ನಿವೃತ್ತ ಮೃಗಸಂರಕ್ಷಣಾ ಇಲಾಖೆ ಸಿಬ್ಬಂದಿ ನೇಣು ಬಿಗಿದು ಸಾವು

ಕಾಸರಗೋಡು: ಒಂದು ವರ್ಷ ಹಿಂದೆ ಸೇವೆಯಿಂದ ನಿವೃತ್ತಿಗೊಂಡ ಮೃಗಸಂರಕ್ಷಣಾ ಇಲಾಖೆ ಸಿಬ್ಬಂದಿ ಮನೆಯೊಳಗೆ ನೇಣು ಬಿಗಿದು ಸಾವಿಗೀ ಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕೂಡ್ಲು ಪಾರೆಕಟ್ಟೆ ಮುಕುಂದ  ನಿವಾಸಿ ಬಿ. ಬಾಬುರಾಜ್ (57) ಮೃತಪಟ್ಟ ವ್ಯಕ್ತಿ. ನಿನ್ನೆ ಬೆಳಿಗ್ಗೆ 10 ಗಂಟೆಗೆ ಇವರು ಮನೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಕೂಡಲೇ ಕೆಳಗಿಳಿಸಿ ಇಂದಿರಾನಗರದ ಖಾಸಗಿ ಆಸ್ಪತ್ರೆಗೆ ತಲುಪಿಸಿ ದಾಖಲಿಸಲಾಗಿತ್ತು. ಆದರೆ  ಇಂದು ಮುಂಜಾನೆ 1 ಗಂಟೆಗೆ ಸಾವು ಸಂಭವಿಸಿದೆ. ಮೃತದೇಹವನ್ನು  ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಗೆ …

ವಾಹನ ಅಪಘಾತ: ಯುವಕನ ಸಾವಿಗೆ ಕಾರಣ ಆಂತರಿಕ ಅವಯವದಲ್ಲಿ ರಕ್ತಸ್ರಾವ-ಮರಣೋತ್ತರ ಪರೀಕ್ಷಾ ವರದಿ

ಕುಂಬಳೆ: ವಾಹನ ಅಪಘಾತದಲ್ಲಿ ಗಾಯಗೊಂಡಿದ್ದ ಯುವಕನ ಸಾವಿಗೆ ಕಾರಣ ಆಂತರಿಕ ಅವಯವದಲ್ಲಿ ಉಂಟಾದ ರಕ್ತಸ್ರಾವವಾಗಿದೆಯೆಂದು ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ  ನಡೆಸಿದ ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿಯಲ್ಲಿ ತಿಳಿಸಲಾಗಿದೆ. ಆರಿಕ್ಕಾಡಿ ಪಾರೆಸ್ಥಾನದ ಕೃಷ್ಣ ಬೆಳ್ಚಪ್ಪಾಡರ ಪುತ್ರ ಎಂ. ಹರೀಶ್ ಕುಮಾರ್ (37) ಮೊನ್ನೆ ರಾತ್ರಿ 11 ಗಂಟೆಗೆ ಪೆರುವಾಡ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ವಾಹನ ಅಪಘಾತದಲ್ಲಿ ಗಾಯಗೊಂಡಿದ್ದರು. ಇವರು ಸಂಚರಿಸಿದ ಸ್ಕೂಟರ್ ಹಾಗೂ ಕಾರು ಢಿಕ್ಕಿ ಹೊಡೆದು ಅಪಘಾತವುಂಟಾಗಿತ್ತು. ಇದರಲ್ಲಿ  ಗಾಯಗೊಂಡ ಹರೀಶ್ ಕುಮಾ ರ್‌ರನ್ನು ಕುಂಬಳೆ …

