ವಿರೋಧದ ನಡುವೆ ಪಿಎಂಶ್ರೀಗೆ ಸಹಿ ಹಾಕಿದ ಸರಕಾರ: ಎಡರಂಗದಲ್ಲಿ ಭಿನ್ನಮತ; ತುರ್ತು ಸೆಕ್ರೆಟರಿಯೇಟ್ ಸಭೆ ಕರೆದ ಸಿಪಿಐ

ತಿರುವನಂತಪುರ: ಎಡರಂಗದ ಘಟಕ ಪಕ್ಷವಾದ ಸಿಪಿಐಯ ಭಾರೀ ವಿರೋಧದ ನಡುವೆಯೇ ಪಿ.ಎಂ.ಶ್ರೀ (ಪ್ರಧಾನಮಂತ್ರಿ ಸ್ಕೂಲ್ ಫಾರ್ ರೈಸಿಂಗ್ ಇಂಡಿಯ) ಒಪ್ಪಂದ ಪತ್ರಕ್ಕೆ ರಾಜ್ಯ ಸರಕಾರ ಸಹಿ ಹಾಕಿದೆ. ಕೇರಳ ಸಾರ್ವಜನಿಕ ಶಿಕ್ಷಣ ಕಾರ್ಯದರ್ಶಿ ಕೆ. ವಾಸುಕಿಯವರು ದಿಲ್ಲಿಗೆ ತೆರಳಿ ಒಪ್ಪಂದ ಪತ್ರಕ್ಕೆ ವಿದ್ಯುಕ್ತವಾಗಿ ಸಹಿ ಹಾಕಿದ್ದಾರೆ. ಈ ಯೋಜನೆಗೆ ಸಿಪಿಐ ಆರಂಭದಿಂದಲೇ ವಿರೋಧ ವ್ಯಕ್ತಪಡಿಸುತ್ತಾ ಬಂದಿತ್ತು. ಮಾತ್ರವಲ್ಲ ರಾಜ್ಯ ಸಚಿವ ಸಂಪುಟ ಸಭೆ ಮತ್ತು ಎಡರಂಗ ಸಭೆಯಲ್ಲೂ ಸಿಪಿಐ ಈ ಯೋಜನೆಯನ್ನು ತೀವ್ರವಾಗಿ ವಿರೋಧಿಸಿತ್ತು. ಅದನ್ನು ಕಡೆಗಣಿಸಿ  …

ಚಿಕ್ಕಬಳ್ಳಾಪುರದಲ್ಲಿ ವಾಹನ ಅಪಘಾತ: ಪಟ್ಲ ನಿವಾಸಿ ಮೃತ್ಯು

ಕಾಸರಗೋಡು:  ಕರ್ನಾಟಕದ ಚಿಕ್ಕಬಳ್ಳಾಪುರದಲ್ಲಿ ಸಂಭವಿಸಿದ ವಾಹನ ಅಪಘಾತದಲ್ಲಿ ಮಧೂರು ಬಳಿಯ ನಿವಾಸಿ ಯುವತಿ ಮೃತಪಟ್ಟಿದ್ದಾರ. ಮಧೂರು ಬಳಿಯ ಪಟ್ಲ ನಿವಾಸಿ ಸಫಿಯುಲ್ಲ ಎಂಬವರ ಪತ್ನಿ ಫಾತಿಮ ಬೀಗಂ (32) ಮೃತಪಟ್ಟ ದುರ್ದೈವಿಯಾಗಿದ್ದಾರೆ.  ಮಂಗಳವಾರ ಸಂಜೆ  ಫಾತಿಮ ಬೀಗಂ  ಪ್ರಯಾಣಿಸುತ್ತಿದ್ದ ಆಟೋ ರಿಕ್ಷಾಕ್ಕೆ ಕಾರು ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.  ಇದರಿಂದ ಗಂಭೀರ ಗಾಯಗೊಂಡ ಫಾತಿಮಾ ಬೀಗಂ ತಕ್ಷಣ ಮೃತಪಟ್ಟಿದ್ದಾರೆ.  ಎಂ.ಜಿ. ಅಬ್ದುಲ್ಲ-ಖದೀಜ ದಂಪತಿಯ ಪುತ್ರಿಯಾದ ಮೃತರು ಮಕ್ಕಳಾದ ಹುಸೈನ್, ಇಫ್ರತ್, ಅನ್ಸಿಯಾಭಾನು, ಸಹೋದರ-ಸಹೋದರಿಯರಾದ ಹನೀಫ,ಮುಸ್ತಫ, ಉದೈಫ್, ಬಾತಿಷ, …

