ಯೋಧರಿಗಾಗಿ ಮೀಸಲಿಟ್ಟ  ಸ್ಥಳವನ್ನು ನಕಲಿ ಪಟ್ಟೆ ತಯಾರಿಸಿ ಮಾರಾಟ: ಮಾಹಿತಿ ನೀಡಿದ ನಿವೃತ್ತ ವಿಲ್ಲೇಜ್ ಆಫೀಸರ್‌ರನ್ನು ಕಾರು ಢಿಕ್ಕಿ ಹೊಡೆಸಿ ಕೊಲೆಗೈಯ್ಯಲೆತ್ನ

ಕಾಸರಗೋಡು: ಮಂಜೇಶ್ವರ ತಾಲೂಕಿನ ಕಯ್ಯಾರು ವಿಲ್ಲೇಜ್ನಲ್ಲಿ ನಿವೃತ್ತ ಯೋಧರಿಗಾಗಿ ಮೀಸಲಿರಿಸಿದ 2 ಎಕರೆ 2ಸೆಂಟ್ ಸ್ಥಳಕ್ಕೆ ನಕಲಿ ಪಟ್ಟಾ ತಯಾರಿಸಿ ಲಪಟಾಯಿಸಿದ್ದು, 41 ವರ್ಷಗಳ ಬಳಿಕ ಅದಕ್ಕೆ ತಂಡಪ್ಪೇರ್ ಸರ್ಟಿಫಿಕೇಟ್ ತಯಾರಿಸಿ ತೆರಿಗೆ ಪಾವತಿಸಿದ ಬಳಿಕ ಮತ್ತೆ ವ್ಯಕ್ತಿಪಲ್ಲಟ ನಡೆಸಿ ಮಾರಾಟಗೈಯ್ಯಲಾಗಿದೆ.
ಸರಕಾರಿ ಭೂಮಿಯನ್ನು ಈ ರೀತಿಯಲ್ಲಿ ಲಪಟಾಯಿಸಿ ಮಾರಾಟ ನಡೆಸುವ ಭಾರೀ ಮಾಫಿಯಾ ತಂಡ ಈಗಲೂ ಇದೆಯೆಂದು ಈ ಬಗ್ಗೆ ವಿಜಿಲೆನ್ಸ್ ಡೈರೆಕ್ಟರ್ಗೆ, ಲ್ಯಾಂಡ್ ರೆವಿನ್ಯೂ ಕಮಿಶನರ್ಗೆ ಹಾಗೂ ಜಿಲ್ಲಾಧಿಕಾರಿಗೆ ದೂರು ನೀಡಿದ ನಿವೃತ್ತ ವಿಲ್ಲೇಜ್ ಆಫೀಸರ್ ಕಯ್ಯಾರು ನಿವಾಸಿ ಮೊಹಮ್ಮದ್ ಕುಂuಟಿಜeಜಿiಟಿeಜ (60)ಅವರನ್ನು ನಿನ್ನೆ ಬೆಳಿಗ್ಗೆ ಪೆರ್ಮುದೆ ಪೆಟ್ರೋಲ್ ಬಂಕ್ ಬಳಿ ಕಾರು ಢಿಕ್ಕಿ ಹೊಡೆಸಿ ಕೊಲೆಗೈಯ್ಯಲು ಯತ್ನಿಸಲಾಗಿದೆ. ಗಂಭೀರ ಗಾ ಯಗೊಂಡ ಮೊಹಮ್ಮದ್ ಕುಂuಟಿಜeಜಿiಟಿeಜಯವರನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಇವರ ತಲೆ ಹಾಗೂ ಕಾಲಿಗೆ ಗಾಯಗಳಾಗಿವೆ.
ವಾಸಿಸಲು ಸ್ಥಳವಿಲ್ಲದ ಯಾರೂ ಕೂಡಾ ರಾಜ್ಯದಲ್ಲಿ ಇರಕೂಡದೆಂಬ ಉದ್ದೇಶದಿಂದ ಸರಕಾರ ಪ್ರಯತ್ನಿಸುತ್ತಿರುವಾಗ ಈ ರೀತಿಯ ವಂಚನೆಗಳನ್ನು ಪತ್ತೆಹಚ್ಚಲು ಮೊಹಮ್ಮದ್ ಕುಂuಟಿಜeಜಿiಟಿeಜ ಈ ವಿಷಯವನ್ನು ಅಧಿಕಾರಿಗಳಿಗೆ ತಿಳಿಸಿದ್ದರು. ಆದರೆ ಅಧಿಕಾರಿಗಳು ಅದನ್ನು ಕಡತದಲ್ಲಿ ಭದ್ರವಾಗಿರಿಸಿಕೊಂಡಿ ರುವುದಾಗಿ ಹೇಳಲಾ ಗುತ್ತಿದೆ. ಈ ಮಧ್ಯೆ ದೂರುದಾತನನ್ನು ಆಕ್ರಮಿಸಲು ಭೂ ಮಾಫಿಯಾ-ಹೊಯ್ಗೆ ಮಾಫಿಯಾ ತಂಡ ಪ್ರಯತ್ನ ಆರಂಭಿಸಿರುವು ದಾಗಿ ಹೇಳಲಾಗುತ್ತಿದೆ.
