ಮಂಜೇಶ್ವರ: ಶಾರದಾ ಆರ್ಟ್ಸ್ ಮಂಜೇಶ್ವರ ತಂಡದ ಕಲಾವಿದ ಸುರೇಶ್ ವಿಟ್ಲ (42) ನಿಧನ ಹೊಂದಿದರು. ವಿಟ್ಲದಲ್ಲಿ ಮುದ್ರಣ ಸಂಸ್ಥೆ ಹೊಂದಿ ರುವ ಇವರು ತುಳು, ಕನ್ನಡ ರಂಗ ಭೂಮಿಯಲ್ಲಿ ಅಭಿನಯದ ಮೂಲಕ ತನ್ನ ಪ್ರತಿಭೆ ಮೆರೆಸಿದ್ದರು. ಜಿಲ್ಲೆಯ ವಿವಿಧ ನಾಟಕ ತಂಡಗಳಲ್ಲಿ ಪಾತ್ರ ನಿರ್ವಹಿಸಿದ್ದರು. ಮೃತರು ಪತ್ನಿ ಕಮಲಾಕ್ಷಿ, ಪುತ್ರ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.