ಆಕ್ಸಿಲ್ ತುಂಡಾಗಿ ಮಗುಚಿದ ಮೀನು ಹೇರಿದ ಪಿಕಪ್: ಹೆದ್ದಾರಿಪೂರ್ತಿ ಮೀನು ಚೆಲ್ಲಾಪಿಲ್ಲಿ

ಮಂಜೇಶ್ವರ: ಮೀನು ಸಾಗಿಸುತ್ತಿದ್ದ ಪಿಕಪ್ ವಾಹನದ ಆಕ್ಸಿಲ್ ತುಂಡಾಗಿ ಚಕ್ರ ಬೇರ್ಪಟ್ಟು  ಸರ್ವೀಸ್ ರಸ್ತೆಗೆ ಬಿದ್ದ ಘಟನೆ ನಿನ್ನೆ ಮಧ್ಯಾಹ್ನ ಕುಂಜತ್ತೂರು ಹೆದ್ದಾರಿಯಲ್ಲಿ ಸಂಭವಿಸಿದೆ. ಆದರೆ ಅದೃಷ್ಟವಶಾತ್ ಅಪಾಯ ಸಂಭವಿಸಲಿಲ್ಲ. ಕಾಸರಗೋಡು ಭಾಗದಿಂದ ಮಂಗಳೂರು ಕಡೆಗೆ ಮೀನು ಹೇರಿಕೊಂಡು ತೆರಳುತ್ತಿದ್ದ ಪಿಕಪ್ ಕುಂಜತ್ತೂರು ಹೆದ್ದಾರಿಯಲ್ಲಿ ಸಂಚರಿಸುತ್ತಿರುವಾಗ ಅದರ ಹಿಂಬದಿಯ ಆಕ್ಸಿಲ್ ತುಂಡಾಗಿ ಚಕ್ರ ಬೇರ್ಪಟ್ಟಿದ್ದು ನಿಯಂತ್ರಣ ತಪ್ಪಿದ ವಾಹನ ಹೆದ್ದಾರಿ ಮಧ್ಯೆ ಮಗುಚಿಬಿದ್ದಿದೆ. ಈ ವೇಳೆ  ತುಂಡಾದ ಆಕ್ಸಿಲ್ ಚಕ್ರ ಸಹಿತ ಹೆದ್ದಾರಿಯ ತಡೆಗೋಡೆಯಿಂದ ಮೇಲೆ ಹಾರಿ …

ಶಬರಿಮಲೆ ದೇಗುಲದ ಚಿನ್ನ ಕಳವು: ಅಂತಾರಾಷ್ಟ್ರೀಯ ಕಳ್ಳಸಾಗಾಟಗಾರರ ಕೈವಾಡ ಶಂಕೆ ವ್ಯಕ್ತಪಡಿಸಿದ ಹೈಕೋರ್ಟ್

ಕೊಚ್ಚಿ: ಶಬರಿಮಲೆ ದೇಗುಲದ ಗರ್ಭಗುಡಿ ಬಾಗಿಲು ಮತ್ತು ಅದರ ದ್ವಾರಪಾಲಕ ಮೂರ್ತಿಗಳ ದುರಸ್ತಿ ಕೆಲಸದ ಹಿಂದೆ ಅಮೂಲ್ಯವಾದ ಪ್ರಾಚೀನ ವಸ್ತುಗಳನ್ನು ಸಾಗಿಸುವ ಅಂತಾರಾಷ್ಟ್ರೀಯ ಕಳ್ಳಸಾಗಾಟದಾರರ ಕೈವಾಡವಿದೆಯೆಂಬ ಶಂಕೆಯನ್ನು ಕೇರಳ ಹೈಕೋರ್ಟ್‌ನ ವಿಭಾಗೀಯ ಪೀಠ ವ್ಯಕ್ತಪಡಿಸಿದೆ. ಭಾರತೀಯ ವಂಶಜನಾಗಿರುವ ಅಮೆರಿಕಾದ ಪ್ರಜೆ ಹಾಗೂ ಅಂತಾರಾಷ್ಟ್ರೀಯ ವಿಗ್ರಹ ಮತ್ತು ಪ್ರಾಚೀನ ವಸ್ತುಗಳ ಕಳ್ಳಸಾಗಾಟದಾರ ಸುಭಾಶ್ ಕಪೂರ್ ನಡೆಸುತ್ತಿರುವರ  ರೀತಿಯ ಆಪರೇಶನ್ ಕಾರ್ಯಾ ಚರಣೆಯ ಸಮಾನತೆ ಶಬರಿಮಲೆ ದೇಗುಲದಲ್ಲಿ ನಡೆದ ಕಳವು ಪ್ರಕರಣವೂ ಹೊಂದಿದೆಯೆಂದು ಹೈಕೋರ್ಟ್ ಹೇಳಿದೆ. ಮಾತ್ರವಲ್ಲ ಶಬರಿಮಲೆ ದೇಗುಲದ …

