ಸಹೋದರಿ ಮನೆಗೆಂದು ತಿಳಿಸಿ ಹೋದ ಯುವಕ ನಾಪತ್ತೆ

ಪೆರ್ಲ: ಸಹೋದರಿಯ ಮನೆಗೆಂದು ತಿಳಿಸಿ ಹೋದ ಯುವಕ ನಾಪತ್ತೆಯಾದ ಬಗ್ಗೆ ದೂರಲಾಗಿದೆ. ಪೆರ್ಲ ಕಾಟುಕುಕ್ಕೆ ಅರೆಕ್ಕಡಿ ಎಂಬಲ್ಲಿನ ಜಯೇಶ್ (35) ನಾಪತ್ತೆಯಾದ ಬಗ್ಗೆ ದೂರಲಾಗಿದ್ದು, ಇದರಂತೆ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಈ ತಿಂಗಳ 9ರಂದು ಬೆಳಿಗ್ಗೆ 11 ಗಂಟೆಗೆ ಸಹೋದರಿಯ ಮನೆಗೆಂದು ತಿಳಿಸಿ ಜಯೇಶ್ ತೆರಳಿದ್ದರೆನ್ನ ಲಾಗಿದೆ. ಆದರೆ ಸಹೋದರಿಯ ಮನೆಗೆ ಅವರು ತಲುಪಿಲ್ಲ. ಈ ಹಿನ್ನೆಲೆಯಲ್ಲಿ ಅವರ ಮೊಬೈಲ್ ಫೋನ್‌ಗೆ ಕರೆ ಮಾಡಿದಾಗ ಅದು ಸ್ವಿಚ್ ಆಫ್ ಆದ ಸ್ಥಿತಿಯಲ್ಲಿದೆ ಎನ್ನಲಾಗಿದೆ. ಈ ಬಗ್ಗೆ ಸಹೋದರ ರಾಜೇಶ್ ಬದಿಯಡ್ಕ ಪೊಲೀಸರಿಗೆ ದೂರು ನೀಡಿದ್ದಾರೆ.

Leave a Reply

Your email address will not be published. Required fields are marked *

You cannot copy content of this page