ರಾಷ್ಟ್ರೀಯ ಹೆದ್ದಾರಿ ಬೇವಿಂಜೆ ಮೂಲಕ ಐದು ದಿನಗಳೊಳಗೆ ಸಾರಿಗೆ ಪುನರಾರಂಭ
ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ವೇಳೆ ಮಣ್ಣು ಕುಸಿದು ಬಿದ್ದ ಹಿನ್ನೆಲೆಯಲ್ಲಿ ವಾಹನ ಸಂಚಾರ ನಿಷೇಧಿಸಲಾದ ಬೇವಿಂಜೆಗೆ ಜಿಲ್ಲಾಧಿಕಾರಿ ಕೆ.ಇಂಭಶೇಖರ್ ಭೇಟಿ ನೀಡಿದರು. ರಾಷ್ಟ್ರೀಯ ಹೆದ್ದಾರಿ ಅಥೋರಿಟಿಯ ವರದಿ ಲಭಿಸಿದರೆ 5 ದಿನಗಳೊಳಗೆ ಸಾರಿಗೆ ಪುನ ರಾರಂಭಿಸಲಾಗುವುದೆಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ರಸ್ತೆಯ ಗೋಡೆ ನಿರ್ಮಾಣ ಕಾಮಗಾರಿಯನ್ನು ತುರ್ತಾಗಿ ಪೂರ್ಣಗೊಳಿಸುವಂತೆ ನಿರ್ಮಾಣದ ಗುತ್ತಿಗೆ ಕಂಪೆನಿಗೆ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಗೋಡೆ ನಿರ್ಮಾಣ ಪೂರ್ಣಗೊಳ್ಳಲು ಇನ್ನೂ ನಾಲ್ಕು ದಿನ ಬೇಕಾಗಿ ಬರಲಿ ದೆಯೆಂದು ಹೆದ್ದಾರಿ ನಿರ್ಮಾಣ ಪ್ರತಿನಿಧಿಗಳು ಜಿಲ್ಲಾಧಿಕಾರಿಗೆ ತಿಳಿಸಿದ್ದಾರೆ. ಧಾರಾಕಾರ ಮಳೆ ಸುರಿಯುತ್ತಿದ್ದ ವೇಳೆ ರಸ್ತೆಬದಿಯ ಗೋಡೆ ಕುಸಿದುಬಿದ್ದಿತ್ತು.