ಚಿಕ್ಕಮಗಳೂರಿನಲ್ಲಿ ಸ್ಕೂಟರ್‌ಗೆ ಕಾರು ಢಿಕ್ಕಿ: ಇಬ್ಬರು ಕಣ್ಣೂರು ನಿವಾಸಿಗಳು ಮೃತ್ಯು

ಕಾಸರಗೋಡು: ಕರ್ನಾಟಕದ ಚಿಕ್ಕಮಗಳೂರಿನಲ್ಲಿ ಸ್ಕೂಟರ್‌ಗೆ ಕಾರು ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಇಬ್ಬರು ಕಣ್ಣೂರು ನಿವಾಸಿಗಳು ಮೃತಪಟ್ಟಿರುವುದಾಗಿ ವರದಿಯಾಗಿದೆ. ಕಣ್ಣೂರು ಅಂಜರಕಂಡಿ ನಿವಾಸಿಗಳಾದ ವೆಣ್ಮಣಲ್ ಕುನ್ನುಮ್ಮಲ್ ಜಬ್ಬಾರ್‌ರ ಪುತ್ರ ಶಹೀರ್ (22), ತೇರಾಂಕಂಡಿ ಅಸೀಸ್‌ರ ಪುತ್ರ ಅನಸ್ (22) ಎಂಬಿವರು  ಮೃತಪಟ್ಟವರಾಗಿದ್ದಾರೆ. ನಿನ್ನೆ ಸಂಜೆ ಚಿಕ್ಕಮಗಳೂರು ಕಡೂರು ಎಂಬಲ್ಲಿ ಅಪಘಾತವುಂಟಾಗಿದೆ.  ಅನಸ್ ಅಪಘಾತ ಸ್ಥಳದಲ್ಲೂ ಶಹೀರ್ ಮಂಗಳೂರು ಆಸ್ಪತ್ರೆಗಿರುವ ದಾರಿ ಮಧ್ಯೆ ಮೃತಪಟ್ಟಿದ್ದಾರೆ. ಎರಡು ಸ್ಕೂಟರ್ ಗಳಲ್ಲಾಗಿ ನಾಲ್ಕು ಮಂದಿ ಪ್ರವಾಸಕ್ಕೆಂದು  ತೆರಳಿದ್ದರೆನ್ನಲಾಗಿದೆ. ಮೈಸೂರಿನಲ್ಲಿ ಸಂದರ್ಶನ ನಡೆಸಿದ …

ಕುಂಬಳೆ ಪಂ.: ಐದು ವರ್ಷದ ಐಕ್ಯರಂಗದ ಸಾಧನೆ ಎಂದರೆ ಭ್ರಷ್ಟಾಚಾರ, ದುರ್ವಾಸನೆಯಿಂದ ಪೇಟೆಗೆ ಪ್ರವೇಶಿಸಲು ಸಾಧ್ಯವಾಗದಿರುವುದು-ಸಿ.ಎ. ಸುಬೈರ್

