ಮುಂಜಾನೆ ಯುವತಿಗೆ ಹೆರಿಗೆ ನೋವು: ಆಸ್ಪತ್ರೆಗೆ ತಲುಪಿಸಲು ತಕ್ಷಣ ನೆರವಾಗಿ ಮಾನವೀಯತೆ ಮೆರೆದ ಬದಿಯಡ್ಕ ಪೊಲೀಸರು, ಬಿಜೆಪಿ ಮುಖಂಡ

ಬದಿಯಡ್ಕ: ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಯುವತಿಯನ್ನು ಆಸ್ಪತ್ರೆಗೆ ತಲುಪಿಸಲು ಯಾವುದೇ ವಾಹನ ಲಭಿಸದೇ ಇದ್ದಾಗ ಮಾಹಿತಿ ಲಭಿಸಿದ ಬದಿಯಡ್ಕ ಪೊಲೀಸರು ತಕ್ಷಣ ತಲುಪಿ ಸಹಾಯವೊದಗಿಸಿ ಮಾನವೀಯತೆ ಮೆರೆದರು.  ಕನ್ನೆಪ್ಪಾಡಿ ಬಳಿಯ ಬಾಪಾಲಿ ಪೊನದ ಬಾಡಿಗೆ ಮನೆಯಲ್ಲಿ ವಾಸಿಸುವ ಕೂಲಿ ಕಾರ್ಮಿಕ ಶಿವರಾಮರ ಪತ್ನಿ ಸುಮಿತ್ರ (25) ಅವರಿಗೆ ಇಂದು ಮುಂಜಾನೆ 3 ಗಂಟೆ ವೇಳೆಗೆ ಹೆರಿಗೆ ನೋವು ಅನುಭವಗೊಂಡಿತ್ತು. ಇದರಿಂದ ಆಕೆಯನ್ನು ಆಸ್ಪತ್ರೆಗೆ ತಲುಪಿಸಲು ಶಿವರಾಮ ಹಲವು ವಾಹನಚಾಲ ಕರಿಗೆ ಕರೆ ಮಾಡಿದರೂ ಪ್ರಯೋಜನವಾಗಲಿಲ್ಲ. ಇದರಿಂದ ಕೊನೆಗೆ ಬದಿಯಡ್ಕ ಪೊಲೀಸರಿಗೆ ಮಾಹಿತಿ ನೀಡಿದರು. ಈ ವೇಳೆ ಎಎಸ್‌ಐ ಸುಕುಮಾರನ್ ಹಾಗೂ ಪೊಲೀಸ್ ಮೊಹಮ್ಮದ್ ಆರೀಫ್ ಪೆರ್ಲ ಭಾಗದಲ್ಲಿ ಗಸ್ತು ನಡೆಸುತ್ತಿದ್ದರು. ಮಾಹಿತಿ ಲಭಿಸಿದ ಅವರು ಕೂಡಲೇ ಬಾಪಾಲಿಪೊನಕ್ಕೆ ತಲುಪಿ ತಮ್ಮ ವಾಹನದಲ್ಲಿ ಯುವತಿಯನ್ನು ಕರೆದೊಯ್ದರು. ಅಲ್ಲದೆ ಬಿಜೆಪಿ ಮುಖಂಡ ಅವಿನಾಶ್ ರೈ (ಬ್ಲೋಕ್ ಪಂಚಾಯತ್ ಮಾಜಿ ಸದಸ್ಯ) ಅವರಿಗೆ ಪೊಲೀಸರು ಕರೆ ಮಾಡಿ ಯುವತಿಯ ಹೆರಿಗೆ ನೋವಿನ ಬಗ್ಗೆ ಮಾಹಿತಿ ನೀಡಿದ್ದರು. 

ಕೂಡಲೇ ಗೆಳೆಯ ಹಾಗೂ ಟ್ಯಾಕ್ಸಿ ಚಾಲಕ ಚಿತ್ತರಂಜನ್ ಶೆಟ್ಟಿ (ರಂಜು) ಜೊತೆ ಅಟಲ್‌ಜಿ ಸೇವಾ ಟ್ರಸ್ಟ್‌ನ ಆಂಬುಲೆನ್ಸ್‌ನೊಂದಿಗೆ ತಲುಪಿದಾಗ ಪೊಲೀಸರು ಸುಮಿತ್ರಾಳನ್ನು ಕನ್ನೆಪ್ಪಾಡಿವರೆಗೆ ಕರೆದುಕೊಂಡು ಬಂದಿದ್ದರು. ಬಳಿಕ ಆಕೆಯನ್ನು ಆಂಬುಲೆನ್ಸ್‌ಗೆ ಹತ್ತಿಸಿ ಕಾಸರಗೋಡು ಕಡೆ ಸಂಚರಿಸುತ್ತಿದ್ದಂತೆ ಮಧೂರಿಗೆ ತಲುಪುವಾಗ ಹೆರಿಗೆ ಸಂಭವಿಸಿದೆ. ಅನಂತರ ಬಾಣಂತಿ ಹಾಗೂ ಗಂಡು ಮಗುವನ್ನು ಜನರಲ್ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಇವರಿಬ್ಬರೂ ಈಗ ಆರೋಗ್ಯ ದಿಂದಿದ್ದಾರೆಂದು ಆಸ್ಪತ್ರೆ ಮೂಲ ಗಳು ತಿಳಿಸಿವೆ. ಸಂದಿಗ್ಧ ಪರಿಸ್ಥಿತಿ ಯಲ್ಲಿ  ಸಕಾಲಕ್ಕೆ ಸ್ಪಂದಿಸಿದ ಬದಿ ಯಡ್ಕ ಪೊಲೀಸ್ ಠಾಣೆಯ ಎಎಸ್‌ಐ ಸುಕುಮಾರನ್, ಮೊಹ ಮ್ಮದ್ ಆರಿಫ್, ಆಂಬುಲೆನ್ಸ್ ಚಲಾಯಿಸಿದ ಅವಿನಾಶ್ ರೈ, ಗೆಳೆಯ ಚಿತ್ತರಂಜನ್ ಶೆಟ್ಟಿ ಎಂಬಿ ವರನ್ನು ಸ್ಥಳೀಯರು ಶ್ಲಾಘಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page