ಸಂಚರಿಸುತ್ತಿದ್ದ ಬಸ್‌ನಲ್ಲಿ ಚಾಲಕ ಹೃದಯಾಘಾತದಿಂದ ನಿಧನ

ಉಪ್ಪಳ: ಬಸ್ ಚಲಾಯಿಸುತ್ತಿದ್ದಂತೆ ಚಾಲಕ ಹೃದಯÁಘಾತವುಂಟಾಗಿ ಮೃತಪಟ್ಟ ಘಟನೆ ನಡೆದಿದೆ. ಚೇವಾರು ಸಮೀಪದ ಕುಂಟAಗೇರಡ್ಕ ನಿವಾಸಿ ದಿ| ಮೊಯ್ದೀನ್ ಕುಂಞಯವರ ಪುತ್ರ ಅಬ್ದುಲ್ ರಹಿಮಾನ್ [42] ಮೃತಪm್ಟ ವ್ಯಕ್ತಿ. ಇವರು ಧರ್ಮತ್ತಡ್ಕ- ಬಂದ್ಯೋಡು-ಕಾಸರಗೋಡು ರೂಟ್‌ನಲ್ಲಿ ಸಂಚರಿಸುವ ಜಿಸ್ತಿಯಾ ಬಸ್‌ನ ಚಾಲಕರಾಗಿದ್ದಾರೆ. ನಿನ್ನೆ ಬೆಳಿಗ್ಗೆ ಧರ್ಮv್ತÀಡ್ಕದಿಂದ ಕಾಸರಗೋಡಿಗೆ ಬಸ್ ಹೊರಟಿದೆ. ಪೆರ್ಮುದ ತಲುಪಿದಾಗ ಎದೆನೋವು ಅನುಭವಗೊಡಿದೆತ್ತೆನ್ನಲಾಗಿದೆ.
ಕುಂಟAಗೇರಡ್ಕ ತಲುಪುತ್ತಿದ್ದಂತೆ ಅಸ್ವಸ್ಥಗೊಂಡಿದ್ದರು. ಇದರಿಂದ ಬಸ್‌ನ್ನು ಬದಿಗೆ ಸರಿಸಿ ನಿಲ್ಲಿಸಿದ್ದು, ಅಷ್ಟರಲ್ಲಿ ಕುಸಿದುಬಿದ್ದರು. ಅವರನ್ನು ಕೂಡಲೇ ಸ್ಥಳೀಯರು ಸೇರಿ ಬಂ ದ್ಯೋಡಿನ ಖಾಸಗಿ ಆಸ್ಪತ್ರೆಗೆ ಸಾಗಿಸುವ ಮಧ್ಯೆ ಮೃತಪಟ್ಟರು. ಇವರು 16 ವರ್ಷಗಳಿಂದ ಬಸ್ ಚಾಲಕರಾಗಿ ದುಡಿಯುತ್ತಿದ್ದರು. ರೆಡ್ ಬೊಯ್ಸ್ ಕ್ಲಬ್ ಕುಂಟAಗೇರಡ್ಕ ಇದರ ಸದಸ್ಯರಾ ಗಿದ್ದಾರೆ. ಮೃತರು ತಾಯಿ ಮರಿಯಮ್ಮ, ಪತ್ನಿ ಸುಹರ, ಪುತ್ರ ಅರ್‌ಫತ್, ಸಹೋದರ ಮೊಹಮ್ಮದಲಿ, ಸಹೋ ದರಿಯರಾದ ಬೀಫಾತಿಮ್ಮ, ನೆಬೀಸ, ಅತಿಕಾ, ಅವ್ವಮ್ಮ ಹಾಗೂ ಅಪಾರ ಬಂಧುಗಳು, ಸ್ನೇಹಿತರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

You cannot copy content of this page