ಕುಂಬಳೆ: ಐಕ್ಯರಂಗದ 5 ವರ್ಷದ ಆಡಳಿತದಿಂದ ಸ್ಥಳೀಯರಿಗೆ ಕುಂಬಳೆ ಪೇಟೆಗೆ ಪ್ರವೇಶಿಸಲು ಸಾಧ್ಯವಾಗದ ಸ್ಥಿತಿ ಉಂಟಾಗಿದೆಯೆಂದು ಸಿಪಿಎಂ ಏರಿಯಾ  ಕಾರ್ಯದರ್ಶಿ ಸಿ.ಎ. ಸುಬೈರ್ ಆರೋಪಿಸಿದರು. ಕುಂಬಳೆ ಪೇಟೆಯಲ್ಲಿ ನಾಲ್ಕು  ಬಸ್ ತಂಗುದಾಣ ಕೇಂದ್ರಗಳನ್ನು ಸ್ಥಾಪಿಸಿ 39 ಲಕ್ಷ ರೂ.ಸ್ವಂತ ಜೇಬಿಗಿಳಿಸಿರುವುದಕ್ಕೆ ಪುರಾವೆ ಪೇಟೆಯ ಹೃದಯ ಭಾಗದಲ್ಲಿ ಮೂಕ ಸಾಕ್ಷಿಯಾಗಿ ನಿಂತಿದೆ. ಸಾವಿರ ಸ್ಕ್ವಾರ್ ಫೀಟ್ ವಿಸ್ತೀರ್ಣವಿರುವ ‘ಟೇಕ್ ಎ ಬ್ರೇಕ್’ನ ಹೆಸರಲ್ಲಿ 39 ಲಕ್ಷ ಗುಳುಂಕರಿಸಲಾಗಿದೆ. ಈ ಕಟ್ಟಡದಲ್ಲಿ ನೀರಿಲ್ಲ, ವಿದ್ಯುತ್ ಇಲ್ಲ. ಈ ಎರಡೂ ಕಟ್ಟಡಗಳ …

ಹಳಸಿದ ಆಹಾರ ವಿತರಣೆ ಆರೋಪ : ರೈಲುಗಳಲ್ಲಿ ಅಧಿಕಾರಿಗಳಿಂದ ತಪಾಸಣೆ

ಕಾಸರಗೋಡು: ರೈಲುಗಳಲ್ಲಿ ಹಳಸಿದ ಆಹಾರ ವಸ್ತುಗಳನ್ನು ವಿತರಿಸಲಾಗುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಆರ್‌ಪಿಎಫ್, ರೈಲ್ವೇ ಪೊಲೀಸ್ ಸಂಯುಕ್ತವಾಗಿ ರೈಲುಗಳಲ್ಲಿ ತಪಾಸಣೆ ಆರಂಭಿಸಿದೆ. ಕೊಂಕಣ ಮೂಲಕ ಬರುವ ರಾಜಧಾನಿ ಎಕ್ಸ್‌ಪ್ರೆಸ್ ಸಹಿತ ರೈಲುಗಳಲ್ಲಿ ನಿನ್ನೆ ತಪಾಸಣೆ ನಡೆಸಲಾಗಿದೆ. ಕ್ಯಾಂಟೀನ್‌ಗಳಲ್ಲೂ ತಪಾಸಣೆ ನಡೆಸಲಾಗುತ್ತಿದೆ. ವಂದೇ ಭಾರತ್ ರೈಲಿಗೆ ಬೆಳಿಗ್ಗೆ ಆಹಾರ ಪೂರೈಸುವ ಐಆರ್‌ಸಿಟಿಸಿ ಕ್ಯಾಂಟೀನ್ ಸಹಿತ ಸಂಸ್ಥೆಗಳಲ್ಲೂ ತಪಾಸಣೆ ನಡೆಸಲಾಗಿದೆ. ಆದರೆ ಹಳಸಿದ ಆಹಾರ ಪತ್ತೆಹಚ್ಚಲಾಗಲಿಲ್ಲವೆಂದು ಅಧಿಕಾರಿಗಳು ತಿಳಿಸಿದ್ದಾರೆ. ರೈಲ್ವೇ ಪೊಲೀಸ್ ಎಸ್.ಎಚ್.ಒ. ಎಂ. ರೆಜಿಕುಮಾರ್, ಆರ್‌ಪಿಎಫ್ ಎಸ್ ವಿನೋದ್, …

