ಸಮಾಂತರ ಲಾಟರಿ ವಂಚನೆ ತಂಡದ ಮೂವರ ಬಂಧನ
ಕುಂಬಳೆ: ಕುಂಬಳೆ, ಬಂದ್ಯೋಡು ಮೊದಲಾದೆಡೆಗಳನ್ನು ಕೇಂದ್ರೀಕರಿಸಿ ಭಾರೀ ಪ್ರಮಾಣದಲ್ಲಿ ಸಮಾಂತರ ಲಾಟರಿ ವ್ಯಾಪಾರ ನಡೆಸುತ್ತಿದ್ದ ಮೂರು ಮಂದಿಯನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ. ಬಂದ್ಯೋಡಿನ ಮಂಜುನಾಥ, ಪುತ್ರ ಕಿಶನ್ ಕುಮಾರ್, ಕುಂಬಳೆ ಕೊಯಪ್ಪಾಡಿ ಶಾಂತಿಪಳ್ಳದ ಸರಣ್ ಕುಮಾರ್ ಎಂಬಿವರು ಬಂಧಿತ ವ್ಯಕ್ತಿಗಳೆಂದು ಪೊಲೀಸರು ತಿಳಿಸಿದ್ದಾರೆ. ಇವರ ಕೈಯಿಂದ ಸಮಾಂತರ ಲಾಟರಿಯ ನಂಬ್ರಗಳನ್ನು ಬರೆದ ಕಾಗದಗಳು, ಅವುಗಳನ್ನು ಮಾರಾಟಗೈದು ಲಭಿಸಿದ ೬೨೮೦ ರೂಪಾಯಿ, ಎರಡು ಮೊಬೈಲ್ ಫೋನ್ಗಳನ್ನು ವಶಪಡಿಸಲಾಗಿದೆ. ಸಮಾಂತರ ಲಾಟರಿ ಮಾರಾಟಗಾರರ ಹೆಸರುಗಳು, ಅವರು ತೆಗೆದ ಸಮಾಂತರ ಲಾಟರಿ …