ಯುವತಿಯನ್ನು ಅಂಗಡಿಯೊಳಗೆ ಕಿಚ್ಚಿರಿಸಿ ಕೊಲೆಗೈಯ್ಯಲೆತ್ನ: ವ್ಯಾಪಾರಿ ಪೊಲೀಸ್ ವಶಕ್ಕೆ

ಕಾಸರಗೋಡು:  ಯುವತಿ ಯನ್ನು ಅಂಗಡಿಯೊಳಗೆ ಟಿನ್ನರ್ ಎರೆದು ಕಿಚ್ಚಿಟ್ಟು ಕೊಲೆಗೈಯ್ಯಲು ಯತ್ನಿಸಿದ ಘಟನೆ ನಡೆದಿದೆ. ಮುನ್ನಾಡ್ ಮಣ್ಣಡ್ಕ ಎಂಬಲ್ಲಿ ಜೀನಸು ಅಂಗಡಿ ನಡೆಸುವ ರಮಿತ ಎಂಬವರ ಮೇಲೆ ನಿನ್ನೆ ಸಂಜೆ  3.30ರ ವೇಳೆ ದಾಳಿ ನಡೆದಿದೆ.  ಕರ್ನಾಟಕ ನಿವಾಸಿ ರಾಮಾಮೃತ ಎಂಬಾತ ಯುವತಿ ಮೇಲೆ ಕಿಚ್ಚಿರಿಸಿದ್ದಾನೆ. ರಮಿತಾರ ಅಂಗಡಿಗೆ ಸಮೀಪದಲ್ಲೇ ರಾಮಾಮೃತನ ಪೀಠೋಪಕರಣ ಅಂಗಡಿ ಇದೆ. ಒಂದು ವರ್ಷದಿಂದ ಈತ ಅಲ್ಲಿ ಅಂಗಡಿ ನಡೆಸುತ್ತಿದ್ದನು. ರಾಮಾಮೃತ  ಮದ್ಯ ಸೇವಿಸಿ ನಿರಂತರ  ತನ್ನ ಅಂಗಡಿಗೆ ಬಂದು ಸಮಸ್ಯೆ ಸೃಷ್ಟಿಸುತ್ತಿರುವುದಾಗಿ ರಮಿತಾ ಅಂಗಡಿ ಮಾಲಕರಲ್ಲಿ ತಿಳಿಸಿದ್ದರು.  ಇದರಿಂದ ಅಂಗಡಿ ಕೊಠಡಿಯನ್ನು ಬಿಟ್ಟುಕೊ ಡುವಂತೆ ರಾಮಾಮೃತನೊಂದಿಗೆ ಮಾಲಕ ತಿಳಿಸಿದ್ದರು. ಇದರ ದ್ವೇಷವೇ ಯುವತಿ ಮೇಲೆ  ಕಿಚ್ಚಿಡಲು ಕಾರಣವೆಂದು ಪ್ರಾಥಮಿಕವಾಗಿ ಅಂದಾಜಿಸಲಾಗಿದೆ. ಘಟನೆ ಬಳಿಕ ಪರಾರಿಯಾಗಲು ಯತ್ನಿಸಿದ ಆರೋಪಿಯನ್ನು ನಾಗರಿಕರು ಸೆರೆಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಗಂಭೀರ ಗಾಯ ಗೊಂಡ ಯುವತಿಯನ್ನು ಮೊದಲು ಕಾಞಂಗಾಡ್‌ನ ಜಿಲ್ಲಾಸ್ಪತ್ರೆಗೂ ಬಳಿಕ ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ದು ದಾಖಲಿಸಲಾಗಿದೆ.

RELATED NEWS

You cannot copy contents of this page