ನಿವೃತ್ತ ಟ್ರಷರಿ ನೌಕರ ನಿಧನ

ಎಡನೀರು: ಕಾಸರಗೋಡು ಅಶೋಕನಗರ ನಿವಾಸಿ, ನಿವೃತ್ತ ಟ್ರಷರಿ ನೌಕರ ಮೂಲತಃ ಎಡನೀರು ಚೂರಿಮೂಲೆಯ ಈಶ್ವರ ನಾಯ್ಕ (78) ನಿಧನ ಹೊಂದಿದರು. ಮೃತರು ಪತ್ನಿ ಕೆ. ಜಯಂತಿ (ಸರಕಾರಿ ಕಾಲೇಜಿನ ನಿವೃತ್ತ ನೌಕರೆ), ಕೆ. ಶ್ರೀಜ (ವಿದ್ಯಾನಗರ ಕೆಸಿಎಂಪಿ ಸೊಸೈಟಿಯಲ್ಲಿ ಸೀನಿಯರ್ ಕ್ಲರ್ಕ್), ಅಳಿಯ ಬಿ.ಎನ್. ರಾಧಾಕೃಷ್ಣನ್ (ನೆಕ್ರಾಜೆ ಬ್ಯಾಂಕ್ ಉಪಾಧ್ಯಕ್ಷ) ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಅಭಿವೃದ್ಧಿಯಲ್ಲಿ ರಾಜಕೀಯ ಬೆರೆಸುತ್ತಿರುವುದು ಕೇರಳದಲ್ಲಿ ಮಾತ್ರ- ಎಂ.ಎಲ್. ಅಶ್ವಿನಿ

ಮಧೂರು: ಅಭಿವೃದ್ಧಿಯಲ್ಲಿ ರಾಜಕೀಯ ಬೆರೆಸುತ್ತಿರುವುದು, ಕೇಂದ್ರ ಯೋಜನೆಗಳನ್ನು ಬುಡಮೇಲುಗೊಳಿಸು ತ್ತಿರುವುದು ಕೇರಳದಲ್ಲಿ ಮಾತ್ರವೆಂದು ಬಿಜೆಪಿ ಕಾಸರಗೋಡು ಜಿಲ್ಲಾ ಅಧ್ಯಕ್ಷೆ ಎಂ.ಎಲ್. ಅಶ್ವಿನಿ ನುಡಿದರು. ಯುವಮೋರ್ಚಾ ಯೂನಿಟ್ ರೂಪೀಕರಣದ ಅಂಗವಾಗಿ ಮಧೂರು ಪಂಚಾಯತ್‌ನ ಕೇಳುಗುಡ್ಡೆಯಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಂಗಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಕೇಂದ್ರ ಸರಕಾರದೊಂದಿಗಿರುವ ಅಭಿಪ್ರಾಯ ಭಿನ್ನತೆಯಿಂದಾಗಿ ಜನರಿಗೆ ಉಪಕಾರಪ್ರದವಾಗುವ ಹಲವಾರು ಯೋಜನೆಗಳು, ಅಭಿವೃದ್ಧಿ ಯೋಜನೆಗಳನ್ನು ಮೊಟಕುಗೊಳಿಸಲು ಯತ್ನ ನಡೆಯುತ್ತಿದೆ. ಪಿಣರಾಯಿ ವಿಜಯನ್ ಸರಕಾರದ 10 ವರ್ಷದ ಆಡಳಿತ ಕೇರಳವನ್ನು ದೊಡ್ಡ ಸಾಲದ ಕೂಪಕ್ಕೆ ತಳ್ಳಿದೆ …