ಅನಧಿಕೃತ ಹೊಯ್ಗೆ ಸಾಗಾಟ ರಿಕ್ಷಾ ಪಲ್ಟಿ: ಚಾಲಕ ಪರಾರಿ

ಉಪ್ಪಳ: ಅನಧಿಕೃತವಾಗಿ ಹೊಯ್ಗೆ ಸಾಗಿಸುತ್ತಿದ್ದ ಆಟೋ ರಿಕ್ಷಾ ಅಪಘಾತಕ್ಕೀಡಾಗಿದ್ದು, ಈ ವೇಳೆ ಚಾಲಕ ಓಡಿ ಪರಾರಿಯಾಗಿದ್ದಾನೆ. ಆಟೋ ರಿಕ್ಷಾವನ್ನು ಮಂಜೇಶ್ವರ ಪೊಲೀಸರು ಕಸ್ಟಡಿಗೆ ತೆಗೆದು ಚಾಲಕನ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ. ನಿನ್ನೆ ಅಪರಾಹ್ನ 2.45ರ ವೇಳೆ ಉಪ್ಪಳ ಹಿದಾಯತ್ ಬಜಾರ್‌ನಲ್ಲಿ ಘಟನೆ ನಡೆದಿದೆ. ಉಪ್ಪಳ ಗೇಟ್‌ನಿಂದ ಉಪ್ಪಳ ಭಾಗಕ್ಕೆ ತೆರಳುತ್ತಿದ್ದ ರಿಕ್ಷಾ ಸರ್ವೀಸ್ ರಸ್ತೆಯಲ್ಲಿ ಮಗುಚಿ ಬಿದ್ದಿದೆ. ಈ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಪೊಲೀಸರು ಗಸ್ತು ನಡೆಸುತ್ತಿದ್ದರು. ರಿಕ್ಷಾ ಅಪಘಾತಕ್ಕೀಡಾದ ವಿಷಯ ತಿಳಿದು ಪೊಲೀಸರು ಅಲ್ಲ್ಲಿಗೆ ತಲುಪಿದಾಗ …

49 ದಿನ ಪ್ರಾಯದ ಮಗುವಿನ ಸಾವು ಕೊಲೆಯೆಂದು ಸಾಬೀತು: ತಾಯಿ ಸೆರೆ

ತಳಿಪರಂಬ: ಕುರುಮಾತೂರ್ ಪೋಕುಂಡ್ ಡಯರಿ ಜುಮಾ ಮಸೀದಿ ಸಮೀಪದ 49 ದಿನ ಪ್ರಾಯದ ಮಗುವಿನ ಸಾವು ಕೊಲೆ ಕೃತ್ಯವೆಂದು ದೃಢೀಕರಣಗೊಂಡಿದೆ. ಈ ವಿಷಯದಲ್ಲಿ  ಕಸ್ಟಡಿಗೆ ತೆಗೆದು ವಿಚಾರಣೆ ನಡೆಸಿ ನಿನ್ನೆ ಸಂಜೆ ತಾಯಿ ಮುಬಶಿರಳನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸೋಮವಾರ ಬೆಳಿಗ್ಗೆ 9.30ರ ವೇಳೆ ಜಾಬಿರ್‌ರ ಪುತ್ರ ಅಮೀಶ್ ಅಲನ್ ಜಾಬಿರ್‌ನನ್ನು ಬಾವಿಯಲ್ಲಿ ಪತ್ತೆ ಮಾಡಲಾಗಿತ್ತು. ಮಗುವನ್ನು ಸ್ನಾನ ಮಾಡಿಸುತ್ತಿರುವಾಗ ಆಕಸ್ಮಾತ್ ಬಾವಿಗೆ ಬಿದ್ದಿರುವುದಾಗಿ ತಾಯಿ ತಿಳಿಸಿದ್ದಳು. ಸ್ಥಳೀಯನಾದ ಪಿ.ಪಿ. ನಾಸರ್ ಎಂಬವರು 24 …

