ವಿಷ ಸೇವಿಸಿ ಆಸ್ಪತ್ರೆಯಲ್ಲಿದ್ದ ಯುವತಿ ಮೃತ್ಯು

ಕುಂಬಳೆ: ಮಂಗಳೂರಿನ ಪತಿ ಮನೆಯಿಂದ ಕುಂಬಳೆ ಪೆರು ವಾಡಿನಲ್ಲಿರುವ ತಾಯಿ ಮನೆಗೆ ಬಂದು ವಿಷ ಸೇವಿಸಿ ಗಂಭೀರ ಸ್ಥಿತಿಯಲ್ಲಿ ಪತ್ತೆಯಾದ ಯುವತಿ ಆಸ್ಪತ್ರೆಯಲ್ಲಿ ಮೃತಪಟ್ಟಳು.

ಪೆರುವಾಡ್ ನಿವಾಸಿ ಅಬ್ದುಲ್ ರಹ್ಮಾನ್-ನಫೀಸ ದಂಪತಿಯ ಪುತ್ರಿಯೂ ಮಂಗಳೂರು ನಿವಾಸಿ ನಸೀಫ್ ಎಂಬವರ ಪತ್ನಿಯಾದ ಸಾಜಿದ ಬಾನು (32) ಮೃತಪಟ್ಟ ಯುವತಿ.

ಸಾಜಿದಬಾನು ಕಳೆದ ಗುರುವಾರ ಪತಿ ಮನೆಯಿಂದ ಮಕ್ಕ ಳೊಂದಿಗೆ ಪೆರುವಾಡ್‌ಗೆ ಬಂದಿದ್ದರು. ಈ ವೇಳೆ  ಮನೆಯಲ್ಲಿ ಸಹೋದರನ ಪತ್ನಿ ಮಾತ್ರವೇ ಇದ್ದರು. ಇತರರು ಸಂಬಂಧಿಕರೋರ್ವರ ಮದುವೆಗೆ ತೆರಳಿದ್ದರೆನ್ನಲಾಗಿದೆ. ಈ ಮಧ್ಯೆ ಕೊಠಡಿಗೆ ತೆರಳಿದ ಸಾಜಿದಬಾನು ದೀರ್ಘ ಹೊತ್ತಾದರೂ ಹೊರಗೆ ಬಾರದ ಹಿನ್ನೆಲೆಯಲ್ಲಿ ಸಹೋದರನ ಪತ್ನಿ ನೋಡಿದಾಗ ಅರೆಪ್ರಜ್ಞಾ ವಸ್ಥೆಯಲ್ಲಿ  ಕಂಡುಬಂದಿದ್ದರೆನ್ನ ಲಾಗಿದೆ. ಕೂಡಲೇ ಮನೆಯವರಿಗೆ ವಿಷಯ ತಿಳಿಸಿದ್ದು ಅವರು ತಲುಪಿ ಸಾಜಿದ ಬಾನುರನ್ನು ಕುಂಬಳೆಯ ಆಸ್ಪತ್ರೆಗೆ ತಲುಪಿಸಿ ತಪಾಸಣೆ ನಡೆಸಿದಾಗ ವಿಷ ಸೇವಿಸಿರುವುದು ತಿಳಿದುಬಂದಿದೆ. ಸ್ಥಿತಿ ಗಂಭೀರವಾಗಿದ್ದುದರಿಂದ ಬಳಿಕ ಮಂ ಗಳೂರಿನ ಆಸ್ಪತ್ರೆಗೆ ತಲುಪಿಸಿ ದಾಖಲಿಸಲಾಗಿತ್ತು. ಸ್ಥಿತಿ ಗಂಭೀರ ವಾಗಿದ್ದುದರಿಂದ ಪೊಲೀಸರ ವಿನಂತಿ ಮೇರೆಗೆ  ಮೆಜಿಸ್ಟ್ರೇಟ್ ಆಸ್ಪತ್ರೆಗೆ ತಲುಪಿ ಯುವತಿಯಿಂದ ಹೇಳಿಕೆ ದಾಖಲಿಸಿಕೊಂಡಿದ್ದರು.   ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂ ಜಾನೆ ಸಾಜಿದಾಬಾನು ಮೃತಪಟ್ಟರು.

ಮೃತರು ತಂದೆ, ತಾಯಿ, ಪತಿ, ಮಕ್ಕಳಾದ ಆಯಿಶತ್ ಹಬೀಬ, ಫಾತಿಮತ್ ಸಹದಿಯಾ, ಉಮ್ಮು ಕುಲ್ಸು, ಸಹೋದರರಾದ ಸಾದಿಕ್, ಸಮೀರ್,ಫಿರೋಸ್ ಹಾಗೂ ಅಪಾರ  ಬಂಧು-ಮಿತ್ರರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

You cannot copy content of this page