ಮಧೂರು ಚೇನಕ್ಕೋಡು ಭತ್ತ ಉತ್ಪಾದಕ ಗದ್ದೆಗೆ ನೀರುಣಿಸುವ ಕೆರೆ ನವೀಕರಿಸಲು ನಿರ್ದೇಶ
ಮಧೂರು: ಪಂಚಾಯತ್ನ ಚೇನಕ್ಕೋಡ್ ಭತ್ತ ಉತ್ಪಾದಕ ಕೆರೆಯನ್ನು ನವೀಕರಿಸಲಿರುವ ಯೋಜನೆಯ ಪ್ರೊಪೋಸಲ್ ನೀಡಲು ಜಿಲ್ಲಾಧಿಕಾರಿ ಕೆ. ಇಂಬಶೇಖರ್ ನಿರ್ದೇಶ ನೀಡಿದರು.
ಮಧೂರು ಪಂಚಾಯತ್ನ ಪ್ರೊಪೋಸಲ್ ಲಭಿಸಿದ ಬಳಿಕ ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ಮೂಲಕ ಮೊತ್ತ ವೆಚ್ಚ ಮಾಡಲು ಜಿಲ್ಲಾಧಿಕಾರಿ ನಿರ್ದೇಶ ನೀಡಿದರು. ಕಾಲುವೆಗಳಲ್ಲಿ ಸಂಗ್ರಹಗೊಂಡ ಮಣ್ಣು ತೆಗೆದು ಗದ್ದೆಗಳಿಗೆ ನೀರು ತಲುಪಿಸಲಿರುವ ಚಟುವಟಿಕೆ ಆರಂಭಿಸಲು ಜಿಲ್ಲಾಧಿಕಾರಿ ಮೈನರ್ ಇರಿಗೇಷನ್ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಜಲ್ ಶಕ್ತಿ ಅಭಿಯಾನ್ ಚಟುವಟಿಕೆಗಳ ಅಂಗವಾಗಿ ಜಿಲ್ಲಾಧಿಕಾರ ಸಂದರ್ಶನ ನಡೆಸಿದ್ದಾರೆ. ಮಧೂರು ಪಂ. ಅಧ್ಯಕ್ಷ ಕೆ. ಗೋಪಾಲಕೃಷ್ಣ, ಉಪಾಧ್ಯಕ್ಷೆ ಎಂ. ಸ್ಮಿಜಾ, ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಎಸ್. ರಾಧಾಕೃಷ್ಣ, ಆರೋಗ್ಯ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಉಮೇಶ್ ಗಟ್ಟಿ, ಜಿಲ್ಲಾ ಭೂಗರ್ಭ ಜಲ ಇಲಾಖೆ ಅಧಿಕಾರಿ ರತೀಶ್, ಅಗ್ರಿಕಲ್ಚರ್ ಡೆಪ್ಯುಟಿ ಡೈರೆಕ್ಟರ್ ವಿಷ್ಣು ನಾಯರ್, ಕೃಷಿ ಆಫೀಸರ್ ಅಸ್ಮಿನ, ಬಿ. ಮಧುಸೂದನನ್, ಭತ್ತ ಉತ್ಪಾದಕ ಸಮಿತಿ ಅಧ್ಯಕ್ಷ ಶ್ರೀಧರ ಪಾಟಾಳಿ, ಕಾರ್ಯದರ್ಶಿ ಐತ್ತಪ್ಪ ಗಟ್ಟಿ, ಸದಸ್ಯರು ಭಾಗವಹಿಸಿದರು.