ರಸ್ತೆ ಕಾಮಗಾರಿ: ಕಾರ್ಮಿಕ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ

ಉಪ್ಪಳ: ರಸ್ತೆ ಕಾಮಗಾರಿ ಕಂಪೆನಿಯ ಕಾರ್ಮಿಕನೋರ್ವ  ಕೊಠಡಿಯಲ್ಲಿ ಫ್ಯಾನ್‌ಗೆ ನೇಣುಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.  ಪೈವಳಿಕೆಯಲ್ಲಿ ಬಾಡಿಗೆ ಕೊಠಡಿಯಲ್ಲಿ ವಾಸವಾ ಗಿರುವ ನಾಗ್ಪುರ್ ನಿವಾಸಿ ವಿಲಾಸ್ ದೇಶ್‌ಮುಖ್ (27) ಮೃತಪಟ್ಟ ವ್ಯಕ್ತಿಯಾಗಿದ್ದಾರೆ.  ಇತರ ಕಾರ್ಮಿಕರ  ಜೊತೆ ವಾಸ ವಾಗಿದ್ದ ಇವರು ಎರಡು ದಿನಗಳಿಂದ ಕೆಲಸಕ್ಕೆ ಹೋಗಿರಲಿಲ್ಲ. ಶನಿವಾರ ಸಂಜೆ ಇತರ ಕಾರ್ಮಿಕರು ಕೊಠಡಿಗೆ ತಲುಪಿದಾಗ ಫ್ಯಾನ್‌ಗೆ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ  ಮೃತದೇಹ ವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ.

RELATED NEWS

You cannot copy contents of this page