ಸಿಪಿಎಂ ನೇತಾರ ಪಕ್ಷದ ಕಚೇರಿಯೊಳಗೆ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಕೊಚ್ಚಿ: ಸಿಪಿಎಂ ನೇತಾರನೋರ್ವ ಪಕ್ಷದ ಕಚೇರಿಯೊಳಗೆ  ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ. ಉದಯಂಪೇ ರೂರ್ ನೋರ್ತ್ ಲೋಕಲ್ ಕಮಿಟಿ ಮಾಜಿ ಕಾರ್ಯದರ್ಶಿ ಟಿ.ಎಸ್. ಪಂಕಜಾಕ್ಷನ್ ಸಾವಿಗೀಡಾದ ವ್ಯಕ್ತಿ. ಉದಯಂಪೇರೂರ್ ನಡಕ್ಕಾವ್ ಲೋಕಲ್ ಕಮಿಟಿ ಆಫೀಸ್‌ನ  ವಾಚನಾಲಯದ ಕೊಠಡಿಯೊಳಗೆ ಮೃತದೇಹ ಪತ್ತೆಯಾಗಿದೆ. ಇಂದು ಬೆಳಿಗ್ಗೆ 6 ಗಂಟೆ ವೇಳೆ  ಪತ್ರಿಕೆ ವಿತರಕನಿಗೆ ಮೃತದೇಹ ಕಂಡುಬಂದಿದೆ.  ಆತ ನೀಡಿದ ಮಾಹಿತಿಯಂತೆ ಪೊಲೀಸರು ಹಾಗೂ ಫಾರೆನ್ಸಿಕ್ ತಜ್ಞರು ಸ್ಥಳಕ್ಕೆ ತಲುಪಿದ್ದಾರೆ. ಇಂಡಿಯನ್ ಆಯಿಲ್ ಕಾರ್ಪರೇಶನ್‌ನ ನೌಕರನಾಗಿದ್ದ ಪಂಕಜಾಕ್ಷನ್ …

ಮಂಜೇಶ್ವರ ಠಾಣೆ ನೂತನ ಸಿ.ಐಯಾಗಿ ಅಜಿತ್ ಕುಮಾರ್ ಪಿ. ಅಧಿಕಾರ ಸ್ವೀಕಾರ

ಮಂಜೇಶ್ವರ: ಮಂಜೇಶ್ವರ ಪೋಲೀಸ್ ಠಾಣೆಯಲ್ಲಿ ನೂತನ ಇನ್ಸ್ಫೆಕ್ಟರ್ ಆಗಿ ಅಜಿತ್ ಕುಮಾರ್. ಪಿ ನಿನ್ನೆ ಅಧಿಕಾರ ಸ್ವೀಕರಿಸಿಕೊಂಡಿ ದ್ದಾರೆ. ಈ ಹಿಂದೆ ಇವರು ಕಾಞಂ ಗಾಡ್ ಠಾಣೆಯಲ್ಲಿ ಕರ್ತವ್ಯದಲಿ ್ಲದ್ದರು. ಮಂಜೇಶ್ವರ ಠಾಣೆಯಲ್ಲಿ ಈ ಹಿಂದೆ ಸಿ.ಐ ಯಾಗಿದ್ದ ಅನೂಪ್ ಕುಮಾರ್ ಕಾಞಂಗಾಡ್‌ಗೆ ವರ್ಗಾವಣೆ ಗೊಂಡಿದ್ದಾರೆ. ಅಲ್ಲದೆ ಮಂಜೇ ಶ್ವರ ಠಾಣೆಯಲ್ಲಿ ನೂತನ ಎಸ್.ಐ ಆಗಿ ವೈಷ್ಣವ್ ಹಾಗೂ ಪ್ರೊಬೇ ಶನಲ್ ಎಸ್.ಐ ಆಗಿ ಶಬರಿಕೃಷ್ಣ ಅಧಿಕಾರ ಸ್ವೀಕರಿಸಿಕೊಂಡಿದ್ದಾರೆ.

