ಯುವತಿ ಮನೆಯೊಳಗೆ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ
ಕಾಸರಗೋಡು: ಯುವತಿ ಯೋರ್ವೆ ಮನೆಯೊಳಗೆ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ. ಪಿಲಿಕ್ಕೋಡ್ ಮಾಂಡಕವತ್ತ್ ಕೊವ್ವಲ್ನಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಕಯ್ಯಾರು ಚೆರಿಯಾಕ್ಕರದ ಸ್ವರಲಯ (30) ಮೃತಪಟ್ಟ ಯುವತಿ. ದಿ| ಕುಂಞಿಕೃಷ್ಣನ್ ಎಂಬವರ ಪುತ್ರಿಯಾದ ಈಕೆ ತಾಯಿ ಕೆ.ವಿ. ಪದ್ಮಿನಿ, ಪತಿ ರೂಪೇಶ್, ಸಹೋದರ ಶ್ರೀರಾಗ್, ಸಹೋದರಿ ಶ್ರುತಿಲಯ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಪರಿಯಾರಂ ಮಡಿಕಲ್ ಕಾಲೇಜು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.