ಸಮೋಸ ವಿಷಯದಲ್ಲಿ ತರ್ಕ ಹೋಟೆಲ್ ಮಾಲಕನನ್ನು ಗುಂಡಿಕ್ಕಿ ಕೊಂದ ತಂಡ
ಲಕ್ನೋ: ಕೇವಲ ಒಂದು ಸಮೋಸದ ವಿಷಯದಲ್ಲಿ ಉಂಟಾದ ತರ್ಕ ಹೋಟೆಲ್ ಮಾಲಕನ ಕೊಲೆಯಲ್ಲಿ ಪರ್ಯವಸಾನ ಗೊಂಡಿದೆ. ಉತ್ತರಪ್ರದೇಶದ ಗುರುಗ್ರಾಮ್ ಫಾರೂಕ್ ನಗರದಲ್ಲಿ ಈ ಘಟನೆ ನಡೆದಿದೆ. ರಾಕೇಶ್ ಕುಮಾರ್ ಎಂಬವರು ಕೊಲೆಗೀಡಾದ ವ್ಯಕ್ತಿಯಾಗಿದ್ದಾರೆ. ಸೋಮವಾರ ಬೆಳಿಗ್ಗೆ ಯುವಕರ ತಂಡವೊಂದು ಹೋಟೆಲ್ಗೆ ತಲುಪಿ ಚಹಾ ಕುಡಿದಿತ್ತು. ಬಳಿಕ ಸಮೋಸ ಪಡೆದ ವಿಷಯದಲ್ಲಿ ರಾಕೇಶ್ ಹಾಗೂ ತಂಡದ ಮಧ್ಯೆ ತರ್ಕವುಂಟಾಗಿತ್ತು. ಈ ವೇಳೆ ಕೊಲೆ ಬೆದರಿಕೆಯೊಡ್ಡಿ ತಂಡ ಅಲ್ಲಿಂದ ಮರಳಿತ್ತು. ಈ ಬಗ್ಗೆ ರಾಕೇಶ್ ಪೊಲೀಸ್ ಠಾಣೆಗೆ ತಲುಪಿ ದೂರು ನೀಡಿದ್ದರೆನ್ನಲಾಗಿದೆ. ಈಮಧ್ಯೆ ನಿನ್ನೆ ಬೆಳಿಗ್ಗೆ ಮತ್ತೆ ಹೋಟೆಲ್ಗೆ ತಲುಪಿದ ತಂಡ ಗುಂಡು ಹಾರಿಸಿ ರಾಕೇಶ್ರನ್ನು ಕೊಲೆಗೈದಿದೆ ಎನ್ನಲಾಗಿದೆ. ಆರೋಪಿಗಳಿಗಾಗಿ ಪೊಲೀಸರು ಶೋಧ ಆರಂಭಿಸಿದ್ದಾರೆ.