ಬಾಟ್ಲಿಯ ಮುಚ್ಚಳ ಗಂಟಲಲ್ಲಿ ಸಿಲುಕಿ ಮಗು ಮೃತ್ಯು

ತೃಶೂರು: ಬಾಟ್ಲಿಯ ಮುಚ್ಚಳ ಗಂಟಲಲ್ಲಿ ಸಿಲುಕಿ ನಾಲ್ಕು ವರ್ಷದ ಮಗು ಮೃತಪಟ್ಟ ದಾರುಣ ಘಟನೆ ತೃಶೂರು ಎರುಮಪೆಟ್ಟಿ ಎಂಬಲ್ಲಿ ಸಂಭವಿಸಿದೆ. ಆದೂರ್ ಕಂಡೇರಿವಳಪ್ಪಿಲ್ ಉಮ್ಮರ್ -ಮುಫೀದ ದಂಪತಿಯ ಪುತ್ರ ಮಹಮ್ಮದ್ ಶಹಲ್ ಮೃತಪಟ್ಟ ಮಗು. ನಿನ್ನೆ ಬೆಳಿಗ್ಗೆ ಮನೆಯಲ್ಲಿ ಆಹಾರ ಸೇವಿಸುತ್ತಿದ್ದ ಮಧ್ಯೆ ಬಾಟ್ಲಿಯ ಮುಚ್ಚಳವನ್ನು ಮಗು ನುಂಗಿರುವುದಾಗಿ ತಿಳಿದುಬಂದಿದೆ. ಉಸಿರಾಟ ಸಾಧ್ಯವಾಗದೆ ಚಡಪಡಿಸುತ್ತಿದ್ದ ಮಗುವಿನ ಬಾಯಿ ತೆರೆದು  ಮನೆಯವರು ನೋಡಿದಾಗ ಮುಚ್ಚಳ ಗಂಟಲಲ್ಲಿ ಸಿಲುಕಿರುವುದು ಕಂಡುಬಂದಿದೆ.   ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ ಮಗುವಿನ ಜೀವ ರಕ್ಷಿಸಲಾಗಲಿಲ್ಲ.

ಕುರ್ನೂಲ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ದುರ್ಘಟನೆ:ಬಸ್‌ಗೆ ಬೆಂಕಿ ತಗಲಿ 32 ಮಂದಿ ಸಜೀವ ದಹನ

ಹೈದರಾಬಾದ್: ಆಂಧ್ರಪ್ರದೇಶದ ಕುರ್ನೂಲ್ ರಾಷ್ಟ್ರೀಯ ಹೆದ್ದಾರಿಯಲ್ಲಿ  ಬಸ್‌ಗೆ ಬೆಂಕಿ ತಗಲಿ 32 ಮಂದಿ ಪ್ರಯಾಣಿಕರು ಸಜೀವ ದಹನಗೊಂಡು ಇನ್ನೂ ಹಲವರು ಗಂಭೀರ ಗಾಯಗೊಂಡ ಘಟನೆ ಸಂಭವಿಸಿದೆ.  ಆಂಧ್ರಪ್ರದೇಶದ ಕುರ್ನೂಲ್ ಜಿಲ್ಲೆಯ  ರಾಷ್ಟ್ರೀಯ ಹೆದ್ದಾರಿ-44ರ ಚಿನ್ನತೇಕೂರು ಗ್ರಾಮದಲ್ಲಿ ಇಂದು ಮುಂಜಾನೆ 3.30ರ ವೇಳೆ ಈ ದುರ್ಘಟನೆ ಉಂಟಾಗಿದೆ. ಬೆಂಕಿ ತಗಲಿದ ಬಸ್ಸಿನಲ್ಲಿ ೪೦ಕ್ಕೂ ಹೆಚ್ಚು ಪ್ರಯಾಣಿಕರಿದ್ದರು.  ಬಸ್ ಬೆಂಗಳೂರಿಗೆ ಬರುತ್ತಿದ್ದ ವೇಳೆ ಧಾರಾಕಾರ ಮಳೆ ಸುರಿಯುತ್ತಿತ್ತು.  ಈ ವೇಳೆ ಶಿವಶಂಕರ್ ಎಂಬವರು ಚಲಾಯಿಸುತ್ತಿದ್ದ ಬೈಕ್ ಅಮಿತ ವೇಗದಲ್ಲಿ ಬಂದು …

