ಸಮಾಂತರ ಲಾಟರಿ ವಂಚನೆ ತಂಡದ ಮೂವರ ಬಂಧನ

ಕುಂಬಳೆ: ಕುಂಬಳೆ, ಬಂದ್ಯೋಡು ಮೊದಲಾದೆಡೆಗಳನ್ನು ಕೇಂದ್ರೀಕರಿಸಿ ಭಾರೀ ಪ್ರಮಾಣದಲ್ಲಿ ಸಮಾಂತರ ಲಾಟರಿ ವ್ಯಾಪಾರ ನಡೆಸುತ್ತಿದ್ದ ಮೂರು ಮಂದಿಯನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ. ಬಂದ್ಯೋಡಿನ ಮಂಜುನಾಥ, ಪುತ್ರ ಕಿಶನ್ ಕುಮಾರ್, ಕುಂಬಳೆ ಕೊಯಪ್ಪಾಡಿ ಶಾಂತಿಪಳ್ಳದ ಸರಣ್ ಕುಮಾರ್ ಎಂಬಿವರು ಬಂಧಿತ ವ್ಯಕ್ತಿಗಳೆಂದು ಪೊಲೀಸರು ತಿಳಿಸಿದ್ದಾರೆ. ಇವರ ಕೈಯಿಂದ ಸಮಾಂತರ ಲಾಟರಿಯ ನಂಬ್ರಗಳನ್ನು ಬರೆದ ಕಾಗದಗಳು, ಅವುಗಳನ್ನು ಮಾರಾಟಗೈದು ಲಭಿಸಿದ ೬೨೮೦ ರೂಪಾಯಿ, ಎರಡು ಮೊಬೈಲ್ ಫೋನ್‌ಗಳನ್ನು ವಶಪಡಿಸಲಾಗಿದೆ. ಸಮಾಂತರ ಲಾಟರಿ ಮಾರಾಟಗಾರರ ಹೆಸರುಗಳು, ಅವರು ತೆಗೆದ ಸಮಾಂತರ ಲಾಟರಿ …

ಸ್ಕೂಟರ್‌ಗೆ ಕಾರು ಢಿಕ್ಕಿ ಹೊಡೆದು ಯುವಕ ಮೃತ್ಯು: ಇಬ್ಬರಿಗೆ ಗಂಭೀರ

ಕುಂಬಳೆ: ಕುಂಬಳೆ -ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಬಂದ್ಯೋಡಿನಲ್ಲಿ ಸಂಭವಿಸಿದ ವಾಹನ ಅಪಘಾತದಲ್ಲಿ ಯುವಕ ಮೃತಪಟ್ಟ ದಾರುಣ ಘಟನೆ ನಡೆದಿದೆ. ಅಪಘಾv ದಲ್ಲಿ ಇಬ್ಬರು ಗಂಭೀರ ಗಾಯಗೊಂ ಡಿದ್ದು, ಅವರನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ದಕ್ಷಿಣ ಕನ್ನಡ, ಉಡುಪಿ, ಪಡುಬಿದ್ರೆ ಬಂಗರೆ ರಸ್ತೆಯ ಅಬ್ದುಲ್ ರಹೀಂರ ಪುತ್ರ ಮುಹಮ್ಮದ್ ರಾಹಿಲ್ (24) ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ಉಪ್ಪಳ ಬಪ್ಪಾಯಿತೊಟ್ಟಿಯ ಅಬ್ದುಲ್ ಜಸೀರ್, ಉಪ್ಪಳ ಕುರ್ಚಿಪಳ್ಳದ ಮುಹಮ್ಮದ್ ರೈಸ್ ಎಂಬಿವರು ಗಾಯಗೊಂಡವರಾಗಿದ್ದಾರೆ. ನಿನ್ನೆ ಮುಂಜಾನೆ ಒಂದು ಗಂಟೆ ವೇಳೆ ಅಪಘಾತವುಂಟಾಗಿದೆ. ಮುಹಮ್ಮದ್ …

