ಹೊಸಂಗಡಿ- ಆನೆಕಲ್ಲು ರಸ್ತೆಯಲ್ಲಿ ಅಪಾಯಕಾರಿ ಮರಗಳು: ವಾಹನ ಸವಾರರಿಗೆ ಆತಂಕ
ಮಂಜೇಶ್ವರ: ಮಳೆಗಾಲ ಆರಂಭ ಗೊಂಡ ಬಳಿಕ ವಿವಿಧ ಪ್ರದೇಶಗಳಲ್ಲಿ ಹಲವಾರು ಮರಗಳು ಮುರಿದು ಬಿದ್ದು ವ್ಯಾಪಕ ವಿದ್ಯುತ್ ಕಂಬಗಳು ಹಾನಿಗೊಂಡು ವಾಹನ ಸವಾರರಲ್ಲಿ ಆತಂಕವನ್ನುAಟು ಮಾಡಿದೆ. ಹೊಸಂಗಡಿ-ಆನೆಕಲ್ಲು ರಸ್ತೆಯಲ್ಲಿಯೂ ಹಲವು ಅಪಾಯಕಾರಿ ಮರಗಳು ಸವಾರರಲ್ಲಿ ಭೀತಿಯನ್ನುಂ ಟುಮಾಡುತ್ತಿದೆ. ಈ ರಸ್ತೆ ಉದ್ದಕ್ಕೂ ಇಕ್ಕೆಡೆಗಳಲ್ಲಿ ಬೃಹತ್ ಗಾತ್ರದ ಮರಗಳು, ಬೃಹತ್ ರೆಂಬೆಗಳು ರಸ್ತೆಗೆ ಬಾಗಿಕೊಂಡು ವಾಹನಗಳಿಗೆ ಅಡಚಣೆ ಉಂಟಾಗುತ್ತಿರುವುದಾಗಿ ದೂರಲಾಗಿದೆ. ಇತ್ತೀಚೆಗೆ ಸುರಿದ ಭಾರೀ ಮಳೆ, ಗಾಳಿಗೆ ಅಲ್ಲಲ್ಲಿ ಮರಗಳು ಧರಾಶಾಯಿಗಿದ್ದು, ಕೆಲವು ವಾಹನಗಳಿಗೆ ಹಾನಿ ಹಾಗೂ ಇನ್ನೂ ಕೆಲವು ಸವಾರರು ಅಪಾಯದಿಂದ ಪಾರಾಗಿರುವುದಾಗಿ ಹೇಳಲಾಗುತ್ತಿದೆ. ಅಲ್ಲಲ್ಲಿ ವಿದ್ಯುತ್ ತಂತಿಗಳು ಹಾದು ಹೋಗಿದ್ದು, ಮಳೆ, ಗಾಳಿಗೆ ಮರ ಬಿದ್ದು ದುರಂತ ಸಂಭವಿಸುವ ಮುನ್ನವೇ ಸಂಬAಧಪಟ್ಟ ಇಲಾಖೆ ಅಧಿಕಾರಿಗಳು ರಸ್ತೆಗೆ ಬಾಗಿಕೊಂಡಿ ರುವ ರೆಂಬೆಗಳು ಹಾಗೂ ಅಪಾಯ ದಂಚಿನಲ್ಲಿರುವ ಮರವನ್ನು ತೆರವು ಗೊಳಿಸಿ ಅಪಾಯ ತಪ್ಪಿಸಬೇಕೆಂದು ಸಾರ್ವಜನಿಕರು ವಿನಂತಿಸಿದ್ದಾರೆ.