ಶಬರಿಮಲೆ ಚಿನ್ನ ಕೊಳ್ಳೆ : ಮಾಹಿತಿ ಸಂಗ್ರಹಕ್ಕಾಗಿ ಉಣ್ಣಿಕೃಷ್ಣನ್ ಪೋತ್ತಿಯನ್ನು ಬೆಂಗಳೂರಿಗೆ ಕೊಂಡೊಯ್ದ ತನಿಖಾ ತಂಡ; ಇನ್ನಷ್ಟು  ಮಂದಿಯ ಬಂಧನ ಸಾಧ್ಯತೆ

ತಿರುವನಂತಪುರ: ಶಬರಿಮಲೆ ಕ್ಷೇತ್ರದಿಂದ ಚಿನ್ನ ಸಾಗಿಸಿದ ಪ್ರಕರಣದಲ್ಲಿ ಸೆರೆಗೀಡಾದ ಉಣ್ಣಿಕೃಷ್ಣನ್ ಪೋತ್ತಿಯನ್ನು ಹೆಚ್ಚಿನ ತನಿಖೆಗಾಗಿ ಎಸ್‌ಐಟಿ ಬೆಂಗಳೂರಿಗೆ ಕರೆದೊಯ್ದಿದೆ. ಚೆನ್ನೈಯ ಸ್ಮಾರ್ಟ್ ಕ್ರಿಯೇಶನ್ಸ್‌ಗೂ ತಲುಪಿಸಿ ಮಾಹಿತಿ ಸಂಗ್ರಹಿಸಲು ತನಿಖಾ ತಂಡ ತೀರ್ಮಾನಿಸಿದೆ. ಇದೇ ವೇಳೆ ಪ್ರಕರಣದಲ್ಲಿ ಆರೋಪಿ ಪಟ್ಟಿಯಲ್ಲಿರುವ ಇನ್ನಷ್ಟು ಮಂದ ದೇವಸ್ವಂ ಅಧಿಕಾರಿಗಳ ಬಂಧನ ಶೀಘ್ರ ನಡೆಯಲಿದೆಯೆಂಬ ಸೂಚನೆಯಿದೆ. ಕ್ಷೇತ್ರದ ದ್ವಾರಪಾಲಕ ಶಿಲ್ಪದ ಚಿನ್ನವನ್ನು ಸಾಗಿಸಿದ ಸಂಬಂಧ ಹತ್ತು ಮಂದಿ ಆರೋಪಿಗಳಿದ್ದಾರೆ. ಇದರಲ್ಲಿ ಉಣ್ಣಿಕೃಷ್ಣನ್ ಪೋತ್ತಿ ಹಾಗೂ ಮುರಾರಿಬಾಬುವನ್ನು ಮಾತ್ರವೇ ಇದುವರೆ ಬಂಧಿಸಲಾಗಿದೆ.  ಇದೇ ವೇಳೆ …

ಕಾರು ಢಿಕ್ಕಿ ಹೊಡೆದು ಸ್ಕೂಟಿ ಸವಾರ ಗಾಯ

ಕಾಸರಗೋಡು: ನಗರದ ಕರಂದಕ್ಕಾಡು ರಾಷ್ಟ್ರೀಯ ಹೆದ್ದಾರಿಯಲ್ಲಿ ನಿನ್ನೆ ಕಾರು ಮತ್ತು ಸ್ಕೂಟಿ ಢಿಕ್ಕಿ ಹೊಡೆದು ಸ್ಕೂಟಿ ಸವಾರ ಉಳಿಯತ್ತಡ್ಕದ ಮುನೀರ್ (5೦) ಎಂಬವರು ಗಾಯಗೊಂಡಿದ್ದಾರೆ. ಅದನ್ನು ಕಂಡ ಕಾಸರಗೋಡು ಅಗ್ನಿಶಾಮಕದಳ  ಗಾಯಾಳುವನ್ನು ತಕ್ಷಣ ಆಂಬುಲೆನ್ಸ್‌ನಲ್ಲಿ  ಆಸ್ಪತ್ರೆಗೆ  ಸಾಗಿಸಿದರು.  ಅಪಘಾತಕ್ಕೀಡಾದ ಸ್ಕೂಟಿಯಲ್ಲಿ ಮುನೀರ್‌ರ ಪುತ್ರಿಯೂ ಇದ್ದರು. ಅವರಿಗೆ ಯಾವುದೇ ಗಾಯವುಂಟಾಗಿಲ್ಲ.