ಮಾರ್ಪನಡ್ಕದಲ್ಲಿ ಬ್ಯಾಂಕ್ ಕಾವಲುಗಾರನನ್ನು ಇರಿದು ಕೊಲೆ: ಇಬ್ಬರ ವಿರುದ್ಧ ಕೇಸು

ಬದಿಯಡ್ಕ: ಬ್ಯಾಂಕ್‌ನ ಕಾವಲುಗಾರನಾದ ಯುವಕನನ್ನು ಇರಿದು ಕೊಲೆಗೈದ ಘಟನೆ ಮಾರ್ಪನಡ್ಕದಲ್ಲಿ ನಡೆದಿದೆ. ಕುಂಬ್ಡಾಜೆ ಸೇವಾ ಸಹಕಾರಿ ಬ್ಯಾಂಕ್‌ನ ಸೆಕ್ಯುರಿಟಿ ನೌಕರನೂ, ಮಾರ್ಪನಡ್ಕ ಬೆದ್ರಂಕೂಡ್ಲು ನಿವಾಸಿ ಸುರೇಶ್ (42) ಕೊಲೆಗೀಡಾದ ವ್ಯಕ್ತಿಯಾಗಿದ್ದಾರೆ. ನಿನ್ನೆ ರಾತ್ರಿ 9.25ರ ವೇಳೆ ಕುಂಬ್ಡಾಜೆ ಸೇವಾ ಸಹಕಾರಿ ಬ್ಯಾಂಕ್‌ನ ಸಮೀಪ ಈ ಕೊಲೆಕೃತ್ಯ ನಡೆದಿದೆ. ಘಟನೆಗೆ ಸಂಬಂಧಿಸಿ ಮಾರ್ಪನಡ್ಕದ ಕಿರಣ್, ಅಖಿಲೇಶ್ ಎಂಬಿವರ ವಿರುದ್ಧ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿಕೊಂ ಡಿದ್ದಾರೆ. ನಿನ್ನೆ ಸಂಜೆ ಕುಂಬ್ಡಾಜೆ ಪಂಚಾಯತ್ ಮೈದಾನದಲ್ಲಿ ನಡೆದ ಕ್ರಿಕೆಟ್ ಪಂದ್ಯಾಟ ವೇಳೆ …

ಸ್ನೇಹಿತೆಯ ಮದುವೆಗೆ ತೆರಳಿದ ಯುವತಿ ಮರಳಿ ಬಂದಿಲ್ಲ: ತಾಯಿಯಿಂದ ದೂರು

ಸೀತಾಂಗೋಳಿ: ಸ್ನೇಹಿತೆಯ ಮದುವೆಗೆ ಹೋದ ಯುವತಿ ಮರಳಿ ಬಂದಿಲ್ಲವೆಂದು ತಿಳಿಸಿ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ. ಸೀತಾಂಗೋಳಿ ಪೆರ್ಣೆ ಎಡನಾಡಿನ ಕರುಣಾಕರರ ಪತ್ನಿ ವನಿತ ಎಂಬವರು ನೀಡಿದ ದೂರಿನಂತೆ ಕುಂಬಳೆ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.  ಈ ತಿಂಗಳ 6ರಂದು ಮಧ್ಯಾಹ್ನ 1 ಗಂಟೆಗೆ ಸ್ನೇಹಿತೆಯ ಮದುವೆಗೆಂದು ತಿಳಿಸಿ ಪುತ್ರಿ ಕಾವ್ಯ (19) ಮನೆಯಿಂದ ತೆರಳಿದ್ದಳು. ಆದರೆ ಮದುವೆ ಕಳೆದು 10 ದಿನಗಳಾದರೂ ಪುತ್ರಿ ಮರಳಿ ಬಂದಿಲ್ಲವೆಂದು ತಾಯಿ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

