ಸಂಚರಿಸುತ್ತಿದ್ದ ಕಂಟೈನರ್ ಲಾರಿಗೆ ವಿದ್ಯುತ್ ತಂತಿ ಸ್ಪರ್ಶಿಸಿ ಬೆಂಕಿ: ಸೃಷ್ಟಿಯಾದ ಆತಂಕ
ಕಾಸರಗೋಡು: ಸಂಚರಿಸುತ್ತಿದ ಕಂಟೈನರ್ ಲಾರಿಗೆ ವಿದ್ಯುತ್ ತಂತಿ ಸ್ಪರ್ಶಿಸಿ ಅದರಿಂದ ಬೆಂಕಿ ತಗಲಿ ಭಾರೀ ಆತಂಕ ಸೃಷ್ಟಿಸಿದ ಘಟನೆ ಕಾಸರಗೋಡು- ಹೊಸದುರ್ಗ ರಾಜ್ಯ ಹೆದ್ದಾರಿಯ ಮೇಲ್ಪರಂಬ ಕೂವತ್ತಡಿ ಯಲ್ಲಿ ನಿನ್ನೆ ಸಂಜೆ ನಡೆದಿದೆ.ಪುಣೆಯಿಂದ ರೆಫ್ರಿಜರೇಟರ್ ಹೇರಿಕೊಂಡು ಕಲ್ಲಿಕೋಟೆಗೆ ಸಾಗುತ್ತಿದ್ದ ಕಂಟೈನರ್ ಲಾರಿ ಕೂವತ್ತಡಿಗೆ ತಲುಪಿದಾಗ ಆ ರಸ್ತೆಯ ಮೇಲ್ಭಾಗದ ಮೂಲಕ ಹಾದು ಹೋಗುತ್ತಿರುವ ವಿದ್ಯುತ್ ಲೈನ್ ಸ್ಪರ್ಶಿಸಿ ಅದರಿಂದ ಲಾರಿಗೆ ಬೆಂಕಿ ತಗಲಿಕೊಂಡಿದೆ. ಆ ವೇಳೆ ಅಲ್ಲಿದ್ದ ಬೇಕಲ ಪೊಲೀಸರು ನೀಡಿದ ಮಾಹಿತಿಯಂತೆ ಸ್ಟೇಷನ್ ಆಫೀಸರ್ ಕೆ. ಹರ್ಷಾರ ನೇತೃತ್ವದ ಕಾಸರಗೋಡು ಅಗ್ನಿಶಾಮಕದಳದ ಎರಡು ವಾಹನಗಳಲ್ಲಾಗಿ ತಕ್ಷಣ ಘಟನಾ ಸ್ಥಳಕ್ಕೆ ಆಗಮಿಸಿ ನಡೆಸಿದ ಅವಿರತ ಪ್ರಯತ್ನದ ಫಲವಾಗಿ ಬೆಂಕಿ ನಂದಿಸಿದರು. ಅದರ ಮೊದಲು ವಿದ್ಯುನ್ಮಂಡಳಿಯವರು ತಕ್ಷಣ ವಿದ್ಯುತ್ ಸಂಪರ್ಕವನ್ನು ಮೊಟಕುಗೊಳಿಸಿದರು. ಆ ಬಳಿಕವಷ್ಟೇ ಬೆಂಕಿ ನಂದಿಸುವ ಕಾರ್ಯಾಚರಣೆ ಆರಂಭಗೊಂಡಿತು. ಕಂಟೈನರ್ ಲಾರಿಯೊಳಗಿದ್ದ ಲಕ್ಷಾಂ ತರ ರೂ. ಮೌಲ್ಯದ ಹಲವು ರೆಫ್ರಿಜರೇ ಟರ್ಗಳನ್ನು ಅದರೊಳಗಿನಿಂದ ಸುರಕ್ಷಿತವಾಗಿ ಹೊರ ತೆಗೆಯಲಾ ಯಿತು. 10ರಷ್ಟು ರೆಫ್ರಿಜರೇಟರ್ ಬೆಂಕಿಹಾಗುತಿಯಾಗಿವೆ. ಇದರಿಂದ ಲಕ್ಷಾಂತರ ರೂ.ಗಳ ನಷ್ಟ ಉಂಟಾಗಿದೆ. ಸೀನಿಯರ್ ಫಯರ್ ಆಂಡ್ ರೆಸ್ಕ್ಯೂ ಆಫೀಸರ್ ಸನ್ನಿ ಇಮಾನ್ಯುಲ್ ಅಗ್ನಿಶಾಮಕ ದಳದ ಇತರ ಸಿಬ್ಬಂದಿಗಳಾದ ಕೆ.ಆರ್. ಅಜೇಶ್, ಶೈಜು ಟಿ, ಅಮಲ್ ರಾಜ್, ಅಖಿಲ್, ಅಶೋಕನ್, ಜೆ.ಎ ಅಭಯ್ ಸನ್, ಸಾಧಿಕ್, ವೈಶಾಖ್, ಟಿ.ಪಿ. ಪ್ರವೀಣ್ ಮತ್ತು ಸುಮೇಶ್ ಎಂಬವರು ಈ ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡರು