ವಿವಾಹ ಭರವಸೆಯೊಡ್ಡಿ ಯುವತಿಗೆ ಕಿರುಕುಳ: ಮುಟ್ಟತ್ತೋಡಿ ನಿವಾಸಿ ವಿರುದ್ದ ಕೇಸು

ಕಾಸರಗೋಡು: ವಿವಾಹ ಭರವಸೆಯೊಡ್ಡಿ ಕಣ್ಣೂರು ನಿವಾಸಿಯಾದ 24ರ ಹರೆಯದ ಯುವತಿಯನ್ನು ವಿವಿಧೆಡೆಗಳ ಲಾಡ್ಜ್‌ಗಳಿಗೆ ತಲುಪಿಸಿ ಲೈಂಗಿಕ ಕಿರುಕುಳ ನೀಡಿದ ಆರೋಪದಂತೆ ಮುಟ್ಟತ್ತೋಡಿಯ ಅಬ್ದುಲ್ ಅಜ್ಮಲ್ (25) ಎಂಬಾತನ ವಿರುದ್ದ ಕಾಸರಗೋಡು ನಗರಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. 2023 ಜೂನ್ 4ರಿಂದ 2025 ಜನವರಿ ವರೆಗೆ ಅಜ್ಮಲ್ ಯುವತಿಗೆ ಕಿರುಕುಳ ನೀಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಕಾಸರಗೋಡು, ಕಣ್ಣೂರು, ಕಲ್ಲಿಕೋಟೆ ಮೊದಲಾದೆಡೆಗಳಿಗೆ ಕರೆದೊಯ್ದು ಲಾಡ್ಜ್‌ಗಳಲ್ಲಿ ಯುವತಿಗೆ ಕಿರುಕುಳ ನೀಡಿರುವುದಾಗಿ ದೂರಲಾಗಿದೆ. ಮದುವೆ ಭರವಸೆಯೊಡ್ಡಿ ಕಿರುಕುಳ ನೀಡಿರುವುದಾಗಿಯೂ, ಆದರೆ ಅನಂತರ ಮದುವೆಯಾಗದೆ ಹಿಂಜರಿದನೆಂದು ಯುವತಿ ದೂರಿದ್ದಾಳೆ. ಈ ಹಿನ್ನೆಲೆಯಲ್ಲಿ  ಅಜ್ಮಲ್ ವಿರುದ್ಧ ಯುವತಿ ದೂರು ನೀಡಿದ್ದಾಳೆ. ಆರೋಪಿ ಪೊಲೀಸರ ಬಲೆಯಲ್ಲಿರುವುದಾಗಿ ಸೂಚನೆಯಿದೆ

RELATED NEWS
ಬದಿಯಡ್ಕದಲ್ಲಿ ಹಸಿರು ಕ್ರಿಯಾಸೇನೆಯಲ್ಲೂ ವಂಚನೆ: 4,000 ರೂ. ಯೂಸರ್ ಫೀಸ್ ಬ್ಯಾಂಕ್‌ನಲ್ಲಿ ಪಾವತಿಸಿ ಪಂ. ಕಚೇರಿಯಲ್ಲಿ ನೀಡಿದ ರಶೀದಿಯಲ್ಲಿ 40,000 ವಾಗಿ ತಿದ್ದುಪಡಿ; ಮಹಿಳಾ ಅಸೋಸಿಯೇಶನ್ ವಿಲ್ಲೇಜ್ ಅಧ್ಯಕ್ಷೆ ಸಹಿತ ಇಬ್ಬರನ್ನು ಕೆಲಸದಿಂದ ತೆರವು

You cannot copy contents of this page