ಸಂಪತ್ತಿನ ಅಧಿದೇವತೆ ರುದ್ರನ ಆರಾಧನೆ ಸಮೃದ್ಧಿಗೆ ಕಾರಣವಾಗುತ್ತದೆ- ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ
ಮಧೂರು: ಭಗವಂತನ ಭಕ್ತರಲ್ಲಿ ಐಹಿಕ ಮತ್ತು ಪಾರಮಾರ್ಥಿಕ ಎಂಬೆ ರಡಕ್ಕೂ ಅನುಗ್ರಹ ಬೇಕು. ಸಂಪತ್ತಿನ ಅಧಿದೇವತೆಯಾದ ರುದ್ರನ ಆರಾಧನೆ ಸಮೃದ್ಧಿಗೆ ಕಾರಣವಾಗುತ್ತದೆ. ಜೊತೆಗೆ ಸಾರ್ಥಕ್ಯ ಸಾಯುಜ್ಯಕ್ಕೂ ಅವನ ಅನುಗ್ರಹ ಬೇಕು ಎಂದು ಉಡುಪಿ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರತೀರ್ಥ ಸ್ವಾಮೀಜಿ ನುಡಿದರು. ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಾಲಯದಲ್ಲಿ ನಡೆಯುತ್ತಿರುವ ಅಷ್ಟಬಂಧ ಬ್ರಹ್ಮಕಲಶೋತ್ಸವ- ಮೂಡಪ್ಪ ಸೇವೆಯಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಮಾತನಾಡಿದರು.
ಆನೆಗುಂದಿ ಮಹಾಸಂಸ್ಥಾನದ ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಿ, ಯಾವ ಕುಲದಲ್ಲಿ ಜನಿಸಿದರೂ ಭಗವದನುಗ್ರಹಕ್ಕೆ ಭಕ್ತಿ ಮಾರ್ಗವೊಂದೇ ನಮಗಿರುವ ಸುಲಭ ವಿಧಾನ. ನೇರವಾಗಿರುವುದಕ್ಕೆ ಮುರಿಯುವ ಭೀತಿ ಸಹಜ. ಆದರೆ ಬಾಗಿದವರಿಗೆ ಆ ಭೀತಿ ಇಲ್ಲ. ಮನುಷ್ಯರಲ್ಲಿ ಭಗವಂತನನ್ನು ಕಾಣಬೇಕೆಂಬ ನಮ್ಮ ಸಂಸ್ಕೃತಿಯಲ್ಲಿ ಇತರರೊಂದಿಗೆ ಬಾಗಿ ಬದುಕುವ ಸಾಧನಾಪಥದಲ್ಲಿ ಲಕ್ಷ್ಯಪ್ರಾಪ್ತಿಯನ್ನು ಗುರಿಯಾಗಿಸಿ ಸಾಗುವ ಭಜಕರಿಗೆ ಸದಾ ದೇವರ ಅನುಗ್ರಹ ಇರುತ್ತದೆ ಎಂದವರು ತಿಳಿಸಿದರು.
ಮೈಸೂರಿನ ಶ್ರೀ ಅರ್ಜುನ ಅವ ಧೂತ ಮಹಾರಾಜರು ಮಾತನಾಡಿ, ಕೇರಳದ ಆಚಾರ-ವಿಚಾರ ಆರಾಧನೆ ಗಳು ವಿಶೇಷ ಮಹತ್ವಿಕೆಯಿಂದ ಕೂಡಿದ್ದು, ಕರ್ಮಭೂಮಿಯು, ಧರ್ಮಭೂಮಿಯೂ ಆದ ಇಲ್ಲಿ ಭಗವಂತನ ಅನುಗ್ರಹ ಅತೀ ಸುಲಭ. ಹಿಂದೂ ಧರ್ಮದ ಮೇಲಾಗುವ ಎಲ್ಲಾ ಸವಾಲುಗಳನ್ನು ಮೆಟ್ಟಿ ನಿಂತು ಏಕತೆಯ ಮಂತ್ರದೊಂ ದಿಗೆ ಸಾಗುವ ಮನಸ್ಸು ನಮ್ಮದಾಗಲಿ ಎಂದು ಅವರು ನುಡಿದರು. ಮಾಣಿಲ ಶ್ರೀಧಾಮದ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿದರು. ಸಾಲಿಗ್ರಾಮ ಗುರುನರಸಿಂಹ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಡಾ. ಕೆ.ಎಸ್. ಕಾರಂತ ಅಧ್ಯಕ್ಷತೆ ವಹಿಸಿದರು. ಪೆರಿಯ ಗೋಕುಲಂ ಗೋಶಾಲೆಯ ವಿಷ್ಣುಪ್ರಸಾದ್ ಹೆಬ್ಬಾರ್, ಮಲ್ಲ ಕ್ಷೇತ್ರದ ಆಡಳಿತ ಮೊಕ್ತೇಸರ ಸತ್ಯನಾರಾಯಣ ಆನೆಮಜಲು, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ದೈವಜ್ಞ ನಾಗೇಂದ್ರ ಭಾರದ್ವಾಜ್ ಸುರತ್ಕಲ್ ಉಪಸ್ಥಿತರಿದ್ದರು.
ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷರಾದ ಆನಂದ, ವಾಸುದೇವ ಹೊಳ್ಳ ಎಲ್ಲಂಗಳ, ಅಲಂಕಾರ ಸಮಿತಿ ಸಂಚಾಲಕ ಯೋಗೀಂದ್ರ ಆರ್., ಗಣೇಶ್ ನಾಕ್, ಕೋಟೆಕಾರ್ ಪ್ರಭಾಕರ ಆಚಾರ್ಯ, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಜಯದೇವ ಖಂಡಿಗೆ, ಮುರಳಿ ಕುಮಾರ್, ಗಿರೀಶ್ ಮಾತನಾಡಿದರು. ಸಮಿತಿ ಕಾರ್ಯದರ್ಶಿ ನಾರಾಯಣ ಕೊಲ್ಯ ಪ್ರಸ್ತಾಪಿಸಿ, ಸ್ವಾಗತಿ ಸಿದರು. ಜೊತೆ ಕಾರ್ಯದರ್ಶಿ ಧನಜಂಯ ಮಧೂರು ವಂದಿಸಿ, ಲೋಕೇಶ್ ಎಂ.ಬಿ. ಆಚಾರ್ಯ ನಿರೂಪಿಸಿದರು.