ಹೊಸ ಸಚಿವಸಂಪುಟ ಜಿಲ್ಲೆಯ ಪಾಲಿಗೆ ನಿರಾಶೆ- ಎಂ.ಎಲ್. ಅಶ್ವಿನಿ

ಕಾಸರಗೋಡು: ಆರು ದಶಕಗಳ ಬಳಿಕ ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟದ ಎಲ್ಲಾ ಸಚಿವರು ಪ್ರಮಾಣ ವಚನ ಸ್ವೀಕರಿಸುತ್ತಿರುವಾಗ ಜಿಲ್ಲೆಯ ಪಾಲಿಗೆ ನಿರಾಶೆಯಷ್ಟೇ ಉಳಿದಿದೆ. ರಾಜ್ಯದಲ್ಲೇ ಅತ್ಯಂತ ಹಿಂದುಳಿದಿರುವ ಜಿಲ್ಲೆಗೆ ಮತ್ತೊಮ್ಮೆ ಪ್ರಾತಿನಿಧ್ಯವನ್ನು ನಿರಾಕರಿಸುವ ಮೂಲಕ, ಮುಂದಿನ ಐದು ವರ್ಷಗಳ ಕಾಲ ಜಿಲ್ಲೆಯ ಬಗ್ಗೆ ವಿ.ಡಿ ಸತೀಶನ್ ಅವರ ಸರಕಾರದ ಧೋರಣೆ ಏನಿರಲಿದೆ ಎಂಬುದು ಬಹುಮಟ್ಟಿಗೆ ಸ್ಪಷ್ಟವಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ತಿಳಿಸಿದ್ದಾರೆ. ಸಚಿವರನ್ನು ಆಯ್ಕೆ ಮಾಡುವುದು ಯುಡಿಎಫ್‌ನ ಆಂತರಿಕ ವಿಷಯವಾಗಿದ್ದರೂ, ಜಿಲ್ಲೆಯ ಅಭಿವೃದ್ಧಿ ಸಮಸ್ಯೆಗಳನ್ನು ಸಚಿವ …

20 ಸಚಿವರೊಂದಿಗೆ ವಿ.ಡಿ.ಎಸ್ ಅಧಿಕಾರ ಸ್ವೀಕಾರ

ತಿರುವನಂತಪುರ: ಕೇರಳದ ನೂತನ ಮುಖ್ಯಮಂತ್ರಿಯಾಗಿ ಕಾಂಗ್ರೆಸ್‌ನ ವಿ.ಡಿ. ಸತೀಶನ್ ಇಂದು ಬೆಳಿಗ್ಗೆ ಅಧಿಕಾರ ಸ್ವೀಕರಿಸಿದರು. ತಿರುವನಂತಪುರದ ಸೆಂಟ್ರಲ್ ಸ್ಟೇಡಿಯಂನಲ್ಲಿ  ಇಂದು ಬೆಳಿಗ್ಗೆ ನಡೆದ ಬೃಹತ್ ಜನಸ್ತೋಮ ನೆರೆದ  ಸಮಾರಂಭದಲ್ಲಿ ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಮುಖ್ಯಮಂತ್ರಿಯಾಗಿ  ವಿ.ಡಿ.ಸತೀಶನ್‌ರಿಗೆ ಪ್ರಮಾಣವಚನ ಬೋಧಿಸಿದರು. ವಿ.ಡಿ.ಸತೀಶನ್ ಜೊತೆಗೆ ಅವರ ನೇತೃತ್ವದ ಸಚಿವ ಸಂಪುಟದ ೨೦ ಮಂದಿ ಸದಸ್ಯರು ರಾಜ್ಯಪಾಲರಿಂದ ಪ್ರಮಾಣವಚನ ಸ್ವೀಕರಿಸಿ ಅಧಿಕಾರ ವಹಿಸಿಕೊಂಡರು. ಮುಖ್ಯಮಂತ್ರಿಯಾಗಿ ವಿ.ಡಿ.ಸತೀಶನ್ ಪ್ರಮಾಣವಚನ ಸ್ವೀಕರಿಸಿದ ಬಳಿಕ  ಮುಸ್ಲಿಂ ಲೀಗ್ ನೇತಾರ ಪಿ.ಕೆ ಕುಂಞಾಲಿಕುಟ್ಟಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. …