ಕುಂಬಳೆ ಉಪಜಿಲ್ಲಾ ಶಾಲಾ ಕಲೋತ್ಸವ: ಸ್ವಾಗತ ಸಮಿತಿ ಕಚೇರಿ ಉದ್ಘಾಟನೆ ಇಂದು ಮುಳ್ಳೇರಿಯದಲ್ಲಿ

ಮುಳ್ಳೇರಿಯ: ಕುಂಬಳೆ ಉಪಜಿಲ್ಲಾ ಶಾಲಾ ಕಲೋತ್ಸವದ ಸ್ವಾಗತ ಸಮಿತಿ ಕಚೇರಿಯ ಉದ್ಘಾಟನೆ ಇಂದು ಅಪರಾಹ್ನ ೩ ಗಂಟೆಗೆ  ಮುಳ್ಳೇ ರಿಯ ಜಿವಿಎಚ್ ಎಸ್‌ಎಸ್‌ನ ಹೈಸ್ಕೂಲ್ ವಿಭಾಗದಲ್ಲಿ ನಡೆಯಲಿದೆ. ಜಿಲ್ಲಾ ಪಂಚಾಯತ್  ವಿದ್ಯಾಭ್ಯಾಸ ಸ್ಥಾಯೀ ಸಮಿತಿ ಅಧ್ಯಕ್ಷೆ ಸರಿತಾ ಉದ್ಘಾಟಿಸುವರು. ಉದ್ಯಮಿ ಎ.ಜಿ. ಗಣೇಶ್ ಶೆಟ್ಟಿ ಮಲ್ಲಾವರ ಅತಿಥಿಯಾಗಿ ರುವರು. ಕಲೋತ್ಸವದಂ ಗವಾಗಿ ಆಯ್ಕೆಯಾದ ಲಾಂಛನವನ್ನು ಸ್ವಾಗತ ಸಮಿತಿ ಗೌರವಾಧ್ಯಕ್ಷ  ನ್ಯಾಯವಾದಿ ಗೋಪಾಲಕೃಷ್ಣ ಬಿಡುಗಡೆಗೊಳಿ ಸುವರು.  ನವಂಬರ್ 11ರಿಂದ 15ರ ವರೆಗೆ  ಮುಳ್ಳೇರಿಯ ಜಿವಿಎಚ್‌ಎಸ್ ಎಸ್‌ನಲ್ಲಿ ಕುಂಬಳೆ ಉಪಜಿಲ್ಲಾ …

ನ.1ರ ಕನ್ನಡಿಗರ ಹೋರಾಟಕ್ಕೆ ವಿವಿಧ ಸಂಘಟನೆಗಳ ಬೆಂಬಲ

ಬದಿಯಡ್ಕ: ಕರ್ನಾಟಕ ಸಮಿತಿ ಕಾಸರಗೋಡು ಇದರ ನೇತೃತ್ವದಲ್ಲಿ ವಿವಿಧ ಬೇಡಿಕೆಗಳನ್ನು ಮುಂದಿರಿಸಿ ಕೊಂಡು ನವಂಬರ್ 1ರಂದು ಕಾಸರಗೋಡು ಕನ್ನಡಿಗರು ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಮುಂದೆ ನಡೆಸುವ ಪ್ರತಿಭಟನೆಗೆ  ವಿವಿಧ ಸಂಘಟನೆಗಳು ಬೆಂಬಲ ಸೂಚಿಸಿವೆ. ಹತ್ತು ಸಮಸ್ತರು ಪೆರಡಾಲ, ಯಕ್ಷ ವಿಹಾರಿ ಬದಿಯಡ್ಕ, ಯಕ್ಷಭಾರತಿ ನೀರ್ಚಾಲು ಎಂಬೀ ಸಂಘಟನೆಗಳು ಕನ್ನಡಿಗರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿವೆ. ಕನ್ನಡಿಗರಿಗೆ ಸಿಗಬೇಕಾದ ನ್ಯಾಯ ಯುತ ಹಕ್ಕುಗಳೊಂದಿಗೆ ನಡೆಯುವ ಈ ಹೋರಾಟದಲ್ಲಿ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇ ಕೆಂದು ಸಂಘಟನೆಗಳು ಕರೆ ನೀಡಿವೆ.