ಹೃದಯಾಘಾತ: ಮಧ್ಯವಯಸ್ಕ ನಿಧನ

ಕುಂಬಳೆ: ಕುಂಬಳೆ ಬದ್ರಿಯಾನಗರ ನಿವಾಸಿ ಅಶ್ರಫ್ (50)  ಎಂಬವರು ಹೃದಯಾಘಾತದಿಂದ ನಿಧನ ಹೊಂದಿದರು.  ನಿನ್ನೆ ರಾತ್ರಿ 12 ಗಂಟೆ ವೇಳೆ ಮನೆಯಲ್ಲಿ  ಇವರಿಗೆ ವಾಂತಿ ಸಹಿತ ಅಸೌಖ್ಯ ಕಾಣಿಸಿಕೊಂಡಿತ್ತೆನ್ನಲಾಗಿದೆ. ಕೂಡಲೇ  ಕಾಸರಗೋಡಿನ ಆಸ್ಪತ್ರೆಗೆ ತಲುಪಿಸಿದರೂ  ಜೀವ ರಕ್ಷಿಸಲಾಗಲಿಲ್ಲ. ಇವರು ಈ ಹಿಂದೆ ಗಲ್ಫ್‌ಉದ್ಯೋಗಿ ಯಾಗಿದ್ದರು. ಅಬೂಬಕರ್-ಆಮಿನ ದಂಪತಿಯ ಪುತ್ರನಾದ ಮೃತರು ಪತ್ನಿ ಸಾಬಿರ, ಮಕ್ಕಳಾದ ಸಮೀರ್, ನಿಸ್ವಾ, ಸಿನಾನ್, ಸಹೋದರ-ಸಹೋದರಿಯ ರಾದ ಅಬ್ದುಲ್ ಖಾದರ್, ಅಬ್ದುಲ್ಲ, ನಸೀಮ,  ಫೌಸಿಯ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

You cannot copy content of this page