ಪೊಲೀಸ್ ಅಧಿಕಾರಿಯ ಕಾರಿಗೆ ಹಾನಿಗೈದು ಬ್ಯಾಟರಿ ಕಳವು: ಇಬ್ಬರ ಬಂಧನ

ಕಾಸರಗೋಡು:  ತೃಕ್ಕರಿಪುರ ರೈಲು ನಿಲ್ದಾಣ ಪರಿಸರದಲ್ಲಿ ನಿಲ್ಲಿಸಿದ್ದ  ಪೊಲೀಸ್  ಅಧಿಕಾರಿಯ ಕಾರಿನ ಗಾಜು ಪುಡಿಗೈದು ಬ್ಯಾಟರಿ ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಬಂಧಿಸಲಾಗಿದೆ.  ಪಿಲಿಕ್ಕೋಡ್ ಮೇಲ್ಮಟ್ಟಲಾಯಿ ನಿವಾಸಿಗಳಾದ ಕೆ. ರೋಬಿನ್ ಯಾನೆ ಸಚ್ಚು (20), ಎ.ಶಾನಿಲ್ (28) ಬಂಧಿತ ವ್ಯಕ್ತಿಗಳಾಗಿದ್ದಾರೆ.  ಕಾಸರಗೋಡು ರೈಲ್ವೇ ಪೊಲೀಸ್ ಠಾಣೆಯ ಸಿವಿಲ್ ಪೊಲೀಸ್ ಆಫೀಸರ್ ಶಂಸೀರ್‌ರ ಕಾರಿನ ಗಾಜು ಪುಡಿಗೈದು ಆರೋಪಿಗಳು ಬ್ಯಾಟರಿ ಕಳವು ನಡೆಸಿದ್ದರು.  ಶಂಸೀರ್ ಕಾರನ್ನು ತೃಕ್ಕರಿಪುರ ರೈಲು ನಿಲ್ದಾಣ ಪರಿಸರದಲ್ಲಿ ನಿಲ್ಲಿಸಿ ಕರ್ತವ್ಯಕ್ಕೆ ತೆರಳಿದ್ದರು.  ಕೆಲಸ ಮುಗಿಸಿ …

ಸಹೋದರರ ಮಧ್ಯೆ ಜಗಳ: ಓರ್ವನಿಗೆ ಇರಿತ

ಕಾಸರಗೋಡು: ಕಾಞಂಗಾಡ್ ರಾವಣೇಶ್ವರದಲ್ಲಿ ಇಬ್ಬರು ಸಹೋದರರ ಮಧ್ಯೆ ನಡೆದ ಜಗಳದ ವೇಳೆ ಓರ್ವನಿಗೆ ಗಂಭೀರ ಇರಿತ ಉಂಟಾಗಿದೆ. ರಾವಣೇಶ್ವರ ಪಾಣಂ ತೋಡು ನಿವಾಸಿ ಶಾಜಿ (45) ಇರಿತದಿಂದ ಗಂಭೀರ ಗಾಯಗೊಂ ಡಿದ್ದು, ಇವರನ್ನು ಕಲ್ಲಿಕೋಟೆಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ನಿನ್ನೆ ಅಪರಾಹ್ನ ಶಾಜಿ ಹಾಗೂ ಸಹೋದರ ಶೈಜು ಮಧ್ಯೆ ವಾಗ್ವಾದ ನಡೆದಿದ್ದು, ಇದು ಬಳಿಕ ಹೊಕೈಗೆ ತಲುಪಿದೆ. ಈ ವೇಳೆ  ಮದ್ಯದಮಲಿ ನಲ್ಲಿದ್ದ ಶೈಜು ಅಣ್ಣ ಶಾಜಿಗೆ  ಇರಿದು ಗಾಯಗೊಳಿಸಿರುವುದಾಗಿ ಹೇಳಲಾಗುತ್ತಿದೆ.  ತಕ್ಷಣ ಶಾಜಿಯನ್ನು  ಪರಿಯಾರಂ ಮೆಡಿಕಲ್ ಕಾಲೇಜು …