ವ್ಯಕ್ತಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ
ಕಾಸರಗೋಡು: ವ್ಯಕ್ತಿಯೋರ್ವ ಮನೆಯೊಳಗೆ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಬೇಡಡ್ಕ ಪೊಲೀಸ್ ಠಾಣೆ ವ್ಯಾಪ್ತಿಯ ವಾವಡ್ಕ ಮುಚ್ಚೂರ್ಕುಳಂ ನಿವಾಸಿ ಸದಾಶಿವನ್ ಕೆ. (50) ಮೃತ ವ್ಯಕ್ತಿ. ಇವರು ನಿನ್ನೆ ಸಂಜೆ ಮನೆಯೊಳಗೆ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆನ್ನಲಾಗಿದೆ. ದಿ| ನಾರಾಯಣನ್- ಕಲ್ಯಾಣಿ ದಂಪತಿಯ ಪುತ್ರನಾದ ಮೃತರು ಪತ್ನಿ ಬಿಂದು, ಮಕ್ಕಳಾದ ನಿರ್ಮಾಲ್ಯ, ನವನೀತ್, ಅಳಿಯ ಜ್ಯೋತಿಷ್, ಸಹೋದರ-ಸಹೋದರಿಯರಾದ ಕುಮಾರನ್, ಚಂದುಞಿ, ಕುಂಞಿರಾಮನ್, ಕಮಲಾಕ್ಷಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.