ಶಬರಿಮಲೆಗೆ ಕಾಲ್ನಡೆ ಪ್ರಯಾಣಗೈಯ್ಯುತ್ತಿದ್ದ ಅಯ್ಯಪ್ಪ ಭಕ್ತನಿಗೆ ಬೈಕ್ ಢಿಕ್ಕಿ ಹೊಡೆದು ಮೃತ್ಯು

ತಲಪಾಡಿ: ಕಾಲ್ನಡೆ ಮೂಲಕ  ಶಬರಿಮಲೆಗೆ ತೆರಳುತ್ತಿದ್ದ ಅಯ್ಯಪ್ಪ ಭಕ್ತರಿಗೆ ಅಪರಿಮಿತ ವೇಗದಿಂದ ಸಂಚರಿಸಿದ ಬೈಕ್ ಢಿಕ್ಕಿ ಹೊಡೆದು ಓರ್ವ ಮೃತಪಟ್ಟ ದಾರುಣ ಘಟನೆ ನಡೆದಿದೆ. ಅಪಘಾತದಲ್ಲಿ ಇಬ್ಬರಿಗೆ ಗಾಯವುಂಟಾಗಿದೆ. ಕುಂದಾಪುರದ ಅಯ್ಯಪ್ಪ ಶಿಬಿರದಿಂದ ಮಂದರ್ತಿ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರಕ್ಕಿರುವ ಕಾಲ್ನಡೆ ಪ್ರಯಾಣ ಮಧ್ಯೆ ಅಪಘಾತ ಸಂಭವಿಸಿದೆ. ಕೋಟೆಶ್ವರದ ಬಳಿ ಇರುವ ಕುಂಬ್ರಿ ನಿವಾಸಿ ಸುರೇಂದ್ರ ಮೊಗವೀರ (35) ಮೃತಪಟ್ಟ ವ್ಯಕ್ತಿ. ಗಾಯಗೊಂಡ ಇನ್ನಿಬ್ಬರನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. 15 ಅಯ್ಯಪ್ಪ ಭಕ್ತರು ಮಂದರ್ತಿ ಕ್ಷೇತ್ರದಿಂದ ನಡೆದು ಹೋಗುತ್ತಿದ್ದ ಮಧ್ಯೆ …

ನಿರ್ಜನ ಹಿತ್ತಿಲಲ್ಲಿ ಐಸ್‌ಕ್ರೀಂ ಬಾಂಬ್ ಪತ್ತೆ : ತೀವ್ರ ತನಿಖೆ ಆರಂಭ

ಕಾಸರಗೋಡು:    ನಿರ್ಜನ ಹಿತ್ತಿ ಲಲ್ಲಿ ಉಪೇಕ್ಷಿತ ಸ್ಥಿತಿಯಲ್ಲಿ ಐಸ್‌ಕ್ರೀಂ ಬಾಂಬ್ ಪತ್ತೆಯಾಗಿ ಅದು ಆ ಪರಿಸರದಲ್ಲಿ ಭಾರೀ ಆತಂಕದ ವಾತಾ ವರಣ ಸೃಷ್ಟಿಸಿದ ಘಟನೆ ನಡೆದಿದೆ. ನೀಲೇಶ್ವರ ಸಮೀಪದ ಚಾಯೋಂ ನರಿಮಾಳದ ಸಾಬು ಆಂಟನಿ ಎಂಬವರ ಹಿತ್ತಿಲಲ್ಲಿ ನಿನ್ನೆ ಸಂಜೆ ಈ ಬಾಂಬ್ ಪತ್ತೆಯಾಗಿದೆ. ಅದು ಪತ್ತೆಯಾದಾಕ್ಷಣ  ಹಿತ್ತಿಲ ಮಾಲಕರು ನೀಲೇಶ್ವರ ಪೊಲೀ ಸರಿಗೆ ಮಾಹಿತಿ ನೀಡಿದ್ದು, ಅದರಂತೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ಆರಂಭಿಸಿದ್ದಾರೆ. ಮಾತ್ರವಲ್ಲ ಕಾಸರ ಗೋಡಿನಿಂದ ಬಾಂಬ್ ನಿಷ್ಕ್ರಿಯದಳ, ಫೋರೆನ್ಸಿಕ್ ತಜ್ಞರು ಹಾಗೂ ಶ್ವಾನದಳ …

ಬಾಲಕಿಗೆ ಮದ್ಯ ನೀಡಿ ಕಿರುಕುಳ ತಾಯಿ, ಎರಡನೇ ತಂದೆಗೆ180 ವರ್ಷ ಕಠಿಣ ಸಜೆ, 11,75,000 ರೂ. ದಂಡ ಶಿಕ್ಷೆ

