ಸಾರಾಯಿ, ಗಾಂಜಾ ಮತ್ತು ಕಳ್ಳಭಟ್ಟಿ ವಶ
ಕಾಸರಗೋಡು: ಅಬಕಾರಿ ತಂಡ ನಿನ್ನೆ ಜಿಲ್ಲೆಯ ಮೂರೆಡೆಗಳಲ್ಲಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ಕರ್ನಾಟಕ ನಿರ್ಮಿತ ಮದ್ಯ, ಹುಳಿರಸ (ವಾಶ್) ಮತ್ತು ಗಾಂಜಾ ವಶಪಡಿಸಿಕೊಂಡಿದೆ. ಇದರಂತೆ ನೀಲೇಶ್ವರ ರೇಂಜ್ ಎಕ್ಸೈಸ್ ಇನ್ಸ್ಪೆಕ್ಟರ್ ಎನ್. ವೈಶಾಖ್ ನೇತೃತ್ವದ ತಂಡ ವೆಳ್ಳರಿಕುಂಡ್ ಪಾಲಾವಯಲ್ನ ಮಯ್ಯಲ್ನಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ 20 ಗ್ರಾಂ ಗಾಂಜಾ ವಶಪಡಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿ ಪಾಲಾವಯಲ್ ಮಯ್ಯಾಲ್ ವಲಿಯವೀಟಿಲ್ನ ಜಿಷ್ಣು ವಿ. (26) ಎಂಬಾತನನ್ನು ಬಂಧಿಸಿ, ಆತನ ವಿರುದ್ಧ ಕೇಸು ದಾಖಲಿಸಲಾಗಿದೆ. ಈ ಕಾರ್ಯಾಚರಣೆ ನಡೆಸಿದ ಅಬಕಾರಿ ತಂಡದಲ್ಲಿ ಸಿವಿಲ್ ಎಕ್ಸೈಸ್ ಆಫೀಸರ್ಗಳಾದ ದಿನೂಪ್ ಕೆ, ಸುಧೀರ್ ಪಾರಮ್ಮಲ್, ಶೈಲೇಶ್ ಕುಮಾರ್ ಪಿ, ಶಮ್ಯ ಹಾಗೂ ಚಾಲಕ ರಾಜೀವನ್ ಪಿ. ಎಂಬವರು ಒಳಗೊಂಡಿದ್ದರು. ಇದೇ ರೀತಿ ಕಾಟುಕುಕ್ಕೆಯ ಅಡ್ಕಸ್ಥಳದಲ್ಲಿ ಕಾಸರಗೋಡು ಎಕ್ಸೈಸ್ ಸರ್ಕಲ್ ಕಚೇರಿಯ ಅಸಿಸ್ಟೆಂಟ್ ಎಕ್ಸೈಸ್ ಇನ್ಸ್ಪೆಕ್ಟರ್ (ಗ್ರೇಡ್) ಎಂ.ವಿ. ಸುಧೀಂದ್ರನ್ರ ನೇತೃತ್ವದ ಅಬಕಾರಿ ತಂಡ ನಡೆಸಿದ ಕಾರ್ಯಾಚರಣೆ ಯಲ್ಲಿ 4.32 ಲೀಟರ್ ಕರ್ನಾಟಕ ನಿರ್ಮಿತ ಮದ್ಯ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಆದರೆ ಈ ಸಂಬಂಧ ಯಾರನ್ನೂ ಬಂಧಿಸಲಾಗಿಲ್ಲವೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದೇ ರೀತಿ ಬೇಡಗ ಚೆಂಬಂಕಾಡ್ನಲ್ಲಿ ಪಾಯಂ ಚೆಂಬಂಕಾಡ್ ರಸ್ತೆ ಬಳಿಯ ವಿದ್ಯುತ್ ಟ್ರಾನ್ಸ್ಫಾರ್ಮರ್ ಸನಿಹದ ಪೊದೆಯಲ್ಲಿ ವಿವಿಧ ಬಕೆಟ್ಗಳಲ್ಲಾಗಿ ತುಂಬಿಸಿಡಲಾಗಿದ್ದ ಒಟ್ಟು ೩೫ ಲೀಟರ್ ಹುಳಿರಸ ಪತ್ತೆಹಚ್ಚಿ ವಶಪಡಿಸಲಾಗಿದೆ. ಬಂದಡ್ಕ ರೇಂಜ್ ಎಕ್ಸೈಸ್ ಪ್ರಿವೆಂಟಿವ್ ಆಫೀಸರ್ ಸುಜಿತ್ ಪಿ.ರ ನೇತೃತ್ವದಲ್ಲಿ ಸಿಇಒಗಳಾದ ರಮೇಶ್ ಬಾಬು, ಗಣೇಶ್ ಕೆ, ಸಿಇಒ ಡ್ರೈವರ್ ರಾಮಕೃಷ್ಣನ್ ಎಂಬವರನ್ನೊಳಗೊಂಡ ಅಬಕಾರಿ ತಂಡ ಈ ಕಾರ್ಯಾಚರಣೆ ನಡೆಸಿದೆ.