ಶ್ರೀಕೃಷ್ಣ ಜಯಂತಿ ಶೋಭಾಯಾತ್ರೆ ಬಳಿಕ ಮರಳುತ್ತಿದ್ದ ಬಿಜೆಪಿ ಕಾರ್ಯಕರ್ತನಿಗೆ ಇರಿತ

ಕಣ್ಣೂರು: ಶ್ರೀಕೃಷ್ಣ ಜಯಂತಿ ಆಚರಣೆ ಅಂಗವಾಗಿ ನಡೆದ ಶೋಭಾಯಾತ್ರೆಯಲ್ಲಿ ಪಾಲ್ಗೊಂಡು ಮರಳಿ ಮನೆಗೆ ಹೋಗುತ್ತಿದ್ದ ಬಿಜೆಪಿ ಕಾರ್ಯಕರ್ತನಿಗೆ ತಂಡವೊಂದ ಇರಿದು ಗಾಯಗೊಳಿಸಿದ ಘಟನೆ ನಡೆದಿದೆ.

ಕರಿಕ್ಕಾಟ್ ಶ್ರೀ ಮುತ್ತಪ್ಪನ್ ಕ್ಷೇತ್ರ ಸಮೀಪದ ಪಿ.ಸಿ. ಬಾಬು (32) ಎಂಬವರಿಗೆ ಇರಿದು ಗಾಯಗೊಳಿಸಲಾಗಿದೆ. ನಿನ್ನೆ ರಾತ್ರಿ 7 ಗಂಟೆ ವೇಳೆ ಕಲ್ಯಾಶೇರಿ ಸೆಂಟ್ರಲ್ ಕರಿಕ್ಕಾಟ್ ಶ್ರೀ ಮುತ್ತಪ್ಪನ್ ಕ್ಷೇತ್ರ ಸಮೀಪ ಘಟನೆ ನಡೆದಿದೆ. ಇರಿತದಿಂದ ಗಾಯಗೊಂಡ ಬಾಬುರನ್ನು ಕಣ್ಣೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ನಿನ್ನೆ ಸಂಜೆ ಕಲ್ಯಾಶೇರಿ ಕೋಲತ್ತ್ ವಯಲ್ ಎಂಬಲ್ಲಿ ಶೋಭಾಯಾತ್ರೆ ನಡೆಯುತ್ತಿದ್ದಂತೆ ಪ್ರಚಾರ ವಾಹನದ ಮೇಲೆ ಆಕ್ರಮಣ ನಡೆದಿತ್ತು. ಈ ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ಅದೇ ವಾಹನದಲ್ಲಿದ್ದ ಬಾಬುರಿಗೆ ತಂಡವೊಂದು ಹಲ್ಲೆಗೈದಿತ್ತು. ಡಿವೈಎಫ್‌ಐ ಕಾರ್ಯಕರ್ತರು ಈ ಆಕ್ರಮಣ ನಡೆಸಿರುವುದಾಗಿ ಬಿಜೆಪಿ ಮೂಲಗಳು ಆರೋಪಿಸಿವೆ. ಆದರೆ ಈ ಆರೋಪವನ್ನು ಸಿಪಿಎಂ ಹಾಗೂ ಡಿವೈಎಫ್‌ಐ ನಿಷೇಧಿಸಿವೆ.

Leave a Reply

Your email address will not be published. Required fields are marked *

You cannot copy content of this page