ನಡೆದಾಡಲಾಗದ ಯುವಕನಿಗೆ ವಿದ್ಯುತ್‌ಗಾಲಿ ಕುರ್ಚಿ ನೀಡಿ ನೆರವಾದ ಜಿಲ್ಲಾ ಪಂಚಾಯತ್:47 ವರ್ಷಗಳಿಂದ ಮನೆಯ ಹೊರಗಿನ ಪ್ರಕೃತಿ ಸೌಂದರ್ಯ ವೀಕ್ಷಣೆ ಭಾಗ್ಯ ಪಡೆದ ಹನೀಫ

ಕುಂಬಳೆ: ನಡೆದಾಡಲಾಗದೆ 47 ವರ್ಷಗಳ ಕಾಲ ಮನೆಯೊಳಗೆ  ಜೀವನ ಸಾಗಿಸಬೇಕಾಗಿದ್ದ ಯುವಕನಿಗೆ ಜಿಲ್ಲಾ ಪಂಚಾಯತ್ ವಿದ್ಯುತ್ ಗಾಲಿ ಕುರ್ಚಿ ನೀಡಿದ್ದು, ಇದರಿಂದ ಮನೆಯ ಹೊರಗಿನ ಪ್ರಕೃತಿ ಸೌಂದರ್ಯ ವೀಕ್ಷಿಸುವ ಭಾಗ್ಯ ಅವರಿಗೆ ಲಭಿಸಿದೆ. ಕುಂಬಳೆ ಕೊಯಿಪ್ಪಾಡಿ ಕೋಟಿ ಹೌಸ್‌ನ ಅಬೂಬಕರ್‌ರ ಪುತ್ರ ಹನೀಫ (49) ಇದೀಗ ಗಾಲಿ ಕುರ್ಚಿ ಮೂಲಕ ಮನೆಯ ಹೊರಗೆ ಸಂಚರಿಸುತ್ತಿದ್ದಾರೆ. ಜನಿಸಿ ಎರಡು ವರ್ಷವಾಗುತ್ತಲೇ ಹನೀಫರಿಗೆ ಜ್ವರ ಬಾಧಿಸಿತ್ತೆನ್ನಲಾಗಿದೆ. ಅನಂತರ ಅವರು ನಡೆದಾಡುವ ಶಕ್ತಿ ಕಳೆದುಕೊಂಡಿದ್ದಾರೆ. ಇದಕ್ಕಿರುವ ಚಿಕಿತ್ಸೆ ನಡೆಸಿದರೂ   ಫಲಕಾರಿಯಾಗಲಿಲ್ಲ. ಇದರಿಂದ  …

ಮತದಾರ ಪಟ್ಟಿ: ವಿಶೇಷ ತೀವ್ರ ಪರಿಷ್ಕರಣೆ ವಿರುದ್ಧ ನ್ಯಾಯಾಲಯ ಸಮೀಪಿಸಲು ಸರ್ವಪಕ್ಷ ಸಭೆ ತೀರ್ಮಾನ; ವಿರೋಧಿಸಿದ ಬಿಜೆಪಿ

