ಶಿವಾಜಿನಗರದಲ್ಲಿ ಕಡಲ್ಕೊರೆತಕ್ಕೆ ಕಟ್ಟೆ, ಶೆಡ್ ಸಮುದ್ರಪಾಲು: ರಸ್ತೆ ಅಪಾಯದಂಚಿನಲ್ಲಿ

ಉಪ್ಪಳ: ಮಳೆ ಹೆಚ್ಚಾಗುತ್ತಿದ್ದಂತೆ ತೀರ ಪ್ರದೇಶದಲ್ಲಿ ಕಡಲ್ಕೊರೆತ ಮುಂದುವರಿಯುತ್ತಿದೆ. ಐಲ ಶಿವಾಜಿನಗರ ಶ್ರೀ ಶಾರದೋತ್ಸವ, ಗಣೇಶೋತ್ಸವ ಜಲಸ್ತಂಭನಾ ಕಟ್ಟೆ ಪೂರ್ತಿ ಸಮುದ್ರಪಾಲಾಗಿದ್ದು, ಇದರ ಪರಿಸರದಲ್ಲಿರುವ ಮೀನು ಕಾರ್ಮಿಕರ ಬಲೆ ಹಾಗೂ ಇತರ ಸಾಮಗ್ರಿಗಳನ್ನಿಡುವ ಕಾಂಕ್ರೀಟ್ ಶೆಡ್ ನೀರುಪಾಲಾಗುವ ಭೀತಿಯಲ್ಲಿದೆ. ಸಮೀಪದ ಕುದುಪುಳು, ಬಂಗ್ಲ ಎಂಬಲ್ಲಿ ಹಲವಾರು ಮರಗಳು ನೀರುಪಾಲಾಗಿವೆ. ಇಲ್ಲಿನ ರಸ್ತೆ ಅಪಾಯದಂಚಿನಲ್ಲಿದೆ.

ಮಣಿಮುಂಡ, ಹನುಮಾನ್ ನಗರ, ಮುಸೋಡಿ, ಕುಂಡುಕೊಳಕೆ, ಕಣ್ವತೀರ್ಥ ಮೊದಲಾದ ಕಡೆಗಳಲ್ಲಿ ಕಡಲ್ಕೊರೆತ ವ್ಯಾಪಕಗೊಂಡಿದ್ದು, ಈ ಪರಿಸರ ನಿವಾಸಿಗಳು ಆತಂಕಿತರಾಗಿದ್ದಾರೆ.

RELATED NEWS

You cannot copy contents of this page