ರಾಷ್ಟ್ರೀಯ ಹೆದ್ದಾರಿಯಲ್ಲಿ ಬೀದಿದೀಪ ಸ್ಥಾಪಿಸುವುದರಲ್ಲಿ ತಾರತಮ್ಯ- ಕಾಂಗ್ರೆಸ್ ಆರೋಪ

ಕಾಸರಗೋಡು: ರಾಷ್ಟ್ರೀಯ ಹೆದ್ದಾರಿಯ ಮೊಗ್ರಾಲ್ ಪುತ್ತೂರು ಕಲ್ಲಂಗೈಯಿಂದ ಸಿಪಿಸಿಆರ್‌ಐವರೆಗೆ ಬೀದಿ ದೀಪ ಸ್ಥಾಪಿಸುವುದರಲ್ಲಿ ಅಧಿಕಾರಿಗಳು ತಾರತಮ್ಯ ನೀತಿ ಅನುಸರಿಸಿದ್ದಾರೆಂದು ಕಾಂಗ್ರೆಸ್ ಮಂಡಲ ಸಮಿತಿ ಆರೋಪಿಸಿದೆ. ಈ ಭಾಗದಲ್ಲಿ ನಿರ್ಮಾಣ ಚಟುವಟಿಕೆ 95 ಶೇಕಡಾ ಪೂರ್ತಿಯಾದಾಗ ಕಲ್ಲಂಗೈಯಿಂದ ಕುಳಂಗರ ವರೆಗೆ ಬೀದಿ ದೀಪ ಸ್ಥಾಪಿಸಿಲ್ಲವೆಂದು, ಇದು ತಾರತಮ್ಯ ನೀತಿಯಾಗಿದೆ ಎಂದು ಕಾಂಗ್ರೆಸ್ ಸಮಿತಿ ಆಪಾದಿಸಿದೆ. ಈ ಬಗ್ಗೆ ಗುತ್ತಿಗೆದಾರರಲ್ಲಿ ವಿಚಾರಿಸಿದಾಗ ಜನವಾಸ ಕೇಂದ್ರವಲ್ಲದ ಪ್ರದೇಶವಾದ ಕಾರಣ ಬೀದಿ ದೀಪ ಸ್ಥಾಪಿಸದಿರುವುದು ಎಂದು ಉತ್ತರ ಲಭಿಸಿರುವುದಾಗಿ ಕಾಂಗ್ರೆಸ್ ಅಧಿಕಾರಿಗಳು ತಿಳಿಸಿದ್ದಾರೆ.

ಈ ಬಗ್ಗೆ ಮಧ್ಯೆ ಪ್ರವೇಶಿಸ ಬೇಕೆಂದು ಸಂಸದರಲ್ಲಿ, ಹೈವೇ ಪ್ರಾಧಿಕಾರದಲ್ಲಿ ಕಾಂಗ್ರೆಸ್ ಮಂಡಲ ಸಮಿತಿ ಆಗ್ರಹಿಸಿದೆ. ಇಲ್ಲದಿದ್ದರೆ ತೀವ್ರ ಹೋರಾಟಕ್ಕೆ ಮುಂದಾಗು ವುದಾಗಿ ಕಾಂಗ್ರೆಸ್ ಎಚ್ಚರಿಸಿದೆ. ಪದಾಧಿಕಾರಿಗಳಾದ ವೇಲಾಯುಧನ್, ನಾರಾಯಣನ್ ನಾಯರ್, ಹನೀಫ್, ಅಹಮ್ಮದ್ ಚೌಕಿ ಎಂಬಿವರು ಹೇಳಿಕೆ ನೀಡಿದ್ದಾರೆ.

Leave a Reply

Your email address will not be published. Required fields are marked *

You cannot copy content of this page