ರಬ್ಬರ್ ತೋಟ ಮಾಲಕನಿಗೆ ಕಡಿದು ಗಾಯ: ಗುತ್ತಿಗೆದಾರ ಸೆರೆ

ಉಪ್ಪಳ: ರಬ್ಬರ್ ತೋಟದ ಮಾಲಕನಿಗೆ ತೋಟವನ್ನು ಗುತ್ತಿಗೆ ಪಡೆದ ವ್ಯಕ್ತಿ ಕಡಿದು ಗಾಯಗೊಳಿಸಿದ ಘಟನೆ ನಡೆದಿದೆ. ವರ್ಕಾಡಿ ತೋಕೆ ನಿವಾಸಿ  ಸಜಿ ಮೋನ್ ಜೋಸೆಫ್ (55) ಎಂಬವರು ಇರಿತದಿಂದ ಗಾಯ ಗೊಂಡಿದ್ದು, ಇವರನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಈ ಸಂಬಂಧ ಕೋಟ್ಟಯಂ ಕಾಞಿರಪಳ್ಳಿ ನಿವಾಸಿ ವರ್ಗೀಸ್ ಜೋಸೆಫ್ ಯಾನೆ ತಂಗಚ್ಚನ್ (65) ಎಂಬಾತನನ್ನು ಮಂಜೇಶ್ವರ ಪೊಲೀಸರು ಬಂಧಿಸಿ ದ್ದಾರೆ.  ಸಜಿ ಮೋನ್ ಜೋಸೆಫ್‌ರ ವರ್ಕಾಡಿ ತೋಕೆಯಲ್ಲಿರುವ ರಬ್ಬರ್ ತೋಟವನ್ನು ವರ್ಗೀಸ್ ಜೋಸೆಫ್ ಗೇಣಿಗೆ ಪಡೆದುಕೊಂಡಿ ದ್ದಾನೆನ್ನಲಾ ಗಿದೆ. ನಿನ್ನೆ ಬೆಳಿಗ್ಗೆ ವರ್ಗೀಸ್ ಜೋ ಸೆಫ್ ಅಲ್ಲಿಗೆ ತೆರಳಿದ್ದು, ಈ ವೇಳೆ ಸಜಿಮೋನ್ ಜೋಸೆಫ್‌ರೊಂದಿಗೆ ಹಣದ ವಿಷಯಕ್ಕೆ ಸಂಬಂಧಿಸಿ ತರ್ಕ ಉಂಟಾಗಿತ್ತೆಂದೂ ಹೇಳಲಾಗುತ್ತಿದೆ. ಈ ಮಧ್ಯೆ ವರ್ಗೀಸ್ ಕತ್ತಿಯಿಂದ ಸಜಿಮೋನ್ ಜೋಸೆಫ್‌ಗೆ ಕಡಿದು ಗಾಯಗೊಳಿಸಿರುವುದಾಗಿ ದೂರಲಾಗಿದೆ.

RELATED NEWS
ಬದಿಯಡ್ಕದಲ್ಲಿ ಹಸಿರು ಕ್ರಿಯಾಸೇನೆಯಲ್ಲೂ ವಂಚನೆ: 4,000 ರೂ. ಯೂಸರ್ ಫೀಸ್ ಬ್ಯಾಂಕ್‌ನಲ್ಲಿ ಪಾವತಿಸಿ ಪಂ. ಕಚೇರಿಯಲ್ಲಿ ನೀಡಿದ ರಶೀದಿಯಲ್ಲಿ 40,000 ವಾಗಿ ತಿದ್ದುಪಡಿ; ಮಹಿಳಾ ಅಸೋಸಿಯೇಶನ್ ವಿಲ್ಲೇಜ್ ಅಧ್ಯಕ್ಷೆ ಸಹಿತ ಇಬ್ಬರನ್ನು ಕೆಲಸದಿಂದ ತೆರವು

You cannot copy contents of this page