ಮಾಜಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಬಿಜೆಪಿಯ ಕೇರಳದ ಹೊಸ ಸಾರಥಿ
ತಿರುವನಂತಪುರ: ಬಿಜೆಪಿಯ ಕೇರಳ ಘಟಕದ ಹೊಸ ಅಧ್ಯಕ್ಷರನ್ನಾಗಿ ಮಾಜಿಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ರನ್ನು ಆರಿಸಲಾಗಿದೆ. ತಿರುವನಂತಪುರ ಬಿಜೆಪಿಯ ರಾಜ್ಯ ಕಚೇರಿಯಾದ ಮಾರಾರ್ಜಿ ಭವನದಲ್ಲಿ ನಿನ್ನೆ ನಡೆದ ಬಿಜೆಪಿ ರಾಜ್ಯ ಕೋರ್ ಸಮಿತಿ ಸಭೆಯಲ್ಲಿ ಈ ಆಯ್ಕೆ ನಡೆಸಲಾ ಯಿತು. ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀವ್ ಚಂದ್ರಶೇಖರ್ ಮಾತ್ರವೇ ನಾಮಪತ್ರ ಸಲ್ಲಿಸಿದ್ದರು. ಇದರಿಂದಾಗಿ ಅವರನ್ನು ಪಕ್ಷದ ರಾಜ್ಯ ಘಟಕದ ನೂತನ ಅಧ್ಯಕ್ಷರನ್ನಾಗಿ ಆರಿಸಲಾಯಿ ತು. ಬಿಜೆಪಿಯ ಕೇರಳ ಘಟಕದ ಪ್ರಭಾರಿ ಪ್ರಕಾಶ್ ಜಾವ್ದೇಕರ್ ಹಾಗೂ ಪಕ್ಷದ ಹೆಚ್ಚಿನ ಎಲ್ಲ್ಲಾ ರಾಜ್ಯ ನೇತಾರರೂ ಸಭೆಯಲ್ಲಿ ಭಾಗವಹಿಸಿದ್ದರು.
1964ರಲ್ಲಿ ಅಹಮದಾ ಬಾದ್ನಲ್ಲಿ ಏರ್ಫೋರ್ಸ್ ಅಧಿಕಾರಿ ಎಂ.ಕೆ.ಚAದ್ರಶೇಖರ್-ವಲ್ಲಿ ಚಂದ್ರಶೇಖರ್ ದಂಪತಿ ಪುತ್ರನಾಗಿ ಜನಿಸಿದ ರಾಜೀವ್ ಚಂದ್ರಶೇಖರ್ ಬೆಂಗಳೂರಿನಿAದ ತಮ್ಮ ವೃತ್ತಿ ಜೀವನ ಪ್ರಾರಂಭಿಸಿದರು. ಇವರ ಕುಟುಂಬ ಮೂಲತಃ ಪಾಲಕ್ಕಾಡಿನ ಕೊಂಡಿ ಯೂರಿನ ವರಾಗಿದ್ದಾರೆ. ವೈರ್ಲೆಸ್ ಟೆಲಿಫೋನ್ ಕೇವಲ ಕನಸಾಗಿದ್ದ ಸಮಯದಲ್ಲಿ ರಾಜೀವ್ ಅವರು 1994ರಲ್ಲಿ ಬಿಪಿಎಲ್ ಮೂಲಕ ಪೇಜರ್ಗಳು ಮತ್ತು ನಂತರ ಮೊಬೈಲ್ ಸೇವೆ ಪ್ರಾರಂಭಿಸಿದರು. 2005ರಲ್ಲಿ ಅರು ಜುಪಿಟರ್ ಕ್ಯಾಪಿಟಲ್ ಸಂಸ್ಥೆನ್ನು ಆರಂಭಿಸಿದರು.
