ಸಚಿವೆ ಆರ್. ಬಿಂದು ನಾಳೆ ಕಾಸರಗೋಡಿಗೆ

ಕಾಸರಗೋಡು: ರಾಜ್ಯ ಉನ್ನತ ಶಿಕ್ಷಣ ಸಚಿವೆ ಆರ್. ಬಿಂದು ನಾಳೆ ಕಾಸರಗೋಡಿಗೆ ಆಗಮಿಸಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವರು.

ಇದರಂತೆ ನಾಳೆ ಬೆಳಿಗ್ಗೆ 9ಕ್ಕೆ ಮುನ್ನಾಡ್ ಸರಕಾರಿ ಹೈಸ್ಕೂಲಿನ ಪ್ರವೇ ಶದ್ವಾರದ ಉದ್ಘಾಟನೆ ನೆರವೇರಿಸುವರು. ನಂತರ 11 ಗಂಟೆಗೆ ಪೊವ್ವಲ್ ಎಲ್.ಬಿ.ಎಸ್. ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆಯುವ ವಿಚಾರ ಗೋಷ್ಠಿಯನ್ನು  ಉದ್ಘಾಟಿಸುವರು. 11 ಗಂಟೆಗೆ ಕಾಸರಗೋಡು ಸರಕಾರಿ ಕಾಲೇಜಿನ ಜಿಯೋಲಜಿ ಮ್ಯೂಸಿಯಂನ್ನು ಉದ್ಘಾಟಿಸಿ, ಮೊಬೈಲ್ ಕಿಯೋಕ್ಸ್‌ಗಳ ವಿತರಣೆ  ಕಾರ್ಯಕ್ರಮ ನೆರವೇರಿಸುವರು. ಆ ಬಳಿಕ 11.30ಕ್ಕೆ ಕಾಸರಗೋಡು ಕಲೆಕ್ಟ ರೇಟ್‌ನಲ್ಲಿ ನಡೆಯುವ ‘ಸಹಜೀವನಂ ಸ್ನೇಹ ಗ್ರಾಮ’ದ ಅವಲೋಕನಾ ಸಭೆಯಲ್ಲಿ ಸಚಿವರು ಭಾಗವಹಿಸುವರು.

ಮಧ್ಯಾಹ್ನ 1.30ಕ್ಕೆ ಹೊಸದುರ್ಗ ನೆಹರೂ ಕಾಲೇಜಿನ ನವೀಕೃತ ಸಭಾಂಗಣ ವನ್ನು ಉದ್ಘಾಟಿಸುವರು. 2.30ಕ್ಕೆ ಹೊಸ ದುರ್ಗ ಟೌನ್‌ಹಾಲ್‌ನಲ್ಲಿ ನಡೆಯುವ ಎಸ್.ಜೆ.ಡಿ. ಮೆಡಿಕಲ್ ಉಪಕರಣಗಳ ವಿತಚರಣೆ, ಸಂಜೆ ೪ಕ್ಕೆ ಪೆರಿಯ ಎಂ.ಸಿ.ಆರ್.ಸಿ.ನಲ್ಲಿ ಎಂಡೋಸಲ್ಫಾನ್ ಸಂತ್ರಸ್ತರು ಹಾಗೂ ಅವರ ಕುಟುಂಬದವರ ಉಪಜೀವನಕ್ಕಾಗಿ ಆರಂಭಿಸಲಾಗಿರುವ ಕೈಮಗ್ಗ ಘಟಕವನ್ನು ಸಚಿವರು ಉದ್ಘಾಟಿಸುವರು. ಆ ಬಳಿಕ ಸಂಜೆ ೫ಕ್ಕೆ ಹೊಸದುರ್ಗದಲ್ಲಿ ಆನ್‌ಲೈನ್ ಮೂಲಕ ನಡೆಯುವ ಎಲ್.ಬಿ.ಎಸ್.ಜಿ.ಬಿ ಕಾರ್ಯಕ್ರಮದಲ್ಲಿ ಸಚಿವರು ಭಾಗವಹಿಸುವರು.

Leave a Reply

Your email address will not be published. Required fields are marked *

You cannot copy content of this page