ಮೀನು ಕಾರ್ಮಿಕರ ಅವಗಣನೆ ವಿರುದ್ಧ ಎಸ್‌ಟಿಯುನಿಂದ ಮಂಜೇಶ್ವರ ಪಂ. ಕಚೇರಿ ಮಾರ್ಚ್

ಮಂಜೇಶ್ವರ: ಮೀನು ಕಾರ್ಮಿಕರ ಸಂಘಟನೆಯನ್ನು ಅವಗಣಿಸಿರುವುದರ ವಿರುದ್ಧ, ಮಂಜೇಶ್ವರ ಪಂಚಾಯತ್ ಆಡಳಿತ ಸಮಿತಿ ಓರ್ವ ತಾರತಮ್ಯ ನೀತಿ ವಿರೋಧಿಸಿ ಮಂಜೇಶ್ವರ ಪಂಚಾಯತ್ ಮೀನು ಕಾರ್ಮಿಕರ ಸಂಘಟನೆ ಎಸ್‌ಟಿಯು ಮಂಜೇಶ್ವರ ಪಂಚಾಯತ್ ಕಚೇರಿಗೆ ಮಾರ್ಚ್ ನಡೆಸಿದೆ. ಶಾಸಕ ಎಕೆಎಂ ಅಶ್ರಫ್ ಉದ್ಘಾಟಿಸಿದರು. ವಸತಿ ಯೋಜನೆಯ 10 ಲಕ್ಷ ರೂ.ವನ್ನು ೫ ಲಕ್ಷವಾಗಿ ಕಡಿತಗೊಳಿಸಲಾಗಿದೆ. ಮತ್ಸ್ಯ ಕಾರ್ಮಿಕ ವಿಭಾಗಕ್ಕೆ ಫಂಡ್ ನಿಷೇಧವನ್ನು ಪ್ರತಿಭಟಿಸಿ ಮಾರ್ಚ್ ನಡೆಸಲಾಗಿದೆ. ಫೆಡರೇಶನ್ ಜಿಲ್ಲಾಧ್ಯಕ್ಷ ಅಸೀಸ್ ಮಂಜೇಶ್ವರ ಅಧ್ಯಕ್ಷತೆ ವಹಿಸಿದರು.  ಪ್ರಧಾನ ರಾಜ್ಯ ಕಾರ್ಯದರ್ಶಿ ಕೆ.ಪಿ. ಮೊಹಮ್ಮದ್ ಅಶ್ರಫ್, ಕಾರ್ಯದರ್ಶಿ ಶರೀಫ್ ಕೊಡವಂಜಿ, ಮುಸ್ಲಿಂ ಲೀಗ್ ಮಂಡಲ ಕೋಶಾಧಿಕಾರಿ ಸೈಫುಲ್ಲಾ ತಂಙಳ್, ಅಬ್ದುಲ್ಲ ಕಜೆ, ಮುಮ್ತಾಜ್ ಸಮೀರ, ಉಮ್ಮರ್, ಅಬ್ದುಲ್ ರಹಿಮಾನ್ ಹಾಜಿ ಸಹಿತ ಹಲವರು ಮಾತನಾಡಿದರು.

RELATED NEWS

You cannot copy contents of this page