ರಾಜ್ಯದಲ್ಲಿ ಅರ್ಬನ್ ಮೈನಿಂಗ್ ಆರಂಭಿಸಲು ತೀರ್ಮಾನ


ಕಾಸರಗೋಡು: ರಾಜ್ಯದಲ್ಲಿ ಇಲೆಕ್ಟ್ರೋನಿಕ್ ತ್ಯಾಜ್ಯ (ಇ-ತ್ಯಾಜ್ಯ) ದಿನೇ ದಿನೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅದಕ್ಕೆ ಪರಿಹಾರ ಕಂಡುಕೊಳ್ಳಲು ಹಾಗೂ ಅದರಲ್ಲಿ ರುವ ಖನಿಜಾಂಶಗಳನ್ನು ಬೇರ್ಪಡಿಸಿ ಅಂತಹ ಖನಿಜಾಂ ಗಳನ್ನು ಮರು ಬಳಕೆಗಾಗಿ ರಾಜ್ಯದಲ್ಲಿ ಅರ್ಬನ್ ಮೈನಿಂಗ್ ಆರಂಭಿಸಲು ರಾಜ್ಯ ಸರಕಾರ ಮುಂದಾಗಿದೆ.
ಸೆAಟರ್ ಫೋರ್ ಮೆಟೀರಿ ಯಲ್ಸ್ ಫೋರ್ ಇಲೆಕ್ಟ್ರೋನಿಕ್ಸ್ ಟೆಕ್ನೋಲಜಿ (ಸಿ-ಮೆಟ್) ಖಾಸಗಿ ಪಾಲುದಾಕೆ ಯೊಂದಿಗೆ ಈ ಯೋಜನೆ ಜ್ಯಾರಿಗೊಳಿಸಲಾಗು ವುದು. ಇಲೆಕ್ಟ್ರೋನಿಕ್ ತ್ಯಾಜ್ಯಗಳಲ್ಲಿ ಲಿಥಿಯಂ ಕೋಬೋಲ್ಡ್, ನಿಕ್ಕಲ್ ಎಂಬಿತ್ಯಾದಿ ಖನಿಜಾಂಶಗಳು ಒಳ ಗೊಂಡಿದ್ದು, ಅರ್ಬನ್ ಮೈನಿಂಗ್ ಮೂಲಕ ಇಂತಹ ಖನಿಜಾಂಶಗ ಳನ್ನು ಬೇರ್ಪಡಿಸಿ ತೆಗೆದು ಅದನ್ನು ಮರು ಬಳಕೆಗೊಳಿ ಸುವುದು ಈ ಯೋಜನೆಯ ಪ್ರಧಾನ ಉದ್ದೇಶ ವಾಗಿದೆ ಮಾತ್ರವಲ್ಲ ಇಂತಹ ಕ್ರಮದಿಂದ ಇ-ತ್ಯಾಜ್ಯ ಸಮಸ್ಯೆ ಗಳಿಗೂ ಗರಿಷ್ಠ ಪ್ರಮಾಣದಲ್ಲಿ ಪರಿಹಾರ ಕಂಡುಕೊಳ್ಳ ಬಹುದಾಗಿದೆ. ತೆಲಂಗಾನದಲ್ಲಿ 36 ಕೋಟಿ ರೂ. ವೆಚ್ಚದಲ್ಲಿ ಈಗಾಗಲೇ ಯೋಜನೆಗೆ ಚಾಲನೆ ನೀಡಲಾಗಿದೆ. ಅದೇ ಮಾದರಿಯಲ್ಲಿ ಕೇರಳದಲ್ಲೂ ಇದನ್ನು ಆರಂಭಿಸಲಾಗುವುದು. ತೆಲಂಗಾನದಲ್ಲಿ ಇದಕ್ಕೆ ತಗಲುವ ಒಟ್ಟು ವೆಚ್ಚದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರ ತಲಾ 14 ಕೋಟಿ ರೂ. ವ್ಯಯಿಸಲಿದೆ. ಬಾಕಿ ಹಣವನ್ನು ಖಾಸಗಿ ಪಾಲುದಾರಿಕೆ ಮೂಲಕ ಪಡೆಯಲಾಗುವುದು.
ಭಾರತದಲ್ಲಿ ಪ್ರತೀ ವರ್ಷ 410 ಕೋಟಿ ಕಿಲೋ ಇ-ತ್ಯಾಜ್ಯಗಳನ್ನು ಹೊರ ಬಿಡಲಾಗುತ್ತಿದೆ. ಇದರಲ್ಲಿ ಶೇ.33ರಷ್ಟನ್ನು ಮಾತ್ರವೇ ವೈಜ್ಞಾನಿಕ ರೀತಿಯಲ್ಲಿ ಸಂಸ್ಕರಿಸಲಾಗುತ್ತಿದೆ. ಕೇರಳದಲ್ಲಿ ಹಸಿರು ಕ್ರಿಯಾ ಪಡೆ ಸಂಗ್ರಹಿಸುವ ಇ-ತ್ಯಾಜ್ಯವನ್ನು ಪೂರ್ಣ ವಾಗಿ ಸಂಸ್ಕರಿಸಲು ಸಾಧ್ಯವಾಗುತ್ತಿಲ್ಲ.

Leave a Reply

Your email address will not be published. Required fields are marked *

You cannot copy content of this page