ಮಲಪ್ಪುರಂ: ಪ್ರಾಯಪೂರ್ತಿ ಯಾಗದ ಬಾಲಕಿಗೆ ಮದ್ಯ ಕುಡಿಸಿ ಕಿರುಕುಳ ನೀಡಿದ ಪ್ರಕರಣದಲ್ಲಿ ತಾಯಿ ಹಾಗೂ ಎರಡನೇ ತಂದೆಗೆ 180 ವರ್ಷ ಕಠಿಣ ಸಜೆ ಹಾಗೂ 11,75,000 ರೂಪಾಯಿ ದಂಡ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.ತಿರುವನಂತಪುರ ನಿವಾಸಿಯಾದ ತಾಯಿ ಹಾಗೂ ಪಾಲಕ್ಕಾಡ್ ನಿವಾಸಿಯಾದ ಯುವಕನಿಗೆ ಮಂಜೇರಿ ಫಾಸ್ಟ್ ಟ್ರಾಕ್ ನ್ಯಾಯಾಲಯಈ ಶಿಕ್ಷೆ ವಿಧಿಸಿದೆ.2019ರಿಂದ 2021ರ ವರೆಗೆ ಎರಡು ವರ್ಷ ಕಾಲ ಬಾಲಕಿಗೆ ಕಿರುಕುಳ ನೀಡಿರುವುದಾಗಿ ಪೊಲೀಸರು ದಾಖಲಿಸಿಕೊಂಡ ಪ್ರಕರಣದಲ್ಲಿ ತಿಳಿಸಲಾಗಿದೆ. ಪ್ರಾಯಪೂರ್ತಿಯಾಗದ ಬಾಲಕಿಗೆ ಕಿರುಕುಳ, ನಗ್ನತೆ ಪ್ರದರ್ಶನ, ಮದ್ಯನೀಡಿ …

ಕಾರು ತಡೆದು ನಿಲ್ಲಿಸಿ 3,37,500 ರೂ. ಎಗರಿಸಿದ ಪ್ರಕರಣ: ಪೊಲೀಸರ ಬಂಧನ

ಕಲ್ಪೆಟ್ಟ: ಸಾರ್ವಜನಿಕರಿಗೆ ಸಂರಕ್ಷಣೆ ಒದಗಿಸಬೇಕಾದ ಪೊಲೀಸರೇ ಪ್ರಯಾಣಿಕರನ್ನು ತಡೆದು ನಿಲ್ಲಿಸಿ ಹಣ ಎಗರಿಸಿದ ಘಟನೆ ಕಲ್ಪೆಟ್ಟದಲ್ಲಿ ನಡೆದಿದೆ. ಈ ಸಂಬಂಧ ವೈತ್ತಿರಿ ಪೊಲೀಸ್ ಠಾಣೆಯ ಸಿವಿಲ್ ಪೊಲೀಸ್ ಆಫೀಸರ್‌ಗಳಾದ ಕಲ್ಪೆಟ್ಟದ ಅಬ್ದುಲ್ ಶುಕೂರ್ (34), ಕೋಟವಯಲ್‌ನ ಅಬ್ದುಲ್ ಮಜೀದ್ (44), ಚಾಲಕ ಚಂಗುತ್ತರದ ಬಿನೀಶ್ (44) ಎಂಬಿವರನ್ನು ಕ್ರೈಂಬ್ರಾಂಚ್ ಬಂಧಿಸಿದೆ. ಕಳೆದ ಸೆ.೧೫ರಂದು ಕಾರು ಪ್ರಯಾಣಿಕರನ್ನು ತಡೆದು ನಿಲ್ಲಿಸಿ ಈ ಮೂವರು 3,37,500 ರೂ. ಎಗರಿಸಿರುವುದಾಗಿ ದೂರಲಾಗಿದೆ.  ಕಾರಿನಲ್ಲಿ ಹಣ ಸಾಗಿಸಲಾಗುತ್ತಿದೆಯೆಂಬ ಮಾಹಿತಿಯಂತೆ ವೈತ್ತಿರಿ ಪೊಲೀಸ್ ಇನ್‌ಸ್ಪೆಕ್ಟರ್ …

