ಯುವಕನ ಮೃತದೇಹ ಬಾವಿಯಲ್ಲಿ ಪತ್ತೆ
ಬಂದಡ್ಕ: ಯುವಕನೋರ್ವ ಮನೆಯ ಬಾವಿಯಲ್ಲಿ ಬಿದ್ದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದೆ. ಕುಂಡಂಗುಳಿ ವ್ಯಾಪಾರಿ ಭವನ ಸಮೀಪದ ಇಬ್ರಾಹಿಂರ ಪುತ್ರ ಮಜೀದ್ (37) ಮೃತಪಟ್ಟವರು. ಕುಂಡಂಗುಳಿಯಲ್ಲಿ ಚಾಲಕರಾಗಿದ್ದರು. ನಿನ್ನೆ ಮಧ್ಯರಾತ್ರಿ ಘಟನೆ ನಡೆದಿದೆ. ಶಬ್ದ ಕೇಳಿ ಬಂದ ಹಿನ್ನೆಲೆಯಲ್ಲಿ ತಂದೆ ಹೊರಗೆ ಬಂದು ನೋಡಿದ್ದು, ಪುತ್ರ ಬಾವಿಗೆ ಬಿದ್ದಿರಬೇಕೆಂದು ಅವರು ಶಂಕೆ ವ್ಯಕ್ತಪಡಿಸಿದರು. ಬಳಿಕ ಸ್ಥಳೀಯರು ಹಾಗೂ ಕುತ್ತಿಕ್ಕೋಲು ಅಗ್ನಿಶಾಮಕ ದಳ ತಲುಪಿ ಮಜೀದ್ರನ್ನು ಮೇಲೆತ್ತಲಾಯಿತಾದರೂ ಆ ವೇಳೆಗೆ ಅವರು ಮೃತಪಟ್ಟಿದ್ದರು. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಲಾಗಿದೆ. ಬೇಡಗಂ ಪೊಲೀಸರು ಮಹಜರು ನಡೆಸಿದರು.
ಮೃತರು ತಂದೆ, ತಾಯಿ ಸೈನಬಿ, ಸಹೋದರರಾದ ಮುಸ್ತಫ, ಸಿದ್ದಿಕ್, ಆದಮ್, ಸಹೋದರಿಯರಾದ ಸುಹರಾ, ಮಿಸ್ರಿಯ, ಆಯಿಷ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.