ಮಂಜೇಶ್ವರ ತಾಲೂಕಿನ ಕುಡಾಲ್ಮೇ ರ್ಕಳ ವಿಲ್ಲೇಜ್ನ ರೀ ಸರ್ವೇ ನಂಬ್ರ 25/1ಎ2ಬಿ ಯಲ್ಲಿ ಒಳಗೊಂಡ 2 ಎಕರೆ 2 ಸೆಂಟ್ಸ್ ಸ್ಥಳವನ್ನು 21/7/1982ರಲ್ಲಿ ಕುಡಾಲುಮೇರ್ಕಳ ಚೇವಾರು ಮನೆಯ ಅಬ್ದುಲ್ಲರ ಪುತ್ರ ಮೊಹಮ್ಮದ್ ಕುಂuಟಿಜeಜಿiಟಿeಜ ಎಂಬವರಿಗೆ ವಿಂಗಡಿಸಿ ನೀಡಿರುವುದಾಗಿ ನಕಲಿ ದಾಖಲೆ ತಯಾರಿಸಿರುವುದಾಗಿ ವಿಜಿಲೆನ್ಸ್ ಡೈರೆಕ್ಟರ್ಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
ನಿವೃತ್ತ ಯೋಧರಿಗೆ ವಿತರಿಸಲಿಕ್ಕಾಗಿ ಮೀಸಲಿರಿಸಿದ ಸ್ಥಳವಾಗಿದೆ ಇದು. ಆದರೆ ಈ ವಿಳಾಸದಲ್ಲಿ ಯಾರು ಕೂಡಾ ಕುಡಾಲ್ಮೇರ್ಕಳದಲ್ಲಿ ಇಲ್ಲವೆಂಬುವುದನ್ನು ನಾಗರಿಕರು ಈ ಹಿಂದೆಯೇ ಪತ್ತೆಹಚ್ಚಿದ್ದಾರೆ. ಅಲ್ಲದೆ ಅಧಿಕಾರಿಗಳಿಗೆ ಈ ಬಗ್ಗೆ ತಿಳಿಸಿರುವು ದಾಗಿಯೂ ಹೇಳಲಾಗುತ್ತಿದೆ.
ಪಟ್ಟಾಕ್ಕೆ ಸಂಬAಧಿಸಿ ದೂರು ಕೇಳಿಬಂದ ಹಿನ್ನೆಲೆಯಲ್ಲಿ 2023ವರೆಗೆ ಸ್ಥಳದ ತೆರಿಗೆ ಪಾವತಿಸುವುದೋ, ತಂಡಪೇರ್ ರಿಜಿಸ್ಟ್ರರ್ನಲ್ಲಿ ಭೂಮಿಯ ಮಾಹಿತಿ ಸೇರಿಸಿರಲಿಲ್ಲ. 2023ರಲ್ಲಿ ತಾಲೂಕು ಆಫೀಸ್ನಿಂದ ತಂಡಪ್ಪೇರ್, ರಿಜಿಸ್ಟರ್ ಸರ್ಟಿಫಿಕೇಟ್ ಹಾಗೂ ವಿಲ್ಲೇಜ್ ಆಫೀಸ್ನಿಂದ ತೆರಿಗೆ ಪಾವತಿಸಿದ ರಶೀದಿ ಪಡೆಯಲಾಗಿದೆ. ಅನಂತರ ಇದೇ ಸ್ಥಳದ ಒಂದೂವರೆ ಎಕರೆ ಸ್ಥಳ ವನ್ನು ಬೇರೊಬ್ಬರಿಗೆ, 20 ಸೆಂಟ್, 10 ಸೆಂಟ್ ಎಂಬೀ ರೀತಿಯಲ್ಲಿ ಇತರ ಇಬ್ಬರಿಗೆ ಮಾರಾಟಗೈಯ್ಯಲಾಗಿದೆ. ಬಾಡೂರು ವಿಲ್ಲೇಜ್ನ ಬೆಳ್ಮಾರೆ ಹೌಸ್ನ ಅಬ್ದುಲ್ಲರ ಪುತ್ರ ಬಿ.ಎ. ಮುಹಮ್ಮದ್ ಕುಂuಟಿಜeಜಿiಟಿeಜ ಸ್ಥಳ ಮಾರಾಟಗೈದಿದ್ದರು. ಆಧಾರ್ ದಾಖಲೆಪತ್ರದಲ್ಲಿ ವ್ಯಕ್ತಿಪಲ್ಲಟ ನಡೆಸಿರುವುದು ಹಾಗೂ ಆಧಾರ್ ಕಾರ್ಡ್ನಿಂದ ಪತ್ತೆಹಚ್ಚಲಾಗಿದೆ.