ತೆಂಗಿನ ಮರದಲ್ಲಿ ಸಿಲುಕಿಕೊಂಡ ಕಾರ್ಮಿಕ: ರಕ್ಷಿಸಿದ ಅಗ್ನಿಶಾಮಕದಳ

ಕಾಸರಗೋಡು: ತೆಂಗಿನಕಾಯಿ ಕೊಯ್ಯಲೆಂದು ಯಂತ್ರದ ಸಹಾಯ ದಿಂದ ಮೇಲೇರಿದ ಕಾರ್ಮಿಕ ಅಲ್ಲಿಂದ ಇಳಿಯಲು ಸಾಧ್ಯವಾಗದೆ  ಅಲ್ಲೇ ಸಿಲುಕಿಕೊಂಡಿದ್ದು ನಂತರ ಅಗ್ನಿಶಾಮಕ ದಳ ಆಗಮಿಸಿ ಅವರನ್ನು ಮರದಿಂದ ಸುರಕ್ಷಿತವಾಗಿ ಕೆಳಗಿಳಿಸಿ  ರಕ್ಷಿಸಿದ ಘಟನೆ ನಡೆದಿದೆ. ಉದುಮ ಸಮೀಪದ ಕುಳಕುನ್ನಿನ ಎ.ಜೆ. ರಾಜು (60) ಎಂಬವರು ನಿನ್ನೆ ಕುಳಕುನ್ನಿನ ಫೌಸಿಯಾ ಉಸ್ಮಾನ್ ಎಂಬವರ ಹಿತ್ತಿಲಲ್ಲಿರುವ  ತೆಂಗಿನ ಮರಕ್ಕೆ  ಯಂತ್ರದ ಸಹಾಯದಿಂದ ಹತ್ತಿ ದ್ದರು.  ಆ ವೇಳೆ ಯಂತ್ರ ದಿಢೀರ ಕೈಕೊಟ್ಟಿದೆ. ಇದರಿಂದ ಮರದಿಂದ ಕೆಳಕ್ಕಿಳಿಯಲು ಸಾಧ್ಯವಾಗದೆ ಅವರು ಅಲ್ಲೇ ಸಿಲುಕಿಕೊಂಡರು. …

ಶೋಚನೀಯಾವಸ್ಥೆಯಲ್ಲಿರುವ ಧರ್ಮತ್ತಡ್ಕ-ಕನಿಯಾಲ ರಸ್ತೆ: ಅಪಘಾತ ಭೀತಿ

ಉಪ್ಪಳ: ಧರ್ಮತಡ್ಕ-ಕನಿಯಾಲ ಲೋಕೋಪಯೋಗಿ ಇಲಾಖೆ ರಸ್ತೆ ಹೊಂಡಗಳಿAದ ಹಾಗೂ ತಿರುವುಗಳಿಂದ ಕೂಡಿದ್ದು ಅಪಘಾತಕ್ಕೆ ಕಾರಣವಾಗುತ್ತಿರುವು ದಾಗಿ ದೂರಲಾಗಿದೆ. ಈ ರಸ್ತೆ ಉದ್ದಕ್ಕೂ ಅಲ್ಲಲ್ಲಿ ಹೊಂಡ ಸೃಷ್ಟಿಯಾಗಿ ವಾಹನಗಳ ಸಂಚಾರ ಹಾಗೂ ಸೈಡು ನೀಡಲು ಆತಂಕದ ಸ್ಥಿತಿ ಉಂಟಾಗಿದೆ. ಕನಿಯಾಲ ಕಡೆಗೆ ತೆರಳುವ ವೇಳೆ ಭಾರೀ ಇಳಿಜಾರು ಪ್ರದೇಶವಾಗಿರುದರಿಂದ ಅಪಘಾತ ಭೀತಿ ಹೆಚ್ಚಿದೆ. ಈ ರಸ್ತೆಯಲ್ಲಿ ಈ ಹಿಂದೆ ಹಲವಾರು ಭಾರೀ ಕೆಂಪು ಕಲ್ಲು ಸಾಗಾಟದ ಲಾರಿ ನಿಯಂತ್ರಣ ತಪ್ಪಿ ಮಗುಚಿ ಬಿದ್ದ ಘಟನೆ ನಡೆದಿದೆ. ಧರ್ಮ ತ್ತಡ್ಕ-ಕನಿಯಾಲ …