ತಲೆಮರೆಸಿಕೊಂಡಿದ್ದ ಪೋಕ್ಸೋ ಪ್ರಕರಣದ ಆರೋಪಿ ಸೆರೆ

ಕುಂಬಳೆ: ಪೋಕ್ಸೋ ಪ್ರಕರಣದಲ್ಲಿ ಆರೋಪಿಯಾಗಿ ಬಳಿಕ ತಲೆಮರೆಸಿಕೊಂಡಿದ್ದಾತನನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ. ಕರ್ನಾಟಕದ ಶಿವಮೊಗ್ಗ ನಿವಾಸಿ ಹಲೀಸ್ ನಾಯ್ಕ್ (45) ಬಂಧಿತ ಆರೋಪಿಯಾಗಿದ್ದಾನೆ. 2019ರಲ್ಲಿ ಈತ ಪೋಕ್ಸೋ ಪ್ರಕರಣದಲ್ಲಿ ಆರೋಪಿಯಾಗಿದ್ದನು. ಅಂದು ಈತ ಕುಂಬಳೆ ಮುಟ್ಟಂನಲ್ಲಿರುವ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿದ್ದನು. ಪ್ರಕರಣದಲ್ಲಿ ಸೆರೆಗೀಡಾದ ಹಲೀಸ್ ಜಾಮೀನಿನಲ್ಲಿ ಬಿಡುಗಡೆಗೊಂಡು ಬಳಿಕ ವಿಚಾರಣೆ ವೇಳೆ ತಲೆಮರೆಸಿಕೊಂಡಿದ್ದನು. ಇದರಿಂದ ಈತನನ್ನು ನ್ಯಾಯಾಲಯ ತಲೆಮರೆಸಿಕೊಂಡ ಆರೋಪಿ ಎಂದು ಘೋಷಿಸಿತ್ತು. ಇದೀಗ ಕುಂಬಳೆ ಎಸ್‌ಐ ಅನಂತಕೃಷ್ಣನ್ ಆರ್. ಮೆನೋನ್,  ಸಿವಿಲ್ ಪೊಲೀಸ್ ಆಫೀಸರ್‌ಗಳಾದ ಕಿಶೋರ್, ಪ್ರಶಾಂತ್ …

ಸೀತಾಂಗೋಳಿಯಲ್ಲಿ ಯುವಕನನ್ನು ಹೊಡೆದು ಕೊಲೆಗೈದ ಪ್ರಕರಣ: ಎರಡನೇ ಆರೋಪಿಯಾದ ವ್ಯಾಪಾರಿ ಸೆರೆ

ಸೀತಾಂಗೋಳಿ: ಸೀತಾಂಗೋಳಿ ಯಲ್ಲಿ ಯುವಕನನ್ನು ತಲೆಗೆ ಹೊಡೆದು ಕೊಲೆಗೈದ  ಪ್ರಕರಣದಲ್ಲಿ ಇನ್ನೋರ್ವ ಆರೋಪಿಯನ್ನು ಬಂಧಿಸಲಾಗಿದೆ. ಬದಿಯಡ್ಕ ನೆಕ್ರಾಜೆ ನಿವಾಸಿಯೂ ಸೀತಾಂಗೋಳಿಯಲ್ಲಿ ಸಿದ್ದಿವಿನಾಯಕ ದೀನಸು ಅಂಗಡಿಯ ಮಾಲಕನಾದ ಅರುಣ್ ಕುಮಾರ್ ಯಾನೆ ಭರತ್ (33) ಎಂಬಾತನನ್ನು ಕುಂಬಳೆ ಪೊಲೀಸ್ ಇನ್ಸ್‌ಪೆಕ್ಟರ್ ಬೈಜು ಕೆ. ಜೋಸ್, ಎಸ್‌ಐಗಳಾದ ಸಿ. ಸನತ್, ಅನಂತಕೃಷ್ಣನ್ ಆರ್. ಮೆನೋನ್ ಸೇರಿ ಸೆರೆ ಹಿಡಿದಿದ್ದಾರೆ. ಎಪ್ರಿಲ್ ೨೮ರಂದು ಸಂಜೆ ೩ ಗಂಟೆ ವೇಳೆ ನೀರ್ಚಾಲು ಬಾಪಾಲಿಪೊನ ಕುಂಟಿಕಾನದ ಸಫಾಹಿದ್ ಯಾನೆ ಶಫಾಯತ್ (35) ಎಂಬವರು ಕೊಲೆಗೀಡಾದ …