ಆಧಾರ್ ಕಾರ್ಡ್ ಜ್ಯಾರಿಗೆ ಬಂದ ಬಳಿಕ ಭೂಮಿ ಹಸ್ತಾಂತರಕ್ಕೆ ಆಧಾರ್ ಕಾರ್ಡ್ ನಂಬ್ರ ಕಡ್ಡಾಯಗೊಳಿಸಿರು ವುದರಿಂದ ಈ ವಿಷಯ ಪತ್ತೆಹಚ್ಚಲು ಸಾಧ್ಯವಾಯಿತೆಂದು ಹೇಳಲಾಗುತ್ತಿದೆ.
ನಿವೃತ್ತ ಯೋಧರಿಗೆ ನೀಡಲು ಮೀಸಲಿಟ್ಟ ನೂರಾರು ಎಕರೆ ಭೂಮಿ ಕಾಸರಗೋಡು, ಮಂಜೇಶ್ವರ ತಾಲೂಕುಗಳಲ್ಲಿ ಈ ರೀತಿಯಲ್ಲಿ ಜನಿಸಿಯೂ ಇಲ್ಲದವರ ಹೆಸರಲ್ಲಿ ನಕಲಿಯಾಗಿ ವಿಂಗಡಿಸಿ ಮಾರಾಟಗೈದು ಹಣ ಸಂಪಾದಿಸುವ ಮಾಫಿಯಾ ತಂಡ ಈಗಲೂ ಪತ್ತೆಯಾಗಿದೆ ಎಂಬ ಆರೋಪ ಕೇಳಿಬಂದಿದೆ. ಕಾರು ಢಿಕ್ಕಿ ಹೊಡೆಸಿ ಮೊಹಮ್ಮದ್ ಕುಂuಟಿಜeಜಿiಟಿeಜ ಯವರನ್ನು ಕೊಲೆಗೈಯ್ಯಲು ಯತ್ನಿಸಿದ ಘಟನೆಯಲ್ಲಿ ಒಂದು ಹೊಯ್ಗೆ ಮಾಫಿಯಾ ಸಹಿತ ವಂಚನೆ ತಂಡದಲ್ಲಿ ನಾಲ್ಕು ಮಂದಿ ಇದ್ದಾರೆಂದು ಆಸ್ಪತ್ರೆಯಲ್ಲಿರುವ ಮುಹಮ್ಮದ್ ಕುಂuಟಿಜeಜಿiಟಿeಜ ಅಧಿಕಾರಿಗಳಲ್ಲಿ ತಿಳಿಸಿದ್ದಾರೆ. ನಕಲಿಯಾಗಿ ವಿಂಗಡಿಸಿ ವ್ಯಕ್ತಿಪಲ್ಲಟ ಮೂಲಕ ಮಾರಾಟಗೈದ ಸರಕಾರಿ ಭೂಮಿಗೆ ಎರಡು ಕೋಟಿ ರೂಪಾಯಿ ಯಷ್ಟು ಮೊತ್ತವನ್ನು ಮಾಫಿಯಾ ತಂಡ ಜೇಬಿಗಿಳಿಸಿದೆಯೆಂದು ಹೇಳಲಾಗುತ್ತಿದೆ. ಇಲ್ಲಿ ಒಂದು ಸೆಂಟ್ ಭೂಮಿಗೆ 65,000 ರೂಪಾಯಿ ಮಾರ್ಕೆಟ್ ಬೆಲೆಯಿದೆಯೆಂದು ನಾಗರಿಕರು ಹೇಳುತ್ತಿದ್ದಾರೆ.

Leave a Reply

Your email address will not be published. Required fields are marked *

You cannot copy content of this page