ರಾಜೀವ್ರ ರಾಜಕೀಯ ಪ್ರವೇಶ ದಿಢೀರ್ ಆಗಿತ್ತು. ಅವರು 2006ರಲ್ಲಿ ಕರ್ನಾಟಕದಿಂದ ರಾಜ್ಯ ಸಭೆ ಪ್ರವೇಶಿಸಿದರು. ಸತತ ಮೂರು ಬಾರಿ ಮರು ಆಯ್ಕೆಯಾದರು. 2021ರಲ್ಲಿ ಮೋದಿ ನೇತೃತ್ವದ ಎgಡನೇ ಎನ್ಡಿಎ ಸರಕಾರದಲ್ಲಿ ಅವರನ್ನು ಕೇಂದ್ರ ರಾಜ್ಯ ಸಚಿವರನ್ನಾಗಿ ನೇಮಸಲಾಯಿತು. ರಾಜೀವ್ ಚಂದ್ರಶೇಖರ್ ಕೇರಳ ಎನ್ಡಿಎ ಉಪಾಧ್ಯಕ್ಷರನ್ನಾಗಿಯೂ ಈ ಹಿಂದೆ ಸೇವೆ ಸಲ್ಲಿಸಿದ್ದರು. ಎರಡು ದಶಕಗಳ ರಾಜಕೀಯ ಅನುಭವ ಹೊಂದಿರುವ ರಾಜೀವ್ ಚಂದ್ರಶೇಖರ್ ಅವರು ಸಂಘಪರಿ ವಾರದ ಹಿನ್ನೆಲೆ ಇಲ್ಲದ ಬಿಜೆಪಿ ನೇತಾರರಾಗಿದ್ದಾರೆ. ಭಿನ್ನ ಮತ ದಲ್ಲಿ ಬಳಲುತ್ತಿರುವ ಕೇರಳದ ಬಿಜೆಪಿ ಘಟಕಕ್ಕೆ ರಾಜೀವ್ ಚಂದ್ರಶೇಖರ್ ಸಾರಥ್ಯ ಪಕ್ಷಕ್ಕೆ ಹೊಸ ಚೈತನ್ಯ ನೀಡಲಿ ದೆಯೆಂಬ ನಿರೀಕ್ಷೆಯನ್ನು ಬಿಜೆಪಿಯ ಕೇಂದ್ರ ನೇತೃತ್ವ ವ್ಯಕ್ತಪಡಿ ಸಿದೆ. ರಾಜೀವ್ ಚಂದ್ರಶೇಖರ್ ಅವರು ತಮ್ಮ ದೃಷ್ಟಿಕೋನವನ್ನು ಸ್ಪಷ್ಟವಾಗಿ ಹೇಳುವ ರಾಜಕಾರಣಿಯಾಗಿದ್ದಾರೆ. ಇವರ ಅಭಿ ವೃದ್ಧಿ ಕೇಂದ್ರಿತ ವಿಧಾನವು ಎಲ್ಲರ ಗಮನ ಸೆಳಯುತ್ತಿದೆ. ಸಾಂಪ್ರದಾಯಿಕ ರಾಜಕಾರಣಿಗಳಿ ಗಿಂತ ಭಿನ್ನವಾಗಿರುವ ರಾಜೀವ್ ಚಂದ್ರಶೇಖರಿAದ .ಬಿಜೆಪಿಯ ಜನಪ್ರಿಯತೆ ಯನ್ನು ಕೇರಳಕ್ಕೂ ವಿಸ್ತರಿಸಲಿದೆಯೆಂಬ ನಂಬುಗೆಯನ್ನು ಬಿಜೆಪಿ ಕೇಂದ್ರ ಇರಿಸಿಕೊಂಡಿದೆ. ಇಲೆಕ್ಟ್ರಿಕಲ್ ಇಂಜಿನಿಯರಿA ಗ್ನಲ್ಲಿ ಪದವಿ, ಕಂಪ್ಯೂಟರ್ ಸಯನ್ಸ್ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಜೀವ್ ಚಂದ್ರಶೇಖರ್ ತಿರುವನಂ ತಪುರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಎದುರಾಳಿ ಕಾಂಗ್ರೆಸ್ನ ಶಶಿ ತರೂರ್ ವಿರುದ್ಧ ಕೇವಲ ಅಲ್ಪ ಮತಗಳ ಅಂತರದಲ್ಲಿ ಪರಾಭವಗೊಂಡಿದ್ದರು.