ಮುಂದುವರಿಯುತ್ತಿರುವ ಆಪರೇಶನ್ ಕ್ಲೀನ್ ಸ್ಲೇಟ್: ಮತ್ತೆ ಗಾಂಜಾ ವಶ: ಮೂವರ ಸೆರೆ
ಕಾಸರಗೋಡು: ಮಾದಕದ್ರವ್ಯ ಮಾರಾಟ ಹಾಗೂ ಉಪಯೋಗದ ವಿರುದ್ಧ ಅಬಕಾರಿ ಇಲಾಖೆ ಆರಂಭಿಸಿರುವ ಆಪರೇಶನ್ ಕ್ಲೀನ್ ಸ್ಲೇಟ್ ಕಾರ್ಯಾಚರಣೆ ಜಿಲ್ಲೆಯಲ್ಲಿ ಮುಂದುವರಿಯುತ್ತಿದೆ.
ಇದರಂತೆ ನಿನ್ನೆ ನಡೆಸಲಾದ ಕಾರ್ಯಾಚರಣೆಯಲ್ಲಿ ಜಿಲ್ಲೆಯ ವಿವಿಧೆಡೆಗಳಿಂದಾಗಿ ಮೂವರನ್ನು ಅಬಕಾರಿ ತಂಡ ಬಂಧಿಸಿ ಅವರ ಕೈವಶವಿದ್ದ ಗಾಂಜಾ ವಶಪಡಿಸಿ ಕೊಂಡಿದೆ.
ನೆಕ್ರಾಜೆ ಬಾಲಡ್ಕದಲ್ಲಿ ಕಾಸರU ಡು ಎಕ್ಸೈಸ್ ಸರ್ಕಲ್ ಇನ್ ಸ್ಪೆಕ್ಟರ್ ಅರುಣ್ ಡಿಯವರ ನೇತೃತ್ವದಲ್ಲಿ ನಡೆಸಿದ ಕಾರ್ಯಾ ಚರಣೆಯಲ್ಲಿ ರಂಜನ್ ಹೈದರ್ (32) ಎಂಬಾತನನ್ನು ಸೆರೆಹಿಡಿದು ಆತನಿಂದ ಐದು ಗ್ರಾಂ ಗಾಂಜಾ ವಶಪಡಿಸಿ ಕೇಸು ದಾಖಲಿಸಲಾಗಿದೆ. ಈ ಕಾರ್ಯಾಚರಣೆ ನಡೆಸಿದ ಅಬಕಾರಿ ತಂಡದಲ್ಲಿ ಸಿವಿಲ್ ಎಕ್ಸೈಸ್ ಆಫೀಸರ್ ಅಭಿಲಾಷ್ ಕೆ, ಪ್ರಿವೆಂಟೀವ್ ಆಫೀಸರ್ (ಗ್ರೇಡ್) ಜಿತೇಂದ್ರನ್ ಕೆ, ಅಸಿಸ್ಟೆಂಟ್ ಎಕ್ಸೈಸ್ ಇನ್ಸ್ಪೆಕ್ಟರ್ (ಗ್ರೇಡ್), ಜನಾರ್ದನನ್ ಕೆ.ಎ ಎಂಬವರು ಒಳಗೊಂಡಿದ್ದರು. ನೆಕ್ರಾಜೆಯಲ್ಲಿ ಇದೇ ಅಬಕಾರಿ ತಂಡ ನಿನ್ನೆ ನಡೆಸಿದ ಇನ್ನೊಂದು ಕಾರ್ಯಾಚರಣೆಯಲ್ಲಿ ಐದು ಗ್ರಾಂ ಗಾಂಜಾ ಪತ್ತೆಹಚ್ಚಲಾ ಗಿದ್ದು, ಅದಕ್ಕೆ ಸಂಬಂಧಿಸಿ ಮುಳಿಯಾರು ಮಲ್ಲ ನಿವಾಸಿ ರಾಜೇಶ್ ಸಿ (35) ಎಂಬಾತನನ್ನು ಬಂಧಿಸಿ ಕೇಸು ದಾಖಲಿಸಲಾಗಿದೆ.
ಇನ್ನೊಂದೆಡೆ ಮುಳಿಯಾರು ಬಾವಿಕ್ಕೆರೆಯಲ್ಲಿ ಕಾಸರಗೋಡು ಎಕ್ಸೈಸ್ ಸ್ಪೆಷಲ್ ಸ್ಕ್ಯಾಡ್ ಸರ್ಕಲ್ ಇನ್ಸ್ಪೆಕ್ಟರ್ ಪ್ರಶೋಬ್ ಕೆ.ಎಸ್ ನೇತೃತ್ವದ ಅಬಕಾರಿ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ 10 ಗ್ರಾಂ ಗಾಂಜಾ ಪತ್ತೆಹಚ್ಚಲಾಗಿದೆ. ಇದಕ್ಕೆ ಸಂಬಂಧಿಸಿ ಬಾವಿಕೆರೆಯ ಅಬ್ದುಲ್ ಸಮದ್ ಎಂ.ಎ (29) ಎಂಬಾತ ನನ್ನು ಬಂಧಿಸಿ ಕೇಸು ದಾಖಲಿಸ ಲಾಗಿದೆ. ಈ ಕಾರ್ಯಾಚರಣೆ ನಡೆ ಸಿದ ಅಬಕಾರಿ ತಂಡದಲ್ಲಿ ಅಸಿ ಸ್ಟೆಂಟ್ ಎಕ್ಸೈಸ್ ಇನ್ಸ್ಪೆಕ್ಟರ್ (ಗ್ರೇಡ್) ಸಿಕೆವಿ ಸುರೇಶ್, ಪ್ರಿವೆಂಟೀವ್ ಆಫೀಸರ್ (ಗ್ರೇಡ್) ಅಜೀಶ್.ಸಿ, ಸಿವಿಲ್ ಎಕ್ಸೈಸ್ ಆಫೀಸರ್ಗಳಾದ ಮಂಜುನಾಥನ್. ವಿ, ರಾಜೇಶ್ ಪಿ, ಅಶ್ವತಿ ಮತ್ತು ಸಜೀಶ್ ಎಂಬವರು ಒಳಗೊಂಡಿದ್ದರು.