ತಿರುವನಂತಪುರ: ಮತದಾರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್.ಐ.ಆರ್) ಕ್ರಮವನ್ನು ಪ್ರಶ್ನಿಸಿ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲು ಪಿಣರಾಯಿ ವಿಜಯನ್‌ರ ಅಧ್ಯಕ್ಷತೆಯಲ್ಲಿ ನಿನ್ನೆ ನಡೆದ ಸರ್ವಪಕ್ಷ ಸಭೆ ತೀರ್ಮಾನಿಸಿದೆ. ಪ್ರಸ್ತುತ ಸಭೆಯಲ್ಲಿ ಭಾಗವಹಿಸಿದ ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಹೊರತಾಗಿ ಸರ್ವಪಕ್ಷ ಸಭೆಯಲ್ಲಿ ಭಾಗವಹಿಸಿದ ಆಡಳಿತ ಮತ್ತು ವಿರೋಧ ಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ಇಂತಹ ಕ್ರಮವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಬೇಕೆಂದು ಸಭೆಯಲ್ಲಿ ಭಾಗವಹಿಸಿದ ವಿರೋಧ ಪಕ್ಷ ನಾಯಕ ವಿ.ಡಿ. ಸತೀಶನ್ …

ಮಂಜೇಶ್ವರ ಕಾನೂನು ಅಧ್ಯಯನ ಕೇಂದ್ರಕ್ಕೆ ಶಾಸಕರ ನಿಧಿ ಉಪಯೋಗಿಸಿ ನಿರ್ಮಿಸಿದ ಕಟ್ಟಡ ಉದ್ಘಾಟನೆ

ಮಂಜೇಶ್ವರ: ಕಣ್ಣೂರು ವಿವಿಯ ಮಂಜೇಶ್ವರ ಕ್ಯಾಂಪಸ್‌ನಲ್ಲಿರುವ  ಸ್ಕೂಲ್ ಆಫ್  ಸ್ಟಡೀಸ್‌ಗಾಗಿ ನಿರ್ಮಿಸಿದ ಕಟ್ಟಡವನ್ನು ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ಉದ್ಘಾಟಿಸಿದರು.ಶಾಸಕರ ವಿಧಾನಸಭಾ ಮಂಡಲ ಆಸ್ತಿ ಅಭಿವೃದ್ಧಿ ಸ್ಕೀಂನಲ್ಲಿ ಒಳಪಡಿಸಿ ೫೧ ಲಕ್ಷ ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಿಸಲಾಗಿದೆ. ಮೂರು ವರ್ಷದ ಎಲ್‌ಎಲ್‌ಬಿ, ಎಲ್ ಎಲ್‌ಎಂ ಎಂಬೀ ಕೋರ್ಸ್‌ಗಳಿಗೆ ೧೦೦ರಷ್ಟು ವಿದ್ಯಾರ್ಥಿಗಳು ಅಧ್ಯಯನ ನಡೆಸುತ್ತಿರುವ ಜಿಲ್ಲೆಯ ಮೊದಲ ಕಾನೂನು ತರಬೇತಿ ಕೇಂದ್ರವಾಗಿದೆ ಇದು.  ಈ ಸಂಸ್ಥೆಯ ಅಭಿವೃದ್ಧಿಗೆ ಕೈಜೋಡಿಸುವುದಾಗಿ, ಅಗತ್ಯದ ಮೊತ್ತ ಲಭ್ಯಗೊಳಿಸುವುದಾಗಿ ಸಂಸದರು ಉದ್ಘಾಟನಾ ಭಾಷಣದಲ್ಲಿ ತಿಳಿಸಿದರು.ಶಾಸಕ ಎಕೆಎಂ …

