ಹೃದಯಾಘಾತ ಯುವಕ ನಿಧನ

ಕಾಸರಗೋಡು: ಹೃದಯಾ ಘಾತದಿಂದ ಯುವಕ ನಿಧನಹೊಂ ದಿದ ಘಟನೆ ನಗರದಲ್ಲಿ ನಿನ್ನೆ ನಡೆದಿದೆ.  ಕಾಸರಗೋಡು ಗುಡ್ಡೆ ದೇವಸ್ಥಾನ ಬಳಿಯ ಶಿವಕೃಪಾದ ಉಮೇಶ್ ಪೂಜಾರಿ-ರಮಣಿ ದಂಪತಿ ಪುತ್ರ ಪೈಂಟಿಂಗ್ ಕಾರ್ಮಿಕ ರಾಜೇಶ್ ಸುವರ್ಣ (32) ಸಾವನ್ನಪ್ಪಿದ ಯುವಕ.

ಇವರಿಗೆ ನಿನ್ನೆ ಸಂಜೆ ಮನೆಯಲ್ಲಿ ಎದೆನೋವು ಕಾಣಿಸಿಕೊಂಡಿತು. ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಯಿತಾದರೂ ಅದು ಫಲಕಾರಿಯಾಗದೆ ನಿಧನ ಹೊಂದಿದರು.  ಮೃತರು ಹೆತ್ತವರ ಹೊರತಾಗಿ ಸಹೋದರಿಯರಾದ ಅಶ್ವಿತ್ (ಗಲ್ಫ್), ಸರಿತ, ಮಮತ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page