆದ ತಿಂಗಳು ೩೦ರಿಂದ ರಾತ್ರಿ ಚಿಕಿತ್ಸೆಯನ್ನು ಮೊಟಕುಗೊಳಿಸಲಾಗಿದ್ದು, ಸಾರ್ವಜನಿಕರು ಸಂಕಷ್ಟಕ್ಕೀಡಾಗಿ ದ್ದಾರೆ. ಮಂಗಲ್ಪಾಡಿ, ಪೈವಳಿಕೆ, ಮಂಜೇಶ್ವರ ಮೊದಲಾದ ಪಂಚಾಯತ್ ವ್ಯಾಪ್ತಿಯಿಂದ ದಿನನಿತ್ಯ ನೂರಾರು ರೋಗಿಗಳು ತಲುಪುವ ಆಸ್ಪತ್ರೆ ಇದಾಗಿದೆ. ರಾತ್ರಿ ಕಾಲ ಚಿಕಿತ್ಸೆ ಸಾರ್ವಜನಿಕರಿಗೆ ಬಹಳ ಪ್ರಯೋಜನವಾಗಿತ್ತು. ರಾತ್ರಿ ಚಿಕಿತ್ಸೆಯನ್ನು ಮೊಟಕುಗೊಳಿಸಿದ ಬಗ್ಗೆ ಹಾಗೂ ಇತರ ಸೌಕರ್ಯಗಳ ಕೊರತೆಯನ್ನು ಖಂಡಿಸಿ ಇತ್ತೀಚೆಗೆ ಮಂಗಲ್ಪಾಡಿ ಜನಪÀರ ವೇದಿ ಹಾಗೂ ಮುಸ್ಲಿಂಲೀಗ್ ಮಂಗಲ್ಪಾಡಿ ಪಂಚಾಯತ್ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಗಿದೆ. ಈ ತಿಂಗಳ ೯ರಂದು ಆರೋಗ್ಯ ಸಚಿವೆ ವೀಣಾ ಜೋರ್ಜ್ ಆಸ್ಪತ್ರೆಗೆ ಭೇಟಿ ನೀಡಿ ವಿವಿಧ ವ್ಯವಸ್ಥೆಯ ಬಗ್ಗೆ ಪರಿಶೀಲಿಸಿದರು. ೧೦ ದಿನದೊಳಗೆ ರಾತ್ರಿ ಹೊತ್ತು ಚಿಕಿತ್ಸೆಯನ್ನು ಪ್ರಾರಂಭಿಸುವುದಾಗಿ ಸಚಿವೆ ಜನಕೀಯ ವೇದಿಯ ಪದಾದಿ üಕಾರಿಗಳಿಗೆ ತಿಳಿಸಿದ್ದರೆನ್ನಲಾಗಿದೆ. ಆದರೆ ೧೦ ದಿನ ಕಳೆದರೂ ಕ್ರಮ ಉಂಟಾಗಲಿಲ್ಲ. ಸಂಬAಧಪಟ್ಟ ಆರೋಗ್ಯ ಇಲಾಖೆ ಇನ್ನಾದರೂ ರಾತ್ರಿ ಚಿಕಿತ್ಸೆ ಆರಂಭಿಸಿ ಬಡವರಿಗೆ ನೆರವಾಗಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.