ಮಸೂದೆಗೆ ಅನುಮೋದನೆ ಗಡುವು: ಸುಪ್ರೀಂಕೋರ್ಟ್ನ ಮುಂದೆ ಹಲವು ಪ್ರಶ್ನೆಗಳನ್ನಿಟ್ಟ ರಾಷ್ಟ್ರಪತಿ
ನವದೆಹಲಿ: ರಾಷ್ಟ್ರಪತಿ ಹಾಗೂ ರಾಜ್ಯಪಾಲರು ಮೂರು ತಿಂಗಳೊಳಗಾಗಿ ಯಾವುದೇ ಮಸೂದೆಯನ್ನು ಅನುಮೋದಿಸಬೇಕೆಂದು ನಿರ್ದೇಶಿಸಿ ಸುಪ್ರೀಕೋರ್ಟ್ ದಿನಗಳ ಹಿಂದೆ ನೀಡಿದ ಆದೇಶದ ಬಗ್ಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಹಲವು ಕಠಿಣ ಪ್ರಶ್ನೆಗಳನ್ನು ಸುಪ್ರೀಂಕೋರ್ಟ್ನ ಮುಂದಿರಿಸಿದ್ದಾರೆ. ಸಂವಿಧಾನದ 141 (1) ವಿಧಿಯನ್ನು ಬಳಸಿಕೊಂಡು ಎಪ್ರಿಲ್ ೮ರಂದು ರಾಷ್ಟ್ರಪತಿಗೆ ನಿರ್ದೇಶ ಹೊರಡಿಸಿದ ಸುಪ್ರೀಂಕೋರ್ಟ್ನ ತೀರ್ಪಿನ ವಿರುದ್ಧ ರಾಷ್ಟ್ರಪತಿ ಈ ಪ್ರಶ್ನೆ ಮುಂದಿರಿಸಿದ್ದಾರೆ.
ಈ ನಡವಳಿಕೆಯು ವ್ಯವಸ್ಥೆ ಮತ್ತು ಸಾಂವಿಧಾನಿಕ ಮೌಲ್ಯಗಳಿಗೆ ಸಂಪೂರ್ಣ ವಿರುದ್ಧವಾಗಿದೆ ಮತ್ತು ಸಾಂವಿಧಾನಿಕ ಮಿತಿಗಳನ್ನು ಉಲ್ಲಂಘಿಸಿದೆಯೆಂದು ಎಂದು ಹೇಳಿರುವ ರಾಷ್ಟ್ರಪತಿಯವರು ಸುಪ್ರೀಂಕೋರ್ಟ್ಗೆ ಒಟ್ಟು 14 ಸಾಂವಿಧಾನಿಕ ಪ್ರಶ್ನೆಗಳನ್ನು ಮುಂದಿರಿಸಿದ್ದಾರೆ.
ರಾಷ್ಟ್ರಪತಿ ಮತ್ತು ರಾಜ್ಯಪಾಲರು ಮೂರು ತಿಂಗಳೊಳಗಾಗಿ ಮಸೂದೆಗಳಿಗೆ ಸಹಿ ಹಾಕುವಂತೆ ಕೇಳುವ ಸುಪ್ರೀಂಕೋರ್ಟ್ನ ನಿರ್ಧಾರವನ್ನೂ ರಾಷ್ಟ್ರಪತಿ ಪ್ರಶ್ನಿಸಿದ್ದಾರೆ. ಸಂವಿಧಾನದ 200 ಅಥವಾ 201ನೇ ವಿಧಿಗಳಲ್ಲಿ ಇಂತಹ ಸಮಯದ ಮಿತಿಯನ್ನು ಉಲ್ಲೇಖಿಸಲಾಗಿಲ್ಲ. ರಾಷ್ಟ್ರಪತಿ ಅಥವಾ ರಾಜ್ಯಪಾಲರ ವಿವೇಚನೆಯ ಆಧಾರದ ಮೇಲೆ ನಿರ್ಧಾರಗಳಿಗೆ ಸಂವಿಧಾನದಲ್ಲಿ ಯಾವುದೇ ಸಮಯಮಿತಿ ನಿಗದಿಪಡಿಸಲಾಗಿಲ್ಲ. ಸಂವಿಧಾನದ 142ನೇ ವಿಧಿಯನ್ನು ಈ ರೀತಿ ದುರುಪಯೋಗಪಡಿಸಿ ಕೊಂಡರೆ ಅದು ದೇಶದಲ್ಲಿ ಸಾಂವಿಧಾನಿಕ ಅಸಮತೋಲನವನ್ನು ಉಂಟು ಮಾಡಬಹುದೆಂದೂ ರಾಷ್ಟ್ರಪತಿ ಯವರು ಹೇಳಿದ್ದಾರೆ.
ತಮಿಳುನಾಡು ಸರಕಾರ ಮತ್ತು ರಾಜ್ಯಪಾಲರ ನಡುವೆ ನಡೆಯು ತ್ತಿರುವ ವಿವಾದದಲ್ಲಿ ಸುಪ್ರೀಂ ಕೋರ್ಟ್ ದಿನಗಳ ಹಿಂದೆ ನೀಡಿದ ತೀರ್ಪಿನಲ್ಲ್ಲಿ ರಾಜ್ಯಪಾಲರು ಯಾವುದೇ ಮಸೂದೆಯ ಬಗ್ಗೆ ಮೂರು ತಿಂಗಳೊಳಗಾಗಿ ಕ್ರಮ ಕೈಗೊಳ್ಳಬೇಕಾಗಿದೆ ಮಾತ್ರವಲ್ಲ ಇದು ರಾಷ್ಟ್ರಪತಿಗೂ ಅನ್ವಯವಾ ಗುತ್ತದೆ ಎಂದು ಹೇಳಿತ್ತು. ಅದಕ್ಕೆ ಸಂ ಬಂಧಿಸಿ ರಾಷ್ಟ್ರಪತಿ ಸುಪ್ರೀಂ ಕೋರ್ಟ್ನ ಮುಂದೆ ಈ ಪ್ರಶ್ನೆಗಳನ್ನಿರಿಸಿದ್ದಾರೆ.