ಸ್ಥಳೀಯಾಡಳಿತ ಚುನಾವಣೆ ಅಧ್ಯಕ್ಷರ ಮೀಸಲಾತಿ ನಿರ್ಣಯ

ಕಾಸರಗೋಡು:  ಸ್ಥಳೀಯಾಡಳಿತ ಸಂಸ್ಥೆಗಳಿಗಿರುವ ಸಾರ್ವತ್ರಿಕ ಚುನಾವಣೆಗಾಗಿ ತ್ರಿಸ್ತರ ಪಂಚಾಯತ್‌ಗಳ ಅಧ್ಯಕ್ಷರ ಮೀಸಲಾತಿ ಸಂಬಂಧಿಸಿ ತೀರ್ಮಾನ ಉಂಟಾಗಿದೆ. ರಾಜ್ಯ ಚುನಾವಣಾ ಆಯೋಗ ಈ ಬಗೆಗಿರುವ ವಿಜ್ಞಾಪನೆಯನ್ನು ಪ್ರಕಟಿಸಿದೆ. ಜಿಲ್ಲೆಯಲ್ಲಿ ೬ ಬ್ಲೋಕ್ ಪಂಚಾಯತ್‌ಗಳಲ್ಲಿ  2 ಪಂಚಾಯತ್‌ಗಳು ಮಹಿಳಾ ಮೀಸಲಾತಿ ಹಾಗೂ ಒಂದು ಬ್ಲೋಕ್ ಪರಿಶಿಷ್ಟ ಪಂಗಡ ಮಹಿಳಾ ಮೀಸಲಾತಿಯಾಗಿ ನಿಗದಿಪಡಿಸಲಾಗಿದೆ. ಪರಪ್ಪ ಪರಿಶಿಷ್ಟ ಪಂಗಡ ಮಹಿಳಾ ಮೀಸಲಾತಿ ಬ್ಲಾಕ್  ಪಂಚಾಯತ್ ಆಗಿದೆ. ಕಾಞಂಗಾಡ್, ನೀಲೇಶ್ವರ ಮಹಿಳಾ ಮೀಸಲಾತಿ ಬ್ಲೋಕ್ ಪಂಚಾಯತ್‌ಗಳಾಗಿಯೂ ನಿಗದಿಪಡಿಸಲಾಗಿದೆ. ಕಾಸರಗೋಡು ಜಿಲ್ಲೆಯ ಮೂರು ನಗರಸಭೆಗಳಲ್ಲಿ ಒಂದು …

ಎನ್ಯುಮರೇಶನ್ ಫಾರ್ಮ್ ಕನ್ನಡದಲ್ಲಿ ನೀಡಲು ಸಿಪಿಎಂ ಮನವಿ

ಮಂಜೇಶ್ವರ: ಕನ್ನಡ ಭಾಷೆಯಲ್ಲಿ ಎನ್ಯುಮರೇಶನ್ ಫಾರ್ಮ್ ನೀಡದಿರುವುದು ಕೇಂದ್ರ ಚುನಾವಣಾ ಆಯೋಗ ಭಾಷಾ ಅಲ್ಪಸಂಖ್ಯಾತರ ಮೇಲೆ ನಡೆಸಿದ ದ್ರೋಹವೆಂದು ಸಿಪಿಎಂ ಮಂಜೇಶ್ವರ ಏರಿಯಾ ಸಮಿತಿ ಆರೋಪಿಸಿದೆ. ಮಂಜೇಶ್ವರ ಮಂಡಲದಲ್ಲಿ ಮಲೆಯಾಳ ಭಾಷೆಯ ಫಾರ್ಮ್ ಭರ್ತಿಗೊಳಿಸಲು ಕನ್ನಡಿಗರಿಗೆ ಸಾಧ್ಯವಾಗುತ್ತಿಲ್ಲ. ಈಬಗ್ಗೆ ಜಿಲ್ಲಾ ಚುನಾವಣಾಧಿಕಾರಿಯಾದ ಜಿಲ್ಲಾಧಿಕಾರಿಗೆ ಹಾಗೂ ರಾಜ್ಯ ಚುನಾವಣಾ ಆಯೋಗಕ್ಕೆ ಸಿಪಿಎಂ ಮಂಜೇಶ್ವರ ಏರಿಯಾ ಸಮಿತಿ ಮನವಿ ನೀಡಿ ಕನ್ನಡಿಗರಿಗೆ ಕನ್ನಡದಲ್ಲಿ ಫಾರ್ಮ್ ನೀಡಬೇಕು ಮತ್ತು ೨೦೦೨ರ ಮತದಾರರ ಪಟ್ಟಿಯನ್ನು ವೆಬ್‌ಸೈಟ್‌ನಲ್ಲಿ ಕನ್ನಡದಲ್ಲಿ ಪ್ರಕಟಿಸುವಂತೆ ಒತ್ತಾಯಿಸಿದೆ.