ಮಂಜೇಶ್ವರ ಪ್ರಾಥಮಿಕ ಸಹಕಾರಿ ಕೃಷಿ, ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನೂತನ ಕಟ್ಟಡ ಲೋಕಾರ್ಪಣೆ ನಾಳೆ

ಉಪ್ಪಳ : ಮಂಜೇಶ್ವರ ಪ್ರಾಥಮಿಕ ಸಹಕಾರಿ ಕೃಷಿ ಹಾಗೂ ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ಗೆ ನಯಾ ಬಝಾರ್‌ನ ಅಂಬಾರು ಚೆರು ಗೋಳಿ ರಸ್ತೆ ಸಮೀಪ ನಿರ್ಮಿಸಿದ ನೂತನ ಕಟ್ಟಡ ಲೋಕಾರ್ಪಣೆ ನಾಳೆ ಬೆಳಿಗ್ಗೆ 9.30ಕ್ಕೆ ಕೇರಳ ವಿಧಾನಸಭಾ ವಿಪಕ್ಷ ನಾಯಕ ವಿ.ಡಿ.ಸತೀಶನ್ ಉದ್ಘಾಟಿಸುವರು. ಶಾಸಕ ಎಕೆಎಂ ಆಶ್ರಫ್ ಅಧ್ಯಕ್ಷತೆವಹಿಸುವರು. ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಭದ್ರತಾ ಕೊಠಡಿಯನ್ನು ಉದ್ಘಾಟಿಸು ವರು. ಶಾಸಕರಾದ ಸಿ.ಎಚ್. ಕುಂಞAಬು, ಎನ್.ಎ.ನೆಲ್ಲಿಕುನ್ನು, ರಾಜ್ಯ ಸಹಕಾರಿ ಕೃಷಿ ಗ್ರಾಮಾಭಿವೃದ್ಧಿ ಬ್ಯಾಂಕ್‌ನ ಅಧ್ಯಕ್ಷ ಸಿ.ಕೆ.ಶಾಜಿ ಮೋಹನ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ನೀಲಕಂಠನ್, ಸಾಬು ಅಬ್ರಹಾಂ, ಅಬ್ದುಲ್ ಶುಕೂರ್ ನಾಹಾ, ರೆಮಾ ಎ, ಸುರೇಶ್ ಕುಮಾರ್ ಪಿ.ವಿ, ಮಂಜೇಶ್ವರ ಬ್ಲೋಕ್ ಪಂ.ಅಧ್ಯಕ್ಷೆ ಶಮೀನಾ ಟೀಚರ್, ಮಂಗಲ್ಪಾಡಿ ಪಂ.ಅಧ್ಯಕ್ಷೆ ರುಬಿನಾ ನೌಫಲ್, ಜಿ.ಪಂ.ಸದಸ್ಯ ಗೋಲ್ಡನ್ ಅಬ್ದುಲ್ ರಹಿಮಾನ್, ಕೋ-ಆಪರೇಟಿವ್ ಯೂನಿಯನ್ ಕಾಸರಗೋಡು ಸರ್ಕಲ್ ಅಧ್ಯಕ್ಷ ಕೆ.ಆರ್.ಜಯಾನಂದ, ಪಿ.ವಿ.ಸುರೇಶ್, ಸೆಬಾಸ್ಟಿನ್ ಪಾತಲಿಲ್, ಚಂದ್ರನ್ ವಿ, ನಾಗೇಶ ಕೆ, ಕೆ.ಮೊಹ ಮ್ಮದ್ ಸಾಲಿಲ್, ಶ್ರೀವಿದ್ಯಾ ವಿ.ವಿ, ದಿವ್ಯಾ ಕೆ.ಬಿ, ಸೋಜನ್ ಜೋಸೆಫ್, ರವಿ ಪ್ರಸಾದ್,ಬಾಬು ಬಂದ್ಯೋಡು ಶುಭಾಶಂಸನೆಗೈಯು ವರು. ಡಿಸಿಸಿ ಪ್ರಧಾನ ಕಾರ್ಯದರ್ಶಿ, ಎಣ್ಮಕಜೆ ಪಂಚಾಯತು ಅಧ್ಯಕ್ಷ ಮಂಜುನಾಥ ಆಳ್ವ ಮಡ್ವ ಉಪಾಧ್ಯಕ್ಷರಾಗಿರುವ ಬ್ಯಾಂಕ್ ಆಡಳಿತ ಸಮಿತಿ ನೇತೃತ್ವದಲ್ಲಿ ಬ್ಯಾಂಕ್ ನೂತನ ಕಟ್ಟಡದಲ್ಲಿ ಉದ್ಘಾಟನೆಗೊಳ್ಳುತ್ತಿದ್ದು ಕೃಷಿ ಹಾಗೂ ಗ್ರಾಮೀಣ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಲು ಯತ್ನಿಸುತ್ತಿದೆ ಎಂದು ಅಧ್ಯಕ್ಷ ಸೋಮಶೇಖರ್ ಜೆ.ಎಸ್, ಕಾರ್ಯದರ್ಶಿ ಶರತ್ ಕುಮಾರ್ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page