ಸಮಯ ವಿಷಯದಲ್ಲಿ ಬಸ್ ಸಿಬ್ಬಂದಿಗಳ ಮಧ್ಯೆ ಘರ್ಷಣೆ: ಇಬ್ಬರ ಸೆರೆ
ಕುಂಬಳೆ: ಸಮಯದ ವಿಷಯದಲ್ಲಿ ಖಾಸಗಿ ಬಸ್ ಕಾರ್ಮಿಕರ ನಡುವೆ ಘರ್ಷಣೆ ಉಂಟಾಗಿ ಅದಕ್ಕೆ ಸಂಬಂಧಿಸಿ ನೀಡಲಾದ ದೂರಿನಂತೆ ನಾಲ್ವರ ವಿರುದ್ಧ ಕುಂಬಳೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಮಾತ್ರವಲ್ಲ ಇಬ್ಬರನ್ನು ಬಂಧಿಸಿದ್ದಾರೆ.
ತಲಪಾಡಿ- ಕಾಸರಗೋಡು ರೂಟ್ನ ಖಾಸಗಿ ಬಸ್ಸೊಂದರ ಕಾರ್ಮಿಕ ಕುಂಬಳೆ ಕಂಚಿಕಟ್ಟೆಯ ರೋಷನ್ (22) ಮತ್ತು ಆತನ ಸ್ನೇಹಿತ ಕೊಪಾಡಿ ಕಡಪ್ಪುರದ ಖಾಲೀದ್ (44) ಎಂಬವರು ಬಂಧಿತ ರಾದವರು. ಚೇರೂರು- ತಲಪಾಡಿ ರೂಟಿನಲ್ಲಿ ಸೇವೆ ನಡೆಸುತ್ತಿರುವ ಖಾಸಗಿ ಬಸ್ನ ಚಾಲಕ ಮುಟ್ಟತ್ತೋಡಿ ಕಲ್ಲಕಟ್ಟೆ ಜುಮ್ಮ ಮಸೀದಿ ಬಳಿ ನಿವಾಸಿ ಮೊಹಮ್ಮದ್ ಸಲೀಂ (28) ನೀಡಿದ ದೂರಿನಂತೆ ಕುಂಬಳೆ ಪೊಲೀಸರು ಈ ನಾಲ್ವರ ವಿರುದ್ಧ ನರಹತ್ಯಾಯತ್ನ ಸೆಕ್ಷನ್ ಪ್ರಕಾರ ಕೇಸು ದಾಖಲಿಸಿಕೊಂಡಿದ್ದಾರೆ.
ಬಸ್ಸಿನ ಸೇವಾ ಸಮಯದ ಹೆಸರಲ್ಲಿ ನಿನ್ನೆ ಸಂಜೆ ಕುಂಬಳೆ ಅಂಡರ್ ಪ್ಯಾಸೇಜ್ನಲ್ಲಿ ಈ ನಾಲ್ವರು ಆರೋಪಿಗಳು ನನ್ನ ಮೇಲೆ ಹಲ್ಲೆ ನಡೆಸಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಮೊಹಮ್ಮದ್ ಸಲೀಂ ಆರೋಪಿಸಿದ್ದಾರೆ.