ಯುವ ಸಿವಿಲ್ ಇಂಜಿನಿಯರ್ ರೈಲು ಢಿಕ್ಕಿ ಹೊಡೆದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ
ಕಾಸರಗೋಡು: ಯುವ ಸಿವಿಲ್ ಇಂಜಿನಿಯರ್ ರೈಲುಗಾಡಿ ಢಿಕ್ಕಿ ಹೊಡೆದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ. ನೀಲೇಶ್ವರಕ್ಕೆ ಸಮೀಪದ ಪೆರೋಲ್ ವಳ್ಳಿಕುನ್ನು ನಿವಾಸಿ ಪದ್ಮನಾಭನ್- ಬೇಬಿ ದಂಪತಿ ಪುತ್ರ ವಿನೀಶ್ (26) ಸಾವನ್ನಪ್ಪಿದ ಯುವಕ. ಪಳ್ಳಿಕ್ಕರೆ ಸೈಂಟ್ ಆನ್ಸ್ ಯುಪಿ ಶಾಲೆ ಬಳಿಯ ರೈಲು ಹಳಿ ಬಳಿ ಇವರು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮೃತರು ಹೆತ್ತವರ ಹೊರತಾಗಿ ಸಹೋದರ ಪಿಪಿನ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.