ಬಾಲಗೋಕುಲ 51ನೇ ರಾಜ್ಯ ಸಮ್ಮೇಳನ: ಸ್ವಾಗತ ಸಮಿತಿ ರೂಪೀಕರಣ

ಕಾಸರಗೋಡು: ಜುಲೈ 10,11,12 ರಂದು ಕಾಸರಗೋಡಿನಲ್ಲಿ ನಡೆಯುವ ಬಾಲಗೋಕುಲ ರಾಜ್ಯ ವಾರ್ಷಿಕ ಸಮ್ಮೇಳನದ ಸ್ವಾಗತ ಸಂಘ ರೂಪೀಕರಣ ನಡೆಯಿತು. ಕಾಸರಗೋಡು ಅಮೃತಾನಂದಮಯಿ ಮಠ ಮಠಾಧಿಪತಿ ವೇದ ವೇದ್ಯಾಮೃತ ಚೈತನ್ಯ ಸ್ವಾಮೀಜಿ ಉದ್ಘಾಟಿಸಿದರು. ರಾಜ್ಯ ಅಧ್ಯಕ್ಷ ಎಂ. ಸತ್ಯನ್ ಮಾಸ್ಟರ್ ಉಪಸ್ಥಿತರಿದ್ದರು. ಬಾಲಗೋಕುಲ ರಾಜ್ಯ ಉಪಾಧ್ಯಕ್ಷ ಎನ್.ವಿ ಪ್ರಜಿತ್ ಮಾಸ್ಟರ್ ಮುಖ್ಯ ಭಾಷಣ ಮಾಡಿದರು.ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ಎಂ ಸದಾನಂದನ್, ಪ್ರಭಾಕರನ್ ಮಾಸ್ಟರ್, ಸಿ.ವಿ ಪೊದುವಾಳ್, ಜಿಲ್ಲಾ ಕಾರ್ಯದರ್ಶಿ ರಾಜೇಂದ್ರ ಮವ್ವಾರ್ ಮಾತನಾಡಿದರು. ಬಾಲಗೋಕುಲ ಜಿಲ್ಲಾ ರಕ್ಷಾಧಿಕಾರಿ ಜಯರಾಮ್ …

ಕೊಲ್ಲಂಗಾನ ಚರ್ಚ್‌ನ ಧರ್ಮಗುರು ಮಂಗಳೂರಿಗೆ  ವರ್ಗಾವಣೆ

ಕಾಸರಗೋಡು: ಕೊಲ್ಲಂಗಾನ ಸಂತ ಥೋಮಸರ ದೇವಾಲಯದ ಧರ್ಮಗುರುಗಳಾಗಿ ಕಳೆದ ಆರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಫಾ| ರಿತೇಶ್ ರೋಡ್ರಿಗಸ್ ಮಂಗಳೂರಿನ ಕಾಸ್ಟಿಯಾ ದೇವಾಲಯದ ಜವಾಬ್ದಾರಿ ವಹಿಸಲು ನಾಳೆ ತೆರಳಲಿದ್ದಾರೆ. ಕೊಲ್ಲಂ ಗಾನ ಸಂತ ಥೋಮಸರ ದೇವಾಲಯದಲ್ಲಿ 7 ವರ್ಷಗಳ ಕಾಲಸೇವೆ ಸಲ್ಲಿಸಿದ ವಂ| ಫಾ| ಡೇನಿಯಲ್ ಡಿ’ಸೋಜಾರವರು ಸಿದ್ಧಕಟ್ಟೆ  ಧರ್ಮಕೇಂದ್ರಕ್ಕೆ ವರ್ಗಾವಣೆಗೊಂಡಾಗ ಅವರ  ಸ್ಥಾನದಲ್ಲಿ ವಂ| ರಿತೇಶ್ ರೋಡ್ರಿಗಸ್ ನೇಮಕಗೊಂಡಿದ್ದರು. ಕೊಲ್ಲಂಗಾನ ಚರ್ಚ್‌ನ ೨೫ನೇ ವಾರ್ಷಿಕಾಚರಣೆ ಇವರ ನೇತೃತ್ವದಲ್ಲಿ ನಡೆದಿದ್ದು, ಬೆಳ್ಳಿಹಬ್ಬ ಚಟುವಟಿಕೆಗಳು ಒಂದು ವರ್ಷವಿಡೀ …