ರಾಣಿಪುರದಲ್ಲಿ ಮತ್ತೆ ಕಾರಿನಲ್ಲಿ ಸಾಹಸ ಪ್ರಯಾಣ: ಕರ್ನಾಟಕ ನಿವಾಸಿ ವಿರುದ್ಧ ಕೇಸು
ಹೊಸದುರ್ಗ: ರಾಣಿಪುರದಲ್ಲಿ ಮತ್ತೆ ಕಾರಿನಲ್ಲಿ ಸಾಹಸಯಾತ್ರೆ ನಡೆಸಲಾಗಿದೆ. ಈ ಬಗ್ಗೆ ಕರ್ನಾಟಕ ನಿವಾಸಿ ವಿರುದ್ಧ ರಾಜಪುರಂ ಪೊಲೀಸರು ಕೇಸು ದಾಖಲಿಸಿದ್ದಾರೆ. ನಿನ್ನೆ ಮಧ್ಯಾಹ್ನ ರಾಣಿಪುರದಲ್ಲಿ ಕಾರಿನ ಢಿಕ್ಕಿಯಲ್ಲಿ ಕುಳಿತುಕೊಂಡು ಸಾಹಸ ಪ್ರಯಾಣ ನಡೆಸಲಾಗಿದೆ. ಸುಳ್ಯ ಅಜ್ಜಾವರ ನಿವಾಸಿ ಸತೀಶ್ ಕೆ. (26)ನ ಮಾಲಕತ್ವದಲ್ಲಿರುವ ಕರ್ನಾಟಕ ನೋಂದಾಯಿತ ವಾಹನವಾದ ಸ್ವಿಪ್ಟ್ ಕಾರಿನಲ್ಲಿ ಈ ಸಾಹಸ ಪ್ರಯಾಣ ನಡೆಸಲಾಗಿದೆ. ಭಾರೀ ಶಬ್ದದಲ್ಲಿ ಹಾಡು ಪ್ಲೇ ಮಾಡಿ ಢಿಕ್ಕಿ ತೆರೆದು ಅದರಲ್ಲಿ ಕುಳಿತು ಪ್ರಯಾಣ ನಡೆಸಲಾಗಿದೆ. ಅರಣ್ಯ ಸಂರಕ್ಷಣೆ ಸಮಿತಿ ಕಾರ್ಯಕರ್ತರು ನೀಡಿದ ಮಾಹಿತಿಯನುಸಾರ ಸ್ಥಳೀಯರ ಸಹಕಾರದೊಂದಿಗೆ ಪಾಣತ್ತೂರಿನಲ್ಲಿ ಈ ಕಾರನ್ನು ವಶಪಡಿಸಲಾಗಿದೆ. ಆರೋಪಿ ವಿರುದ್ಧ ಕೇಸು ದಾಖಲಿಸಿ ಕಸ್ಟಡಿಗೆ ತೆಗೆಯಲಾಗಿದೆ. ಈ ಮೊದಲೂ ಕೂಡಾ ಈ ರೀತಿಯ ಪ್ರಯಾಣ ನಡೆಸಿದವರ ವಿರುದ್ಧ ಕೇಸು ದಾಖಲಿಸಲಾಗಿತ್ತು.